Don't Miss!
- News ಅಚ್ಚೇದಿನಗಳಲ್ಲ-ದೌರ್ಭಾಗ್ಯದ ದಿನಗಳು: ಕಾಂಗ್ರೆಸ್ ಜಾಹೀರಾತು
- Finance bangalore royal challengers ತಂಡದಿಂದ ನಗರದ ಎರಡು ಕೆರೆಗಳ ಪುನರುಜ್ಜೀವನ
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೆಳೆಯನನ್ನು ಕ್ಷಮಿಸಿ, ನಾನೂ ಕ್ಷಮೆ ಕೇಳುತ್ತೇನೆ: ದಿವಾಕರ್
ಬಿಗ್ಬಾಸ್ ಮಾಜಿ ಸ್ಪರ್ಧಿ ಮತ್ತು ನಟ ದಿವಾಕರ್ ಫಿಲ್ಮೀಬೀಟ್ ಫೇಸ್ಬುಕ್ ಲೈವ್ ನಲ್ಲಿ ಇಂದು ಅಭಿಮಾನಿಗಳೊಂದಿಗೆ ಸಂವಾದ ನಡೆಸಿದರು.
ಕೊರೊನಾ, ವೈಯಕ್ತಿಕ ಜೀವನ, ಉದ್ಯೋಗ, ಸಿನಿಮಾ, ಗೆಳೆಯರು, ಬಿಗ್ಬಾಸ್ ಎಲ್ಲ ವಿಷಯಗಳ ಬಗ್ಗೆ ಮಾತನಾಡಿದ ದಿವಾಕರ್, ತಮ್ಮ ಆತ್ಮೀಯ ಗೆಳೆಯ ಚಂದನ್ ಶೆಟ್ಟಿ ಹಾಗೂ ಅವರ ಕೋಲುಮಂಡೆ ಹಾಡಿನ ವಿವಾದದ ಬಗ್ಗೆಯೂ ಮಾತನಾಡಿದರು.
ಆಪ್ತ ಗೆಳೆಯನ ಹುಟ್ಟುಹಬ್ಬಕ್ಕೆ ಭರ್ಜರಿ ಉಡುಗೊರೆ ನೀಡಲಿದ್ದಾರೆ ದಿವಾಕರ್
'ಕೋಲುಮಂಡೆ' ಹಾಡು ದಿವಾಕರ್ ಗೆ ಇಷ್ಟವಾಯಿತಂತೆ. ಆದರೆ ದೃಶ್ಯ ಸಂಯೋಜನೆಯಲ್ಲಿ ತುಸು ಎಡವಿದ್ದಾರೆ ಎಂದು ನೇರವಾಗಿ ಹೇಳಿದರು ದಿವಾಕರ್. ಜನಕ್ಕೂ ಅದು ಅಷ್ಟಾಗಿ ಇಷ್ಟವಾಗಿಲ್ಲವೆಂಬುದನ್ನು ಒಪ್ಪಿಕೊಂಡರು.
ಬೇಕೆಂದು ಆತ ಹೀಗೆ ಮಾಡಿಲ್ಲ: ದಿವಾಕರ್
'ಚಂದನ್ ಶೆಟ್ಟಿ ನನ್ನ ಆತ್ಮೀಯ ಗೆಳೆಯ ಆತನ ಮನಸ್ಸು ನಾನು ಬಲ್ಲೆ, ಉದ್ದೇಶಪೂರ್ವಕವಾಗಿ, ಯಾರಿಗೋ ಬೇಸರ ತರಿಸಲು ಆತ ಹೀಗೆ ಮಾಡುವವನಲ್ಲ. ಇದು ಅಚಾತುರ್ಯದಿಂದ ಆಗಿಬಿಟ್ಟಿದೆ. ಯಾರೂ ಸಹ ಉದ್ದೇಶಪೂರ್ವಕವಾಗಿ ಸುಡುವ ಬಿಸಿನೀರಲ್ಲಿ ಕೈ ಇಡುತ್ತಾರೆಯೇ' ಎಂದು ಪ್ರಶ್ನಿಸಿದರು ದಿವಾಕರ್.
ಚಂದನ್ ಶೆಟ್ಟಿಯನ್ನು ಕ್ಷಮಿಸಿಬಿಡಿ: ದಿವಾಕರ್
ಚಂದನ್ ಶೆಟ್ಟಿಯಿಂದ ಅರಿಯದೇ ತಪ್ಪು ಆಗಿಬಿಟ್ಟಿದೆ. ಆತನನ್ನು ಕ್ಷಮಿಸಿಬಿಡಿ. ಆತ ಒಳ್ಳೆಯ ಸಂಗೀತಗಾರ, ಸಾಕಷ್ಟು ಅದ್ಭುತವಾದ ಹಾಡುಗಳನ್ನು ಕೊಟ್ಟಿದ್ದಾರೆ. ಮುಂದೆಯೂ ಕೊಡಲಿದ್ದಾರೆ. ಕನ್ನಡದ ಹಾಡುಗಳು ವಿದೇಶಗಳಲ್ಲಿಯೂ ಗುನುಗುವಂತೆ ಮಾಡಿದ್ದಾನೆ ಆತ. ಹಾಗಾಗಿ ಆತನನ್ನು ಕ್ಷಮಿಸಿಬಿಡಿ ಆತನ ಪರವಾಗಿ ನಾನೂ ಸಹ ಕ್ಷಮೆ ಕೇಳುತ್ತೇನೆ ಎಂದರು ದಿವಾಕರ್.
ಶಿವಶರಣೆ ಶಂಕಮ್ಮ, ಮಲೆ ಮಾದಪ್ಪನಿಗೆ ಅಪಚಾರ: ಚಂದನ್ ಶೆಟ್ಟಿ ತಪ್ಪು ಮಾಡಿದ್ದು ಎಲ್ಲಿ?
ಚಂದನ್ ಶೆಟ್ಟಿ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ
ಆತ್ಮೀಯ ಗೆಳೆಯ ಚಂದನ್ ಶೆಟ್ಟಿ ಬಗ್ಗೆ ಸಾಕಷ್ಟು ಮಾತನಾಡಿದ ದಿವಾಕರ್, ನಾಳೆ (ಸೆಪ್ಟೆಂಬರ್ 17) ಚಂದನ್ ಶೆಟ್ಟಿ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆಯೊಂದನ್ನು ತಾವು ನೀಡುತ್ತಿರುವುದಾಗಿ ಹೇಳಿದರು. ಅಷ್ಟೇ ಅಲ್ಲದೆ, ತಮ್ಮ ಮೂರು ತಿಂಗಳು ಮುದ್ದು ಮಗಳಿಗೆ ಹೆಸರಿಟ್ಟಿದ್ದು ಸಹ ಚಂದನ್ ಎಂಬುದನ್ನು ಹೇಳಿದರು ದಿವಾಕರ್.
Recommended Video
ಕೋಲುಮಂಡೆ ಹಾಡು ವಿವಾದಕ್ಕೆ ಕಾರಣವಾಗಿತ್ತು
ಚಂದನ್ ಶೆಟ್ಟಿಯ ರ್ಯಾಪ್ ಹಾಡು 'ಕೋಲುಮಂಡೆ' ವಿವಾದ ಸೃಷ್ಟಿಸಿತ್ತು. ಹಾಡಿನಲ್ಲಿ ಶರಣೆ ಸಂಕವ್ವನಿಗೆ, ಮಲೆ ಮಾದೇಶ್ವರನಿಗೆ ಅಪಮಾನ ಎಸಗಲಾಗಿದೆ ಎಂದು ಹಲವರು ಆರೋಪಿಸಿದರು. ಈ ಬಗ್ಗೆ ಚಂದನ್ ಶೆಟ್ಟಿ ಕ್ಷಮೆ ಸಹ ಕೇಳಿದರು.
ವಿವಾದಕ್ಕೆ ಕಿಡಿ ಹಚ್ಚಿದ 'ಕೋಲುಮಂಡೆ': ಚಂದನ್ ಶೆಟ್ಟಿ ವಿರುದ್ಧ ಸಿಡಿದೆದ್ದ ಮಹದೇಶ್ವರನ ಭಕ್ತರು