ಕೊಡಗಿಗೆ ಸಹಾಯ ಹಸ್ತ ಚಾಚಿದ 'ಬಿಗ್ ಬಾಸ್' ದಿವಾಕರ್
Recommended Video

ಕೊಡಗಿನಲ್ಲಿ ಉಂಟಾದ ಭಾರಿ ಪ್ರವಾಹದಿಂದ ತತ್ತರಗೊಂಡಿರುವ ಜನರಿಗೆ ಕನ್ನಡ ಸಿನಿಮಾ ತಾರೆಯರು ಹಲವು ರೀತಿಯಲ್ಲಿ ನೆರವಾಗಿದ್ದಾರೆ. ಇದೀಗ, ಬಿಗ್ ಬಾಸ್ ಖ್ಯಾತಿಯ ದಿವಾಕರ್ ಅವರು ಮಡಿಕೇರಿಯ ಹಲವು ಹಳ್ಳಿಗಳಿಗೆ ಭೇಟಿ ನೀಡಿ ಸಂತ್ರಸ್ಥರಿಗೆ ಸಹಾಯ ಮಾಡಿದ್ದಾರೆ.
ಕೊಡಗಿನ ಹಲವು ಪ್ರದೇಶಗಳಿಗೆ ನೇರವಾಗಿ ಹೋಗಿ ತಮ್ಮಿಂದ ಆದ ಸಹಾಯವನ್ನ ಮಾಡಿದ್ದಾರೆ ಬಿಗ್ ಬಾಸ್ ದಿವಾಕರ್. ಅಲ್ಲಿನ ಜನರ ಜೊತೆ ಬೆರೆತು, ಅವರ ಕಷ್ಟವಲ್ಲ ಆಲಿಸಿ ಅವರಿಗೆ ಸಾಂತ್ವನ ಹೇಳಿದ್ದಾರೆ.

ನಿನ್ನೆ (ಆಗಸ್ಟ್ 23) ಯಶವಂತಪುರ ಎಪಿಎಂಸಿ ಯಾರ್ಡ್ನಲ್ಲಿ ಅಂಗಡಿಮುಂಗಟ್ಟುಗಳ ಮಾಲೀಕರು, ವ್ಯಾಪಾರಿಗಳು, ಕೂಲಿಯಾಳುಗಳನ್ನು ಭೇಟಿಯಾಗಿದ್ದ ದಿವಾಕರ್ ಕೊಡಗು ಸಂತ್ರಸ್ತರಿಗೆ ನೆರವಾಗುವಂತೆ ಕೋರಿದರು.
ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಸ್ಥಳೀಯರು ದಿವಾಕರ್ ಮೊರೆಗೆ ಓಗೊಟ್ಟು ತುಂಬು ಹೃದಯದಿಂದ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಸುಮಾರು ₹ 25 ಸಾವಿರಕ್ಕೂ ಹೆಚ್ಚು ಮೌಲ್ಯದ ದವಸ ಧಾನ್ಯಗಳನ್ನ ಸಂಗ್ರಹಿಸಿ ಸಂತ್ರಸ್ತರಿಗೆ ಖುದ್ದು ತಾವೇ ತಲುಪಿಸಿದ್ದಾರೆ.

ವಿಶೇಷ ಅಂದ್ರೆ, ದಿವಾಕರ್ ಅವರು ಮೂಲತಃ ಕೊಡಗಿನವರು. ವಿರಾಜಪೇಟೆ ತಾಲೂಕಿನ ಕಾನೂರು ನಿವಾಸಿ. ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡಿದ್ದಾರೆ.


Click it and Unblock the Notifications











