Don't Miss!
- News ವೃದ್ಧರ ಗೌಪ್ಯ ಮತದಾನ ವೇಳೆ ಅಕ್ರಮ: ಸಿಪಿಎಂ ಏಜೆಂಟ್ ಹಸ್ತಕ್ಷೇಪ: Video Viral
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
''ಆಡಿದ ಮಾತನ್ನು ಉಳಿಸಿಕೊಳ್ಳುವೆ'' ಎಂದ ನವೀನ್ ಸಜ್ಜು: ಯಾವ ವಿಚಾರಕ್ಕೆ.?
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ವೀಕ್ಷಕರ ಪಾಲಿಗೆ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದವರು ಗಾಯಕ ನವೀನ್ ಸಜ್ಜು. ಟಾಪ್ 2 ಹಂತದವರೆಗೂ ಸಲೀಸಾಗಿ ಬಂದ ನವೀನ್ ಸಜ್ಜು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಗೆಲ್ಲುವ ವಿಶ್ವಾಸ ಹೊಂದಿದ್ದ ನವೀನ್ ಸಜ್ಜು ಕೊನೆಯ ಕ್ಷಣದಲ್ಲಿ ಎಡವಿ ಬಿದ್ದರು.
ಒಂದು ವೇಳೆ 'ಬಿಗ್ ಬಾಸ್' ಗೆದ್ದರೆ, ಬಂದ ಬಹುಮಾನ ಹಣದಲ್ಲಿ ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವೆ ಎಂದು ಈ ಹಿಂದೆ ನವೀನ್ ಸಜ್ಜು ಹೇಳಿಕೊಂಡಿದ್ದರು. ಹಾಗೆಯೇ ತಮಗಾಗಿ ಒಂದು ಸ್ಟುಡಿಯೋ ಕೂಡ ಮಾಡಿಕೊಳ್ಳುವುದು ಅವರ ಬಯಕೆಯಾಗಿತ್ತು.
ಆದರೆ ನವೀನ್ ಸಜ್ಜು 'ಬಿಗ್ ಬಾಸ್' ಗೆಲ್ಲಲಿಲ್ಲ. ಸ್ಟುಡಿಯೋ ಮಾಡೋದಕ್ಕೆ ಕಿಚ್ಚ ಸುದೀಪ್ ಸಪೋರ್ಟ್ ಮಾಡ್ತೀನಿ ಅಂತ ಹೇಳಿದ್ದಾರೆ. ಅಲ್ಲಿಗೆ ನವೀನ್ ರವರ ಒಂದು ಬಯಕೆ ಈಡೇರಿತು. ಮತ್ತೊಂದು..?
'ಬಿಗ್ ಬಾಸ್' ಗೆಲ್ಲಲಿಲ್ಲ ಅಂದ್ರೇನಂತೆ, ಸುದೀಪ್ ಮನ ಗೆದ್ದ ಗಾಯಕ ನವೀನ್ ಸಜ್ಜು.!
'ಬಿಗ್ ಬಾಸ್' ಗೆಲ್ಲದಿದ್ದರೂ, ಒಂದಲ್ಲ ಒಂದು ದಿನ ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವೆ ಎಂದಿದ್ದಾರೆ ಗಾಯಕ ನವೀನ್ ಸಜ್ಜು.
''ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ ವಿಷಯದಲ್ಲಿ ನನಗೆ ಸತೀಶ್ ನೀನಾಸಂ ಸ್ಫೂರ್ತಿ. 'ಬಿಗ್ ಬಾಸ್' ಗೆದ್ದರೆ ಬಂದ ಬಹುಮಾನ ಹಣದಿಂದ ಹಳ್ಳಿಗಳನ್ನು ದತ್ತು ತೆಗೆದುಕೊಳ್ಳಬೇಕು ಅಂದುಕೊಂಡಿದ್ದೆ. ಆದ್ರೆ ನಾನು 'ಬಿಗ್ ಬಾಸ್' ಗೆಲ್ಲಲಿಲ್ಲ. ಆದ್ರೂ ಪರವಾಗಿಲ್ಲ. ನಾನು ಆಡಿದ ಮಾತನ್ನು ಉಳಿಸಿಕೊಳ್ಳುವೆ. ಮುಂದೊಂದು ದಿನ ಹಳ್ಳಿಗಳನ್ನು ದತ್ತು ಪಡೆಯುವೆ'' ಎಂದು ಸಂದರ್ಶನವೊಂದರಲ್ಲಿ ನವೀನ್ ಸಜ್ಜು ಹೇಳಿದ್ದಾರೆ.
ನಲ್ಮೆಯ ಅಂಬಿ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನವೀನ್ ಸಜ್ಜು
'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದಮೇಲೆ ಹೊಸ ಹುರುಪಿನಲ್ಲಿರುವ ನವೀನ್ ಸಜ್ಜು ಆಸೆಗಳು ಈಡೇರಲಿ ಎಂಬುದು ಅಭಿಮಾನಿಗಳ ಆಶಯ.