Don't Miss!
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಲೋಕಸಭಾ ಚುನಾವಣೆ 2024: ಟಾಪ್ 10 ಶ್ರೀಮಂತ ಅಭ್ಯರ್ಥಿಗಳು ಇವರು
- News ಲೋಕಸಭೆ ಚುನಾವಣೆ : ಶೇ 100ರಷ್ಟು ಮತದಾನವಾದರೆ ಸಿಗಲಿದೆ ಪ್ರಶಸ್ತಿ
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಲ್ಮೆಯ ಅಂಬಿ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನವೀನ್ ಸಜ್ಜು
ರೆಬೆಲ್ ಸ್ಟಾರ್ ಅಂಬರೀಶ್ ನಿಧನದ ಸುದ್ದಿ ಇಡೀ ಕರುನಾಡಿಗೆ ಬರಸಿಡಿಲಿನಂತೆ ಬಡಿದಿತ್ತು. ಅಂದು ಇಡೀ ಕರ್ನಾಟಕ ಸ್ತಬ್ಧವಾಗಿತ್ತು. ಅದೇ ರೀತಿ 'ಬಿಗ್ ಬಾಸ್' ಮನೆಯೊಳಗಿದ್ದ ಸ್ಪರ್ಧಿಗಳಿಗೆ ಅಂಬರೀಶ್ ವಿಧಿವಶರಾದ ಸುದ್ದಿ ತಿಳಿಯುತ್ತಿದ್ದಂತೆಯೇ ಆಘಾತಗೊಂಡರು.
ಅದರಲ್ಲೂ, ಮಂಡ್ಯದಲ್ಲೇ ಹುಟ್ಟಿ ಬೆಳೆದ ಗಾಯಕ, ಸಂಗೀತ ನಿರ್ದೇಶಕ ನವೀನ್ ಸಜ್ಜು ಅಂತೂ ಅಕ್ಷರಶಃ ಶಾಕ್ ಆದರು. ಅಂಬಿಯನ್ನು ನೆನೆದು ನವೀನ್ ಸಜ್ಜು ಕಣ್ಣೀರಿಟ್ಟರು. ಅಂಬಿಯ ಅಪ್ಪಟ ಅಭಿಮಾನಿಯಾಗಿದ್ದ ನವೀನ್ ಸಜ್ಜು ಇದೀಗ ಅಂಬಿ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಹೌದು, 'ಬಿಗ್ ಬಾಸ್' ಮನೆಯಿಂದ ಹೊರಗೆ ಬರುತ್ತಿದ್ದ ಹಾಗೆ ನವೀನ್ ಸಜ್ಜು ಮಾಡಿದ ಮೊಟ್ಟಮೊದಲ ಕೆಲಸ ಅಂದ್ರೆ ಇದೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಇದೆ ಓದಿರಿ...
ಅಂಬಿ ಸಮಾಧಿಗೆ ನವೀನ್ ಸಜ್ಜು ನಮನ
'ಬಿಗ್ ಬಾಸ್' ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ, ಬಿಡದಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಿಂದ ಹೊರಟ ನವೀನ್ ಸಜ್ಜು ನೇರವಾಗಿ ಆಗಮಿಸಿದ್ದು ಕಂಠೀರವ ಸ್ಟುಡಿಯೋ ಗೆ. ಅಲ್ಲಿರುವ ಅಂಬರೀಶ್ ಅವರ ಸಮಾಧಿಗೆ ನವೀನ್ ಸಜ್ಜು ನಮನ ಸಲ್ಲಿಸಿದರು. ಜೊತೆಗೆ ಡಾ.ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ಸಮಾಧಿಗೂ ಪೂಜೆ ಸಲ್ಲಿಸಿದರು.
'ಬಿಗ್ ಬಾಸ್' ನಿಮ್ಗೆ ತಲೆ ಕೆಟ್ಟಿದ್ಯಾ.? ಹೋಗಿ ಹೋಗಿ ಡವ್ ರಾಜನ್ನ ಗೆಲ್ಸಿದ್ದೀರಲ್ಲ.! ಅನ್ನದಾತರಿಗೆ ಅವಮಾನ.!
ಭಾವುಕರಾದ ನವೀನ್ ಸಜ್ಜು
''ಅಂಬಿ ಅಣ್ಣನ ಸಾವು ದೊಡ್ಡ ಆಘಾತ ತಂದಿತ್ತು. 'ಬಿಗ್ ಬಾಸ್'ನಲ್ಲಿ ನಾನೇನೇ ಗೆದ್ದಿದ್ದರೂ, ಅದನ್ನ ಅಂಬಿ ಅಣ್ಣನಿಗೆ ಅರ್ಪಿಸುವೆ. ನನಗೆ ಅವರ ಮುಖವನ್ನು ಕೊನೆಯ ಬಾರಿಗೆ ನೋಡಲು ಆಗಲಿಲ್ಲ ಎಂಬ ನೋವಿದೆ'' ಎಂದು ಭಾವುಕರಾಗಿ ನುಡಿದರು ನವೀನ್ ಸಜ್ಜು.
ಈ ಬಾರಿಯ 'ಬಿಗ್ ಬಾಸ್' ವಿನ್ನರ್ ನವೀನ್ ಸಜ್ಜು?
ಮೆಲುಕು ಹಾಕಿದ ನವೀನ್
''ನಾನು ಅಂಬರೀಶ್ ರವರ ಕಟ್ಟಾ ಅಭಿಮಾನಿ. ಅಂಬಿ ಅಣ್ಣನನ್ನು ಕೆಸಿಸಿ ಟೂರ್ನಮೆಂಟ್ ನಲ್ಲಿ ನಾನು ಭೇಟಿಯಾಗಿದ್ದೆ. ಹೋಗ್ಲಾ ಬರ್ಲಾ ಅಂತ ನನ್ನ ಮಂಡ್ಯ ಭಾಷೆಯಲ್ಲಿ ಮಾತನಾಡಿಸುತ್ತಿದ್ದರು'' ಎಂದು ಇದೇ ಸಮಯದಲ್ಲಿ ಅಂಬಿ ಜೊತೆಗಿನ ಒಡನಾಟವನ್ನು ನವೀನ್ ಸಜ್ಜು ಮೆಲುಕು ಹಾಕಿದರು.
ಇಷ್ಟು ಸಾಕು
''ನೀವೇ ಬಿಗ್ ಬಾಸ್ ಗೆಲ್ಲಬೇಕಿತ್ತು ಅಂತ ಎಷ್ಟೋ ಜನ ಹೇಳುತ್ತಿದ್ದಾರೆ. ಇದು ಬಿಗ್ ಬಾಸ್ ಗೆಲುವಿಗಿಂತ ನನಗೆ ಜಾಸ್ತಿ ಖುಷಿ ಕೊಟ್ಟಿದೆ. ಜನ ನನ್ನ ಇಷ್ಟಪಟ್ಟಿದ್ದಾರೆ. ಅಷ್ಟು ಸಾಕು'' ಎಂದು ಹೇಳಿದರು 'ಬಿಗ್ ಬಾಸ್ ಕನ್ನಡ 6' ರನ್ನರ್ ಅಪ್ ನವೀನ್ ಸಜ್ಜು.