Don't Miss!
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿಡ್ನಾಪ್ ಕೇಸ್ ನಲ್ಲಿ 'ಬಿಗ್ ಬಾಸ್' ಸ್ಪರ್ಧಿ ಸುನಾಮಿ ಕಿಟ್ಟಿ ಅರೆಸ್ಟ್ !
Recommended Video
ಕನ್ನಡದ ಕೆಲವು ಜನಪ್ರಿಯ ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿದ್ದ ಹಾಗೂ 'ಬಿಗ್ ಬಾಸ್' ಕಾರ್ಯಕ್ರಮ ಸ್ಪರ್ಧಿಯಾಗಿದ್ದ ಸುನಾಮಿ ಕಿಟ್ಟಿ ವಿರುದ್ಧ ಕಿಡ್ನಾಪ್ ಕೇಸ್ ದಾಖಲಾಗಿದೆ. ಕಿಡ್ನಾಪ್ ಮತ್ತು ಅರ್ಮಸ್ ಆಕ್ಟ್ ಅಡಿಯಲ್ಲಿ ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.
ಬಾರ್ ಸಪ್ಲೇಯರ್ ಗಿರೀಶ್ ಎಂಬಾತ ನನ್ನು ಕಿಡ್ನಾಪ್ ಮಾಡಿ ಸುನಾಮಿ ಕಿಟ್ಟಿ ಅಂಡ್ ಗ್ಯಾಂಗ್ ಚಿತ್ರ ಹಿಂಸೆ ಕೊಟ್ಟಿದ್ದರು. ಅಲ್ಲದೆ ಪಾಯಿಂಟ್ ಬ್ಲಾಕ್ ನಲ್ಲಿ ಗನ್ ಇಟ್ಟು ಗಿರೀಶ್ ಗೆ ಜೀವ ಬೆದರಿಕೆ ಹಾಕಿದ್ದರು. ಸುನಾಮಿ ಕಿಟ್ಟಿ ಸ್ನೇಹಿತ ಸುನಿಲ್ ಪತ್ನಿ ತೌಶೀಕ್ ಎಂಬಾತ ಪ್ರೀತಿಸುತ್ತಿದ್ದಳು. ಈ ವಿಷಯ ತಿಳಿದು ಯಾರು ಸುನಿಲ್ ಪತ್ನಿಯ ಪ್ರಿಯಕರ ಎಂದು ತಿಳಿದು ಕೊಳ್ಳಲು ಮತ್ತು ಆತನನ್ನು ಕಿಡ್ನಾಪ್ ಮಾಡಿ ಹಲ್ಲೆ ಮಾಡಲು ಪ್ಲಾನ್ ಮಾಡಿದ್ದರು.
ಬಿಗ್ ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿ ಬಂಧನ
ಫೆಬ್ರವರಿ 28ಕ್ಕೆ ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್ ಅಂಡ್ ರೆಸ್ಟೋರೆಂಟ್ ಗೆ ಸುನಿಲ್ ಪತ್ನಿ ಮತ್ತು ಪ್ರಿಯಕರ ತೌಶೀಕ್ ಊಟಕ್ಕೆ ಬರುತಿದ್ದರು. ಈ ವೇಳೆ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್ ನನ್ನೆ ಸುನಿಲ್ ಪತ್ನಿಯ ಪ್ರಿಯಕರ ಎಂದು ಕಿಡ್ನಾಪ್ ಮಾಡಿದ್ದರು. ಈ ವೇಳೆ ಬಾರ್ ನಿಂದ ಬಿಲ್ ಕೊಡದೆ ಗಡಿಬಿಡಿಯಾಗಿ ತೌಶೀಕ್ ಪರಾರಿಯಾಗಿದ್ದ. ನಂತರ ಗಿರೀಶನನ್ನು ಹೊರಮಾವು ಬಳಿ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದರು. ಫೋನ್ ಮಾಡಿ ತೌಶೀಕ್ ನನ್ನು ಕರೆಸಿ ಬಿಲ್ ಕೊಡುವಂತೆ ಕೇಳಿದ್ದರು.
ಬಳಿಕ ಗಿರೀಶ್ ಗೊರಗುಂಟೆ ಪಾಳ್ಯ ಸಿಗ್ನಲ್ ಬಳಿಗೆ ಬರುವುದಾಗಿ ತೌಶೀಕ್ ಗೆ ತಿಳಿಸಿದ್ದ. ತೌಶೀಕ್ ನನ್ನು ಗೊರಗುಂಟೆ ಪಾಳ್ಯ ಸರ್ಕಲ್ ನಿಂದ ಕಿಡ್ನಾಪ್ ಮಾಡಿ ಹೊರಮಾವು ಬಳಿಯ ತೋಟದ ಮನೆಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿ ಚಾಕುವಿನಿಂದ ತೌಶೀಕ್ ಎದೆ ಮತ್ತು ತೊಡೆ ಭಾಗಕ್ಕೆ ಸುನಾಮಿ ಕಿಟ್ಟಿ ಮತ್ತು ಸುನೀಲ್ ಟೀಮ್ ಇರಿದಿದ್ದರು. ಅಂದಹಾಗೆ, ಜ್ಞಾನ ಭಾರತಿ ಪೊಲೀಸರು ಸದ್ಯ ಪ್ರಕರಣ ದಾಖಲಿಸಿಕೊಂಡು ಸುನಾಮಿ ಕಿಟ್ಟಿ ಯೋಗೇಂದ್ರ ಮತ್ತು ಅರ್ಜುನ್ ನನ್ನು ಬಂದಿಸಿದ್ದಾರೆ. ಸುನಿಲ್ ಗಾಗಿ ಶೋಧ ನಡೆಸಿದ್ದಾರೆ.
ಖ್ಯಾತ ನಟಿಗೆ ಕಿರುಕುಳ ನೀಡುತ್ತಿದ್ದ ಬೆಂಗಳೂರಿನ ಯುವಕ ಬಂಧನ!