Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾವನೆಗಳು ತುಂಬಿದ 'ಬಿಸಿ ಬೆಳೆ ಬಾತ್' ರುಚಿಯಾಗಿದೆ
ಪ್ರತಿ ದಿನ ಆಫೀಸ್, ಕೆಲಸದ ಒತ್ತಡಗಳ ನಡುವೆ ನಾವು ನಮ್ಮವರನ್ನೇ ಮರೆತುಬಿಡುತ್ತೇವೆ. ಜಗತ್ತಿನ ವಿಷಯಗಳ ಬಗ್ಗೆ ಜ್ಞಾನ ಪಡೆಯುವ ನಾವು ನಮ್ಮ ಮನೆ, ಕುಟುಂಬದ ವಿಷಯಗಳನ್ನೇ ತಿಳಿದುಕೊಳ್ಳುವುದಿಲ್ಲ. ಈ ರೀತಿಯ ಒಬ್ಬ ಹುಡುಗನ ಕಥೆಯೇ 'ಬಿಸಿ ಬೆಳೆ ಬಾತ್'.
'ಬಿಸಿ ಬೆಳೆ ಬಾತ್' ಕಿರುಚಿತ್ರ ಈಗಾಗಲೇ ಸುದ್ದಿಯಾಗಿತ್ತು. ನಿನ್ನೆ (ನವೆಂಬರ್ 4) ಈ ಕಿರುಚಿತ್ರ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಕಿರುಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, 2 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದು ಮುಂದೆ ಸಾಗಿದೆ. ಒಳ್ಳೆಯ ಮಾತುಗಳು ಕಿರುಚಿತ್ರಕ್ಕೆ ಕೇಳಿ ಬರುತ್ತಿವೆ.
''ಯುವಕರಿಲ್ಲದ ಮಲೆನಾಡು ವೃದ್ಧಾಶ್ರಮವಾಗಿದೆ''- ಸಿನಿಮಾ ಚಿಕ್ಕದು, ವಿಷಯ ದೊಡ್ಡದು
ಆಫೀಸ್ ಗೆ ರಜೆ ಹಾಕಿ ಒಂದು ದಿನ ಮನೆಯಲ್ಲಿ ಒಬ್ಬನೆ ಇರುವ ಹುಡುಗನನ್ನು, ಆತನ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಭೇಟಿ ಮಾಡಲು ಬರುತ್ತಾರೆ. 15 ವರ್ಷಗಳ ನಂತರದ ಅವರ ಭೇಟಿ ಹೇಗಿರುತ್ತದೆ ಎನ್ನುವುದು ಕಿರುಚಿತ್ರದ ನಿರೂಪಣೆ. 'ಬಿಸಿ ಬೆಳೆ ಬಾತ್' ಮೂಲಕ ಅವರ ಹಳೆಯ ನೆನೆಪು ಇನ್ನಷ್ಟು ಚೆಂದವಾಗುತ್ತದೆ.
ಒಂದು ಒಳ್ಳೆಯ ವಿಷಯವನ್ನು ಈ ಕಿರುಚಿತ್ರದ ಮೂಲಕ ಹೇಳಲಾಗಿದೆ. ಒಂದೇ ಮನೆಯಲ್ಲಿ ಕಥೆ ನಡೆಯುತ್ತದೆ. ರಾಕೇಶ್ ಮಯ್ಯ, ಸುಂದರ್, ಕುಮುಂದವಲ್ಲಿ ಅರುಣ್ ಮೂರ್ತಿ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಕಿರುಚಿತ್ರ ಭಾವನಾತ್ಮಕವಾಗಿ ಮೂಡಿ ಬಂದಿದೆ. ಕೊನೆಯಲ್ಲಿ ನೀಡುವ ಟ್ವಿಸ್ಟ್ ಚೆನ್ನಾಗಿದೆ.
ಟ್ರೆಂಡಿಂಗ್ 1: ರಿಷಬ್ ಶೆಟ್ಟಿ 7 ಕಥೆಗಳ ಸಂಗಮ, ಹೃದಯಂಗಮ
ಶಿಲ್ಪಾ ಅರವಿಂದ್, ನವೀನ್ ಸಾಗರ್ ಹಾಗೂ ಅರವಿಂದ್ ಕೌಶಿಕ್ ಈ ಕಿರುಚಿತ್ರದ ನಿರ್ಮಾಣ ಮಾಡಿದ್ದಾರೆ. ಅರವಿಂದ್ ಕೌಶಿಕ್ ಕಥೆ ಬರೆದು ನಿರ್ದೇಶಿಸಿದ್ದಾರೆ. ಅರ್ಜುನ್ ರಾಮು ಸಂಗೀತ ಚೆನ್ನಾಗಿದೆ.
'ಬಿಸಿ ಬೆಳೆ ಬಾತ್' ಕಿರುಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ