twitter
    For Quick Alerts
    ALLOW NOTIFICATIONS  
    For Daily Alerts

    ಕಿಚ್ಚ ಸುದೀಪ್ ರನ್ನು ಶ್ರೀರಾಮುಲು ಭೇಟಿ ಮಾಡಿದ್ದು ಯಾಕೆ?

    By Naveen
    |

    Recommended Video

    ಶ್ರೀರಾಮುಲುರನ್ನು ಮತ್ತೆ ಸುದೀಪ್ ಭೇಟಿ ಆಗಿದ್ದು ಯಾಕೆ..? | Filmibeat Kannada

    ಬೆಂಗಳೂರು, ಜುಲೈ 23: ಬಿಜೆಪಿಯ 'ಸಮರ್ಥನೆಗಾಗಿ ಸಂಪರ್ಕ' ಅಭಿಯಾನದಡಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಶ್ರೀರಾಮುಲು ಅವರು ಖ್ಯಾತ ನಟ ಸುದೀಪ್ ಅವರನ್ನು ಇಂದು ಭೇಟಿ ಮಾಡಿದರು.

    ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಾಲ್ಕು ವರ್ಷಗಳ ಸಾಧನೆಗಳನ್ನೊಳಗೊಂಡ 'ಸಮರ್ಥನೆಗಾಗಿ ಸಂಪರ್ಕ' ಪುಸ್ತಕವನ್ನು ಸುದೀಪ್ ಅವರಿಗೆ ಮೊಳಕಾಲ್ಮೂರು ಶಾಸಕ ಶ್ರೀರಾಮುಲು ನೀಡಿದರು.

    ನರೇಂದ್ರ ಮೋದಿ ಸರ್ಕಾರದ ಕಳೆದ ಮೇ ತಿಂಗಳಿಗೆ ನಾಲ್ಕು ವರ್ಷ ಪೂರೈಸಿದ ನಿಮಿತ್ತ, ನಾಲ್ಕು ವರ್ಷಗಳ ಸರ್ಕಾರದ ಸಾಧನೆಗಳನ್ನು ಒಳಗೊಂಡ ಪುಸ್ತಕವನ್ನು ದೇಶದ ಪ್ರಮುಖ ಸೆಲೆಬ್ರಿಟಿಗಳಿಗೆ ನೀಡುವುದು ಈ ಅಭಿಯಾನದ ಉದ್ದೇಶವಾಗಿದೆ.

    BJPs Sampark Samarthan: Sriramulu meets Sudeep

    ಇದು ಬಿಜೆಪಿಯ 2019 ರ ಲೋಕಸಭಾ ಚುನಾವಣೆಯ ಪ್ರಚಾರದ ಭಾಗವೂ ಹೌದು.

    ಶ್ರೀರಾಮುಲು ಮತ್ತು ಸುದೀಪ್ ಇಬ್ಬರೂ ಬಹುಕಾಲದ ಸ್ನೇಹಿತರಾಗಿದ್ದು, ಕಳೆದ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಶ್ರೀರಾಮುಲು ಅವರ ಪರವಾಗಿ ಸುದೀಪ್ ಪ್ರಚಾರ ನಡೆಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

    BJPs Sampark Samarthan: Sriramulu meets Sudeep

    'ನಾನು ಯಾವುದೇ ಪಕ್ಷದ ಪರವಲ್ಲ. ನಾನು ನನ್ನ ಸ್ನೇಹಿತರಿಗಾಗಿ ಪ್ರಚಾರ ನಡೆಸುತ್ತೇನೆ' ಎಂದು ಸುದೀಪ್ ಚುನಾವಣೆಯ ಸಮಯದಲ್ಲೇ ಹೇಳಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಮುಖಂಡರಾದ ಸೋಮಶೇಖರ ರೆಡ್ಡಿ, ಸಣ್ಣ ಪಕೀರಪ್ಪ ಅವರ ಪರವಾಗಿಯೂ ಸುದೀಪ್ ಪ್ರಚಾರ ನಡೆಸಿದ್ದರು.

    English summary
    As part of Sampark Samarthan campaign, BJP's Molakalmuru MLA Sriramulu met Kannada actor sudeep in Bengaluru
    Monday, July 23, 2018, 14:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X