Don't Miss!
- Automobiles Bullet Train: ಭಾರತದಲ್ಲಿ ಮೊದಲ ಬಾರಿಗೆ ನವೀನ ರೀತಿಯ ಹಳಿ ಬಳಕೆ.. 320 ಕಿ.ಮೀ ವೇಗದಲ್ಲಿ ಓಡುತ್ತೆ ರೈಲು!
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ ಕಾರು ಕಂಡಲ್ಲಿ ಅಭಿಮಾನಿಗಳಿಂದ ಮುತ್ತಿಗೆ
ತಮ್ಮ ಟೊಯೋಟಾ ಫಾರ್ಚೂನರ್ ಕಾರಿನಲ್ಲಿ ಹೊರಟ ದರ್ಶನ್ ಅವರನ್ನು ಸಿಗ್ನಲ್ ನಲ್ಲಿ ನೋಡಿದ ಅಭಿಮಾನಿಗಳು ಸುಮ್ಮನಿರಲು ಸಾಧ್ಯವೇ? ಮೊದಲೇ ದರ್ಶನ್ ಅವರಿಗಂತೂ ಅಭಿಮಾನಿಗಳು ಜಾಸ್ತಿ. ದರ್ಶನ್ ಅವರನ್ನು ನೋಡಿದ್ದೇ ತಡ, ಅಭಿಮಾನಿಗಳು ಮುತ್ತಿಕೊಂಡರು. ಹಸ್ತಾಕ್ಷರ ಪಡೆದರು, ಫೋಟೋ ತೆಗೆಸಿಕೊಂಡರು. ಸಿಗ್ನಲ್ ಬಿಟ್ಟರೂ ಅಭಿಮಾನಿಗಳು ದರ್ಶನ್ ಅವರಿಗೆ ಹೋಗಲು ಬಿಡಲಿಲ್ಲ.
ಹೀಗೆ, ಅರ್ಧ ಗಂಟೆ ದರ್ಶನ್ ಅವರನ್ನು ಮುತ್ತಿಕೊಂಡ ಪ್ರೇಕ್ಷಕರನ್ನು ಸಂಭಾಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಅರ್ಧ ಗಂಟೆ ಟ್ರಾಫಿಕ್ ಜಾಮ್ ಆಗಿ ಜನರೆಲ್ಲಾ ತೊಂದರೆ ಅನುಭವಿಸಿದರು. ಆದರೆ ಅದಕ್ಕೆ ದರ್ಶನ್ ಹೊಣೆಗಾರರಾಗಲು ಹೇಗೆ ಸಾಧ್ಯ? ದರ್ಶನ್ ಸರ್ಕಾರದ ಆದೇಶ ಪಾಲಿಸಿದ್ದಾರೆ ಅಷ್ಟೇ.
ಇದೇ ಅನುಭವ ನಟರಾದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ದುನಿಯಾ ವಿಜಿ ಅವರಿಗೂ ಆಗಿದೆ. ಅವರೂ ಅಭಿಮಾನಿಗಳ ಮುತ್ತಿಗೆಗೆ ಒಳಗಾಗಿ ಟ್ರಾಫಿಕ್ ಜಾಮ್ ಆಗಲು ಕಾರಣರಾಗಿದ್ದಾರೆ. ಹೀಗೆ ಸಾಕಷ್ಟು ತಾರೆಯರಿಗೆ ಮುಂದೆ ಆಗುವುದು ಖಂಡಿತ. ಸರ್ಕಾರ ಆದೇಶ ಹೊರಡಿಸಿದ ಮೇಲೆ ಅದು ಎಲ್ಲರಿಗೂ ಅನ್ವಯವಾಗುವುದೂ ಸಹಜ.
ಸರ್ಕಾರದ ಈ ತೀರ್ಪಿನಿಂದ ಹೆಚ್ಚು ಸಮಸ್ಯೆಯಾಗುತ್ತಿರುವುದೇ ಸಿನಿಮಾ ಸ್ಟಾರ್ ಗಳಿಗೆ. ಅರ್ಜೆಂಟ್ ಆಗಿ ಎಲ್ಲಿಯೋ ಹೊರಟಿರುವಾಗ ಅವರಿಗೆ ಅಭಿಮಾನಿಗಳು ಈ ರೀತಿ ಮುತ್ತಿಕೊಂಡರೆ ಗತಿಯೇನು? ಶೂಟಿಂಗ್, ಫಂಕ್ಷನ್ ಎಲ್ಲಕ್ಕೂ ತೊಂದರೆಯಾಗುತ್ತದೆ. ಇತ್ತ ಅಭಿಮಾನಿಗಳನ್ನು ದೂರುವಂತಿಲ್ಲ, ಅತ್ತ ಸರ್ಕಾರದ ಆದೇಶ ಧಿಕ್ಕರಿಸುವಂತಿಲ್ಲ.
ಈ ರೀತಿಯಾಗಿ ಅಡಕತ್ತರಿಯಲ್ಲಿ ಸಿಕ್ಕ ಅಡಿಕೆಯಂತಾಗಿದ್ದಾರೆ ಸಿನಿಮಾ ತಾರೆಯರು. "ಎಲ್ಲವನ್ನೂ ಯೋಚಿಸಿ ಸರ್ಕಾರ ಆದೇಶ ಹೊರಡಿಸಬೇಕಿತ್ತು. ಈಗ ಒಂದು ಸಮಸ್ಯೆ ಪರಿಹಾರವಾದರೆ ಒನ್ನೊಂದು ಸಮಸ್ಯೆ ಪ್ರಾರಂಭವಾಗಿದೆ" ಎಂಬುದು ಸಿನಿಮಾ ತಾರೆಗಳ ಮಾತು. ಮುಂದೆ ದರ್ಶನ್ ಅವರಂತೆ ಇನ್ನೆಷ್ಟು ತಾರೆಗಳು ಅಭಿಮಾನಿಗಳ ಕೈಗೆ ಸಿಕ್ಕ ಚಡಪಡಿಸಲಿದ್ದಾರೋ! (ಒನ್ ಇಂಡಿಯಾ ಕನ್ನಡ)