Don't Miss!
- Automobiles Vande Bharat: ವಂದೇ ಭಾರತ್ ಸ್ಲೀಪರ್ ವಿಶೇಷತೆಗಳು: ಇಂಟೀರಿಯರ್ಗೆ ಫಿದಾ ಆಗ್ತೀರ!
- News Karnataka Lok Sabha: 28 ಕ್ಷೇತ್ರಗಳ ಜಾತಿವಾರು ಅಭ್ಯರ್ಥಿಗಳ ಯಾರು? ಮಾಹಿತಿ ಇಲ್ಲಿದೆ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Finance ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ: ಬರಲಿವೆ 19 ಎತ್ತರದ ನಿಲ್ದಾಣಗಳು
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುದೀಪ್ ನಿಂದಿಸಿದ ಅಹೋರಾತ್ರನ ವಿರುದ್ಧ 'ಮೆಜೆಸ್ಟಿಕ್' ನಿರ್ಮಾಪಕ ಭಾಮಾ ಹರೀಶ್ ಗರಂ
ಅಹೋರಾತ್ರ ಮತ್ತು ಸುದೀಪ್ ಅಭಿಮಾನಿಗಳ ನಡುವಿನ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿರುವುದು ತಿಳಿದಿರುವ ಸಂಗತಿ. ರಮ್ಮಿ ಜಾಹೀರಾತಿನಲ್ಲಿ ಸುದೀಪ್ ನಟಿಸುವುದನ್ನು ಬಿಟ್ಟಿದ್ದರೂ ಕಿಚ್ಚನ ಮೇಲೆ ವೈಯಕ್ತಿಕ ದಾಳಿ ಮಾಡುವುದನ್ನು ಮಾತ್ರ ಅಹೋರಾತ್ರ ನಿಲ್ಲಿಸಿರಲಿಲ್ಲ. ಇದರಿಂದ ತಾಳ್ಮೆ ಕಳೆದುಕೊಂಡ ಸುದೀಪ್ ಅಭಿಮಾನಿಗಳು ಅಹೋರಾತ್ರನ ಮನೆಗೆ ನುಗ್ಗಿದರು. ಈ ವೇಳೆ ಅಹೋರಾತ್ರ ಮತ್ತು ಸುದೀಪ್ ಅಭಿಮಾನಿಗಳ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಜಗಳವೂ ನಡೆದುಹೋಯಿತು.
ಈ ಪ್ರಕರಣ ಈಗ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ದೂರು ಮತ್ತು ಪ್ರತಿದೂರು ದಾಖಲಾಗಿದೆ. ಇದೀಗ, ಈ ಬೆಳವಣಿಗೆ ಬಗ್ಗೆ ಮೆಜೆಸ್ಟಿಕ್ ಚಿತ್ರದ ನಿರ್ಮಾಪಕ ಭಾ.ಮಾ ಹರೀಶ್ ಪ್ರತಿಕ್ರಿಯಿಸಿದ್ದಾರೆ. ಫೇಸ್ಬುಕ್ ಲೈವ್ ಬಂದಿದ್ದ ಭಾ.ಮಾ ಹರೀಶ್ ಅಹೋರಾತ್ರನ ವಿರುದ್ಧ ಗರಂ ಆಗಿದ್ದಾರೆ.
ಸುದೀಪ್ ಬಗ್ಗೆ ತೇಜೋವಧೆ ಮಾಡುವುದು ಸರಿಯಿಲ್ಲ
''25 ವರ್ಷ ಚಿತ್ರರಂಗದಲ್ಲಿ ಸಾಧನೆ ಮಾಡಿರುವ ವ್ಯಕ್ತಿ ಬಗ್ಗೆ ತೇಜೋವಧೆ ಮಾಡುವುದು ಸರಿಯಿಲ್ಲ. ಬಾಯಿಗೆ ಬಂದ ಹಾಗೆ ಮಾತನಾಡುವುದು ಖಂಡನೀಯ. ಒಂದೂವರೆ ವರ್ಷದಿಂದ ಸುದೀಪ್ ಅವರನ್ನು ಟಾರ್ಗೆಟ್ ಮಾಡ್ತಿರೋದು ಏಕೆ? ನಿಮಗೂ ಕುಟುಂಬ ಇದೆ, ಮಕ್ಕಳಿದ್ದಾರೆ. ಇನ್ನೊಬ್ಬರನ್ನು ತೇಜೋವಧೆ ಮಾಡುವುದು ಬಿಟ್ಟುಬಿಡಿ'' ಎಂದು ಭಾಮಾ ಹರೀಶ್ ಎಚ್ಚರಿಕೆ ನೀಡಿದ್ದಾರೆ.
ಸುದೀಪ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ 'ಅಹೋರಾತ್ರ' ಯಾರು?
ನಾವು ಪರಿಸರ ಪ್ರೇಮಿಗಳೇ....
''ನಿಮ್ಮ ಪರಿಸರ ಪ್ರೇಮದ ಬಗ್ಗೆ ನಮಗೆ ಗೌರವವಿದೆ. ನಾವು ಪರಿಸರ ಪ್ರೇಮಿಗಳೇ. ಸುದೀಪ್ ಅವರು ಸಹ ಪರಿಸರ ಪ್ರೇಮಿಗಳೇ. ಅವರ ಬಗ್ಗೆ ಮಾತಾಡಿ ನೀವು ಹೀರೋ ಆಗಲ್ಲ. ಒಳ್ಳೆಯ ಸಂದೇಶ ಕೊಡೋ ಮೂಲಕ ಗುರುತಿಸಿಕೊಂಡಿದ್ದೀರಾ. ಸುದೀಪ್ ಅವರ ಬಗ್ಗೆ ಈ ರೀತಿ ಮಾತಾಡಿ ಕೆಟ್ಟವರಾಗಬೇಡಿ ಅಹೋರಾತ್ರ ಅವರೇ'' ಎಂದು ಕಿವಿ ಮಾತು ಹೇಳಿದ್ದಾರೆ.
ಜನರ ದಾರಿ ತಪ್ಪಿಸುವ ಕೆಲಸ ಮಾಡಬೇಡಿ
''ಸಾರ್ವಜನಿಕವಾಗಿ ಸುದೀಪ್ ಅವರನ್ನು ಟಾರ್ಗೆಟ್ ಮಾಡಿ ನೀವು ಹೀರೋ ಆಗ್ತೀರಾ ಅಂತಿದ್ರೆ ಅದು ಸುಳ್ಳು. ನಿಮ್ಮನ್ನು ಯಾರೂ ನಂಬಲ್ಲ. ಆ ದೇವರು ಒಳ್ಳೆಯ ಬುದ್ದಿ ಕೊಡಲಿ, ಜನರ ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಒಳ್ಳೆಯ ಕೆಲಸ ಮಾಡಿದ್ರೆ ನಾವು ನಿಮ್ಮ ಜೊತೆ ಇರ್ತೀವಿ'' ಎಂದು ಭಾಮಾ ಹರೀಶ್ ಹೇಳಿದ್ದಾರೆ.
ಅಹೋರಾತ್ರ v/s ಸುದೀಪ್ ಅಭಿಮಾನಿಗಳು: ಯಾರದ್ದು ಸರಿ? ಯಾರದ್ದು ತಪ್ಪು?
Recommended Video
ಮೊದಲು ನಿಮ್ಮ ಸಂಸ್ಕೃತಿ ಅರಿಯಿರಿ
''ಇತ್ತೀಚಿನ ನಿಮ್ಮ ವಿಡಿಯೋಗಳನ್ನು ನೋಡಿ ನಮಗೆ ಅಸಹ್ಯವಾಗುತ್ತಿದೆ. ಇನ್ನೊಬ್ಬರ ಸಂಸ್ಕೃತಿ ಬಗ್ಗೆ ಮಾತಾಡುವುದಕ್ಕೂ ಮುಂಚೆ ನಿಮಗೆ ನೀವು ಹೇಗಿದ್ದೀರಾ ಅಂತ ಯೋಚಿಸಬೇಕು. ಮೊದಲು ನಮ್ಮ ಸಂಸ್ಕೃತಿ ಬದಲಾಯಿಸಿಕೊಳ್ಳಿ, ಇಂತಹ ಕೆಟ್ಟ ಆಲೋಚನೆ, ಇನ್ನೊಬ್ಬರ ಬಗ್ಗೆ ತೇಜೋವಧೆ ಮಾಡುವುದನ್ನು ಬಿಟ್ಟು ಮುಂದೆ ನಡೆಯಿರಿ'' ಎಂದು ಮೆಜೆಸ್ಟಿಕ್ ಚಿತ್ರ ನಿರ್ಮಿಸಿದ್ದ ಭಾಮಾ ಹರೀಶ್ ತಿಳಿಸಿದ್ದಾರೆ.