Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ದೇವಕಿ'ಯನ್ನು ಕಾಡಿದ ಉಗ್ರ ಅಜ್ಮಲ್ ಕಸಬ್
ಸ್ಯಾಂಡಲ್ ವುಡ್ ನಟಿ ಪ್ರಿಯಾಂಕಾ ಉಪೇಂದ್ರ ಅಭಿನಯದ 'ದೇವಕಿ' ಚಿತ್ರದ ಈಗಾಗಲೆ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಈಗಾಗಲೆ ಭಾರಿ ಕುತೂಹಲ ಮೂಡಿಸಿರುವ 'ದೇವಕಿ' ಜೂನ್ ನಲ್ಲಿ ರಿಲೀಸ್ ಮಾಡಬೇಕೆಂದು ಪ್ಲಾನ್ ಮಾಡಿದೆ ಚಿತ್ರತಂಡ.
ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಮತ್ತು ಮಗಳು ಐಶ್ವರ್ಯ ಅಭಿನಯಿಸಿದ್ದಾರೆ ಎನ್ನುವುದು ಚಿತ್ರಪ್ರಿಯರಿಗೆ ಗೊತ್ತಿರುವ ಮಾಹಿತಿ. ಇದು ಬಿಟ್ಟರೆ ಚಿತ್ರದಲ್ಲಿ ಬೇರೆಯಾರೆಲ್ಲ ಅಭಿನಯಿಸಿದ್ದಾರೆ ಎನ್ನುವ ಮಾಹಿತಿಯನ್ನು ಬಹಿರಂಗ ಪಡಿಸಿರಲಿಲ್ಲ. ಆದ್ರೀಗ ಪೊಲೀಸ್ ಪಾತ್ರದಲ್ಲಿ ನಟ ಕಿಶೋರ್ ಮಿಂಚಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.
ಸಲ್ಮಾನ್ ಖಾನ್ ಚಿತ್ರವನ್ನು ಹಿಂದಿಕ್ಕಿದ ಕನ್ನಡದ 'ದೇವಕಿ'
ಇದರ ಬೆನ್ನಲ್ಲೆ ಬಾಲಿವುಡ್ ನಟ ಸಂಜೀವ್ ಜೈಸ್ವಾಲ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂಬೈ ದಾಳಿ ಉಗ್ರರ ಬಗ್ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮ 'ದಿ ಅಟ್ಯಾಕ್ ಆಫ್ 26/11' ಎನ್ನುವ ಸಿನಿಮಾ ಮಾಡಿದ್ದರು. ಈ ಚಿತ್ರದಲ್ಲಿ ಅಜ್ಮಲ್ ಕಸಬ್ ಪಾತ್ರದಲ್ಲಿ ನಟ ಸಂಜೀವ್ ಕಾಣಿಸಿಕೊಂಡಿದ್ದರು.
ಸಂಜೀವ್ ನೋಡಲು ಥೇಟ್ ಅಜ್ಮಲ್ ಹಾಗೆ ಕಾಣಿಸುತ್ತಾರೆ. ರಾಮ್ ಗೋಪಲ್ ವರ್ಮ ಸಿನಿಮಾ ನೋಡಿ ಅನೇಕರು ಅಚ್ಚರಿ ಪಟ್ಟಿದ್ದರು. ಸಂಜೀವ್ ಬಾಲಿವುಡ್ ನ ಅನೇಕ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಆದ್ರೀಗ 'ದೇವಕಿ' ಚಿತ್ರದಲ್ಲಿ ಖಡಕ್ ಖಳ ನಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.
ಈ ಮೂಲಕ ಸಂಜೀವ್ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. 'ದೇವಕಿ' ಸಿನಿಮಾ ಬಹುತೇಕ ಚಿತ್ರೀಕರಣ ಉತ್ತರ ಭಾರತದಲ್ಲಿ ನಡೆದಿದ್ದರಿಂದ ಉತ್ತರ ಭಾರತೀಯ ನಟನಿದ್ದರೆ ಸೂಕ್ತ ಎನ್ನುವ ಕಾರಣಕ್ಕೆ ಸಂಜೀವ್ ಅವರಿಗೆ ಖಳ ನಟನ ಪಾತ್ರ ನೀಡಿದೆ 'ದೇವಕಿ' ಚಿತ್ರತಂಡ.