Don't Miss!
- News ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನೇ ಗುರಿಯಾಗಿಸಿ ಐಟಿ ದಾಳಿ : ಡಿ ಕೆ ಶಿವಕುಮಾರ್ ಏನಂದ್ರು?
- Technology Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
- Lifestyle ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರೀತಿ ಮಾಯೆ ಹುಷಾರು, ಇದು ಲವ್ ಪಾಯಿಸನ್
ಕಳೆದ ಮೂರು ತಿಂಗಳಿನಿಂದ ಕಥೆ ಹೆಣೆದಿರುವ ನಂದನ್ ಸದ್ಯಕ್ಕೆ ಫೈನಲ್ ಕಾಪಿ ಸಿದ್ಧಪಡಿಸುತ್ತಿದ್ದಾರೆ. ನಾಯಕನಾಗಿ ಹಳ್ಳಿ ಹೈದ ರಾಜೇಶ್ ಇದ್ದರೆ ಮತ್ತೊಬ್ಬ ನಾಯಕನಾಗಿ ತಬ್ಬಲಿ'ಯ ಆಕಾಶ್ಜಿತ್ ಇದ್ದಾರೆ.
ನಾಯಕಿಯಾಗಿ ಶೃತಿರಾಜ್ ಹೆಜ್ಜೆ ಹಾಕಲಿದ್ದಾರೆ. ನೀನ್ಯಾರೆ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಬೆಡಗಿ ಈಕೆ. ಕನ್ನಡದವಳೇ ಆಗಿದ್ದರೂ ಇಷ್ಟು ದಿನ ಅವಕಾಶವಿಲ್ಲದೇ ಇದ್ದದ್ದು ವಿಪರ್ಯಾಸ.
ಮತ್ತೊಬ್ಬ ನಾಯಕಿಯಾಗಿ ಮುಂಬೈನ ಬೆಡಗಿಯೊಬ್ಬಳು ಇರಲಿದ್ದಾಳೆ. ಆಯ್ಕೆ ಈಗಷ್ಟೇ ನಡೆಯುತ್ತಿದೆ.
ಶೀರ್ಷಿಕೆ ನೋಡಿದ ಮೇಲೆ ಕಥೆಯ ಬಗ್ಗೆ ಇನ್ನೇನು ಹೇಳುವ ಅವಶ್ಯಕಥೆ ಇದ್ದಂತಿಲ್ಲ. ಪ್ರೀತಿಯ ಸುತ್ತಲೇ ಗಿರಕಿ ಹೊಡೆದು ನಂತರ ಪ್ರೀತಿಯಿಂದಾಗುವ ಅನಾಹುತದ ಬಗ್ಗೆ ಹೇಳಹೊರಟಿದ್ದಾರೆ ನಂದನ್. ಕೆ.ಸೋಮಶೇಖರ್ ಎಂಬುವವರು ಹಣ ಸುರಿಯುತ್ತಿದ್ದಾರೆ.
ಸ್ವತಃ ಕತೆಯನ್ನು ನಿರ್ದೇಶಕ ನಂದನಪ್ರಭು ಅವರೇ ಹೆಣೆದಿದ್ದಾರೆ. ತಮ್ಮ ಕಂಡಕ್ಟರ್ ವೃತ್ತಿ ಜೀವನದ ಅನುಭವಗಳನ್ನೇ ಕತೆಯಾಗಿಸಿದ್ದಾರೆ. ಡ್ರೈವರ್ ಹಾಗೂ ಕಂಡಕ್ಟರ್ ಆಗಿ ಕಂಡ ಸತ್ಯಗಳು ಶೇ.60ರಷ್ಟು ಚಿತ್ರದಲ್ಲಿರುತ್ತವೆ.