Don't Miss!
- News PSI Re-Exam: ಪಿಎಸ್ಐ ಮರುಪರೀಕ್ಷೆ ಅಂತಿಮ ಅಂಕಪಟ್ಟಿ ಪ್ರಕಟ: CET ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರೀತಿ ಮಾಯೆ ಹುಷಾರು, ಇದು ಲವ್ ಪಾಯಿಸನ್
ಕಳೆದ ಮೂರು ತಿಂಗಳಿನಿಂದ ಕಥೆ ಹೆಣೆದಿರುವ ನಂದನ್ ಸದ್ಯಕ್ಕೆ ಫೈನಲ್ ಕಾಪಿ ಸಿದ್ಧಪಡಿಸುತ್ತಿದ್ದಾರೆ. ನಾಯಕನಾಗಿ ಹಳ್ಳಿ ಹೈದ ರಾಜೇಶ್ ಇದ್ದರೆ ಮತ್ತೊಬ್ಬ ನಾಯಕನಾಗಿ ತಬ್ಬಲಿ'ಯ ಆಕಾಶ್ಜಿತ್ ಇದ್ದಾರೆ.
ನಾಯಕಿಯಾಗಿ ಶೃತಿರಾಜ್ ಹೆಜ್ಜೆ ಹಾಕಲಿದ್ದಾರೆ. ನೀನ್ಯಾರೆ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಬೆಡಗಿ ಈಕೆ. ಕನ್ನಡದವಳೇ ಆಗಿದ್ದರೂ ಇಷ್ಟು ದಿನ ಅವಕಾಶವಿಲ್ಲದೇ ಇದ್ದದ್ದು ವಿಪರ್ಯಾಸ.
ಮತ್ತೊಬ್ಬ ನಾಯಕಿಯಾಗಿ ಮುಂಬೈನ ಬೆಡಗಿಯೊಬ್ಬಳು ಇರಲಿದ್ದಾಳೆ. ಆಯ್ಕೆ ಈಗಷ್ಟೇ ನಡೆಯುತ್ತಿದೆ.
ಶೀರ್ಷಿಕೆ ನೋಡಿದ ಮೇಲೆ ಕಥೆಯ ಬಗ್ಗೆ ಇನ್ನೇನು ಹೇಳುವ ಅವಶ್ಯಕಥೆ ಇದ್ದಂತಿಲ್ಲ. ಪ್ರೀತಿಯ ಸುತ್ತಲೇ ಗಿರಕಿ ಹೊಡೆದು ನಂತರ ಪ್ರೀತಿಯಿಂದಾಗುವ ಅನಾಹುತದ ಬಗ್ಗೆ ಹೇಳಹೊರಟಿದ್ದಾರೆ ನಂದನ್. ಕೆ.ಸೋಮಶೇಖರ್ ಎಂಬುವವರು ಹಣ ಸುರಿಯುತ್ತಿದ್ದಾರೆ.
ಸ್ವತಃ ಕತೆಯನ್ನು ನಿರ್ದೇಶಕ ನಂದನಪ್ರಭು ಅವರೇ ಹೆಣೆದಿದ್ದಾರೆ. ತಮ್ಮ ಕಂಡಕ್ಟರ್ ವೃತ್ತಿ ಜೀವನದ ಅನುಭವಗಳನ್ನೇ ಕತೆಯಾಗಿಸಿದ್ದಾರೆ. ಡ್ರೈವರ್ ಹಾಗೂ ಕಂಡಕ್ಟರ್ ಆಗಿ ಕಂಡ ಸತ್ಯಗಳು ಶೇ.60ರಷ್ಟು ಚಿತ್ರದಲ್ಲಿರುತ್ತವೆ.