Don't Miss!
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- News Bengaluru Rain: ಮುದ್ದಿನ ನಾಯಿಮರಿಗೆ ಮೊದಲ ಮಳೆ ತೋರಿಸಿ ಖುಷಿ ಪಟ್ಟ ವ್ಯಕ್ತಿ; ವಿಡಿಯೋ ವೈರಲ್
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ತಿಥಿ' ಸಿನಿಮಾ ನೋಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಏನಂದ್ರು ಗೊತ್ತಾ?
''ತಿಥಿ' ಸಿನಿಮಾ ನೋಡಿದೆ. ಚೆನ್ನಾಗಿದೆ, ಮನರಂಜನೆಯಾಗಿದೆ, ಉತ್ತಮ ಸಾಮಾಜಿಕ ಸಂದೇಶವಿದೆ, ಕಡಿಮೆ ಬಜೆಟ್, ಒಳ್ಳೆ ಸಿನಿಮಾ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು 9ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ 'ತಿಥಿ' ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
9ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಕನ್ನಡ ಸಿನಿಮಾ ಹಾಗೂ ಕನ್ನಡ ಚಿತ್ರರಂಗಕ್ಕೆ ಕೆಲವು ಸಲಹೆ, ಸೂಚನೆಗಳನ್ನ ನೀಡಿದರು.['ಬೆಂಗಳೂರು ಚಿತ್ರೋತ್ಸವ'ಕ್ಕೆ ಸಿ.ಎಂ ಚಾಲನೆ: ವಿಧಾನಸೌಧದ ಮೇಲೆ ಕನ್ನಡ ಸಂಸ್ಕ್ರತಿ ಅನಾವರಣ]
''ಇತ್ತೀಚೆಗೆ ಕನ್ನಡ ಚಿತ್ರಗಳು ದ್ವಂದ್ವಾರ್ಥವೇ ಮನರಂಜನೆ ಎಂದುಕೊಂಡಿವೆ. ಆದ್ರೆ, ಇದು ಜನಗಳಿಗೆ ನೋವು ತರುವಂತಹದು. ಹಾಗಂತ ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬರುತ್ತಿಲ್ಲ ಅಂತ ಅಲ್ಲಾ, ಅದರ ಜೊತೆ ಕೆಟ್ಟ ಚಿತ್ರಗಳು ಬರುತ್ತಿವೆ''[ಫೆ 2 ರಿಂದ 9ರ ವರೆಗೆ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ]
''ಬಂಗಾರದ ಮನುಷ್ಯ ಸಿನಿಮಾವನ್ನ ನಾನು ಆಗಲೇ 5 ಸಲ ನೋಡಿದ್ದೀನಿ. ಹಲವು ಜನರು, ಅದರಲ್ಲೂ ವಿದ್ಯಾವಂತರೇ ಈ ಸಿನಿಮಾ ನೋಡಿ, ಮತ್ತೆ ಹಳ್ಳಿಗಳಿಗೆ ವಾಪಾಸ್ಸಾಗಿರುವುದು ಉಂಟು. ಈಗ ಅಂತಹ ಸಾಮಾಜಿಕ ಸಿನಿಮಾಗಳು ಬರಬೇಕು''
''ಇತ್ತೀಚೆಗೆ ಅಗಲಿದ ನನ್ನ ಸ್ನೇಹಿತ ಸಚಿವ ಮಹದೇವ ಪ್ರಸಾದ್ 'ತಿಥಿ' ಅಂತ ಒಂದು ಸಿನಿಮಾ ಬಂದಿದೆ. ತುಂಬಾ ಚೆನ್ನಾಗಿದೆ, ಹಲವು ಅವಾರ್ಡ್ ಗಳನ್ನ ತಗೊಂಡಿದೆ. ನೋಡೋಣ ಬನ್ನಿ ಅಂತಾ ತೋರಿಸಿದ್ರು. ನೋಡಿದೆ, ಎಷ್ಟು ಚೆನ್ನಾಗಿದೆ ಗೊತ್ತಾ? ಮನರಂಜನೆನೂ ಇದೆ, ಸಂದೇಶನೂ ಇದೆ, ಹೆಚ್ಚು ಖರ್ಚು ಆಗಿಲ್ಲ, ಕಡಿಮೆ ಬಜೆಟ್, ಒಳ್ಳೆ ಸಿನಿಮಾ.'' ಅಂತ 'ತಿಥಿ' ಚಿತ್ರವನ್ನ ಶ್ಲಾಘಸಿದರು.[9ನೇ ಬೆಂಗಳೂರು ಚಿತ್ರೋತ್ಸವದಲ್ಲಿ 12 ಕನ್ನಡ ಚಿತ್ರಗಳು: ಯಾವುವು?]
ಇನ್ನೂ ಇದೇ ಸಂದರ್ಭದಲ್ಲಿ ಕನ್ನಡ ಸಿನಿಮಾಗಳಿಗೆ ಹಾಗೂ ಚಿತ್ರರಂಗದ ಬೆಳವಣಿಗೆಗೆ ಎಲ್ಲ ರೀತಿಯಲ್ಲೂ ಸರ್ಕಾರ ಬೆಂಬಲ ನೀಡುತ್ತೆ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.[9ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ವಿಶೇಷತೆಗಳು!]