Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ, ನಿರೂಪಕ ಅಕುಲ್ ಬಾಲಾಜಿ ವಿರುದ್ಧ ದೂರು ದಾಖಲು
ಸಾಮಾಜಿಕ ಮಾಧ್ಯಮಗಳಲ್ಲಿ ಸಮಾಜದ ಪರ ಕಾಳಜಿ ತೋರುವ ಸೆಲೆಬ್ರಿಟಿಗಳು ತಾವೇ ನಿಯಮಗಳನ್ನು ಮೀರಿ ಸಮಸ್ಯೆಗೆ ಸಿಕ್ಕಿಕೊಂಡು ಉದಾಹರಣೆಗಳು ಸಾಕಷ್ಟಿವೆ, ಇದಕ್ಕೆ ಹೊಸ ಸೇರ್ಪಡೆ ಅಕುಲ್ ಬಾಲಾಜಿ ಅವರದ್ದು.
Recommended Video
ಕೊರೊನಾ ಲಾಕ್ಡೌನ್ ನಿಯಮಾವಳಿಗಳ ಪ್ರಕಾರ ರೆಸಾರ್ಟ್, ಹೋಟೆಲ್ಗಳು, ಮನೊರಂಜನಾತ್ಮಕ ಸೇವೆ ಮಾರಾಟ ಕೇಂದ್ರಗಳು ತೆರೆಯುವಂತಿಲ್ಲ. ಆದರೆ ನಟ, ನಿರೂಪಕ ಅಕುಲ್ ಬಾಲಾಜಿ ಒಡೆತನದ ಸ್ಥಳದಲ್ಲಿ ನಿರ್ಮಿಸಲ್ಪಟ್ಟಿರುವ ರೆಸಾರ್ಟ್ ಒಂದು ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿದೆ.
ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಸನ್ಶೈನ್ ರೆಸಾರ್ಟ್ ನಿರ್ಮಾಣವಾಗಿರುವ ಸ್ಥಳದ ಮಾಲೀಕ ಮಾಲೀಕ ಅಕುಲ್ ಬಾಲಾಜಿ ಮತ್ತು ರೆಸಾರ್ಟ್ನ ಶ್ರೀನಿವಾಸಮಣಿಯಂ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಲಗುಮೇನಹಳ್ಳಿ ಬಳಿ ಇರುವ ಸನ್ಶೈನ್ ಬೈ ಜೇಡ್ ರೆಸಾರ್ಟ್
ಅಕುಲ್ ಬಾಲಾಜಿ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಲಗುಮೇನಹಳ್ಳಿ ಬಳಿಯಲ್ಲಿ ಸ್ಥಳವನ್ನು ಹೊಂದಿದ್ದು ಅಲ್ಲಿ ಸನ್ ಶೈನ್ ಬೈ ಜೇಡ್ ರೆಸಾರ್ಟ್ ನಿರ್ಮಿಸಲಾಗಿದೆ.
ದೊಡ್ಡಬಳ್ಳಾಪುರ ಠಾಣೆಯಲ್ಲಿ ದೂರು ದಾಖಲು
ಮಂಜುನಾಥ ಎಂಬುವರು ಅಕುಲ್ ಬಾಲಾಜಿ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಭಾನುವಾರ ಸಂಜೆ ದೂರು ದಾಖಲಾಗಿ, ಎಫ್ಐಆರ್ ಸಹ ರಿಜಿಸ್ಟರ್ ಆಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶನಿವಾರ ರಾತ್ರಿ ರೆಸಾರ್ಟ್ ಬಂದಿದ್ದ ಜನರ ಗುಂಪು
ದೂರಿನ ಅನ್ವಯ, ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಸುಮಾರು 20 ಮಂದಿ ಏಕಾ-ಏಕಿ ಅಕುಲ್ ಬಾಲಾಜಿ ಒಡೆತನದ ಸನ್ಶೈನ್ ರೆಸಾರ್ಟ್ ಗೆ ಬಂದು ಮದುವೆಗೆ ತಯಾರಿ ನಡೆಸುತ್ತಿದ್ದಾರೆ. ಕೊರೊನಾ ಲಾಕ್ಡೌನ್ ನಿಯಮಗಳ ಪ್ರಕಾರ ರೆಸಾರ್ಟ್ ತೆರೆಯುವಂತಿಲ್ಲ, ಅಲ್ಲದೆ ಯಾವುದೇ ಸಮಾರಂಭ ಸ್ಥಳೀಯ ಠಾಣೆ ಅಥವಾ ಜಿಲ್ಲಾಡಳಿತದಿಂದ ಪೂರ್ವಾನುಮತಿ ಕಡ್ಡಾಯ. ಇದನ್ನೆಲ್ಲಾ ಗಾಳಿಗೆ ತೂರಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
|
ಮನೆಯಲ್ಲೇ ಇರಿ ಎಂದು ಪೋಸ್ಟ್ ಹಾಕಿದ್ದ ಅಕುಲ್ ಬಾಲಾಜಿ
ವಿಪರ್ಯಾಸವೆಂದರೆ ಅಕುಲ್ ಬಾಲಾಜಿ ಅವರು ಸಾಮಾಜಿಕ ಜಾಲತಾಣದಲ್ಲಿ ಏಪ್ರಿಲ್ 1 ರಂದು ಪೋಸ್ಟ್ ಹಾಕಿ, ಎಲ್ಲರೂ ಮನೆಯಲ್ಲಿಯೇ ಇರಿ, ಎಲ್ಲರೂ ಸುರಕ್ಷಿತವಾಗಿರಿ ಎಂದಿದ್ದರು. ಬೆಂಗಳೂರು ಪೊಲೀಸರ ಪೋಸ್ಟ್ ಅನ್ನು ಶೇರ್ ಸಹ ಮಾಡಿದ್ದರು. ಆದರೆ ಈಗ ಅವರ ಒಡೆತನದ ರೆಸಾರ್ಟ್ ಲಾಕ್ಡೌನ್ ನಿಯಮವನ್ನು ಉಲ್ಲಂಘಿಸಿದೆ.