Don't Miss!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- News ಚಾಮರಾಜನಗರ: ಚೊಂಬುಗಳ ಪಾರ್ಟಿ ಕಾಂಗ್ರೆಸ್
- Lifestyle ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಗಾಂಜಾ ಸಾಂಗ್' ಚಂದನ್ ಶೆಟ್ಟಿಗೆ ಪೊಲೀಸರಿಂದ ಖಡಕ್ ವಾರ್ನಿಂಗ್
Recommended Video
ಬೆಂಗಳೂರು, ಆಗಸ್ಟ್ 27: ಕನ್ನಡ rapper, ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿಗೆ ಸಿಸಿಬಿ ಪೊಲೀಸರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಎಣ್ಣೆ, ಗಾಂಜಾ, ಭಂಗಿ ಎಂದು ಹಾಡು ಹಾಡ್ತಿದ್ದ ಚಂದನ್ ಶೆಟ್ಟಿ ಮೇಲೆ ಈಗ ಸಿಸಿಬಿ ಪೊಲೀಸರು ಸಿಟ್ಟಾಗಿದ್ದಾರೆ.
ಈ ಹಿಂದೆ ಅಂತ್ಯ ಸಿನಿಮಾಗಾಗಿ ಚಂದನ್ ಶೆಟ್ಟಿ ಮಾಡಿದ್ದ ಹಾಡೊಂದು ಇದೀಗ ಸಿಸಿಬಿ ಪೊಲೀಸರ ಮಾದಕ ವಸ್ತು ನಿಗ್ರಹ ವಿಭಾಗದ ಕಣ್ಣು ಕೆಂಪಗಾಗಿಸಿದೆ. ಆ ಹಾಡಿನಲ್ಲಿ ಗಾಂಜಾ, ಮತ್ತು ಇತರ ಮಾದಕ ದ್ರವ್ಯಗಳ ಪರವಾದ ಸಾಹಿತ್ಯ ಇರುವುದು ಪೊಲೀಸರ ಸಿಟ್ಟಿಗೆ ಕಾರಣವಾಗಿದೆ.
ಮಾದಕ ದ್ರವ್ಯ ತಡೆ ವಿಭಾಗದ ಸಿಸಿಬಿ ಪೊಲೀಸ್ ಅಸಿಸ್ಟಂಟ್ ಕಮಿಷನರ್ ಬಿ.ಎಸ್.ಮೋಹನ್ ಕುಮಾರ್ ಅವರು ಚಂದನ್ ಶೆಟ್ಟಿ ಅವರಿಗೆ ನೊಟೀಸ್ ಕಳುಹಿಸಿದ್ದು, ಖುದ್ದು ಬಂದು ವಿಚಾರಣೆ ಎದುರಿಸುವಂತೆ ಸೂಚಿಸಿದ್ದರು.
ಅಂತ್ಯ ಚಿತ್ರದ ಹಾಡು ಅದು
2015ರಲ್ಲಿ ಬಿಡುಗಡೆ ಆಗಿದ್ದ ಅಂತ್ಯ ಚಿತ್ರದ ಭಂಗಿ ಹಾಡಿನಲ್ಲಿ ಗಾಂಜಾ ಮತ್ತಿತರೆ ಮಾದಕ ವಸ್ತುಗಳ ಸೇವನೆಗೆ ಪ್ರೋತ್ಸಾಹ ನೀಡುವಂತಹಾ ಸಾಹಿತ್ಯ ಇದೆ ಹಾಗಾಗಿ ನಾವೇಕೆ ನಿಮ್ಮ ಮೇಲೆ ಪ್ರಕರಣ ದಾಖಲಿಸಬಾರದು ಎಂದು ಪೊಲೀಸ್ ಅಧಿಕಾರಿ ನೊಟೀಸ್ನಲ್ಲಿ ಪ್ರಶ್ನಿಸಿದ್ದರು.
ಮಾದಕ ವ್ಯಸನದ ಪರವಾದ ಸಾಹಿತ್ಯ
ಧಮ್ಮು ಬಿಡಬೇಡ, ಅದೇ ನಮಗೆ 'ಬಿಯರ್ ಎತ್ತೋದು ಹಳತಾಗಿದೆ, ಗಾಂಜಾ ಎಳೆಯೊದು ಹೊಸದಾಗಿದೆ', 'ಭಂಗಿ ಎಳಕೊಂಡು ನಗುತಾ ಇರು', 'ಶಿವನು ಹಿಡಿದರೆ ಭಂಗಿಯಂತೆ, ನಾವು ಹಿಡಿದರೆ ಕಂಬಿ ಅಂತೆ', 'ಬಿಡಬೇಡ ಧಮ್ಮು, ನಮ್ಮಯ ಪಾಲಿಗೆ ಇದೇ ವಿಸ್ಕಿ, ರಮ್ಮು' ಎಂಬ ಸಾಲುಗಳು ಹಾಡಿನಲ್ಲಿದೆ.
ನಿಜಕ್ಕೂ '3-ಪೆಗ್' ಸಾಂಗ್ ಯಾರದ್ದು.? 'ಇತಿಹಾಸ' ಬಿಚ್ಚಿಟ್ಟ ಚಂದನ್ ಶೆಟ್ಟಿ
ಸಿಸಿಬಿಯ ಮಾದಕ ವಸ್ತು ತಡೆ ವಿಭಾಗ
ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಅಬ್ಬರ ಹೆಚ್ಚಾಗಿರುವ ಕಾರಣ ಸರ್ಕಾರದ ಅಣತಿಯಂತೆ ಸಿಸಿಬಿ ತಂಡವು ಮಾದಕ ವಸ್ತುಗಳ ವಿರುದ್ಧ ವಿಭಾಗವೊಂದನ್ನು ತೆರೆದು ಕಾರ್ಯಚಾರಣೆ ನಡೆಸುತ್ತಿದೆ. ಈಗ ಸಿಸಿಬಿಯ ಇದೇ ವಿಭಾಗವು ಚಂದನ್ ಶೆಟ್ಟಿಗೆ ಸಮನ್ಸ್ ನೀಡಿದೆ.
ವಿಚಾರಣೆ ಎದುರಿಸದಿದ್ದರೆ ಬಂಧನ ಸಾಧ್ಯತೆ
ವಿಚಾರಣೆ ಎದುರಿಸುವಂತೆ ಚಂದನ್ ಶೆಟ್ಟಿಗೆ ಸದ್ಯ ಪೊಲೀಸರು ಹೇಳಿದ್ದಾರೆ. ಅಕಸ್ಮಾತ್ ವಿಚಾರಣೆ ಎದುರಿಸದಿದ್ದರೆ ಚಂದನ್ ಶೆಟ್ಟಿ ವಿರುದ್ದ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ. ಮಾದಕ ವಸ್ತುಗಳ ಪರವಾಗಿ ಸಾಹಿತ್ಯ ರಚನೆ ಮುಂದುವರೆದರೆ ಕೂಡಾ ಚಂದನ್ ಶೆಟ್ಟಿ ವಿರುದ್ದ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ.
ಚಂದನ್ ಶೆಟ್ಟಿ ಕಾಲೆಳೆದು, ಟಾಂಗ್ ಕೊಟ್ರಾ ಕನ್ನಡ rapper ಅಲೋಕ್, ರಾಹುಲ್.?