Don't Miss!
- News Gold Rates Today: ನಿನ್ನೆಗಿಂತ ಕೊಂಚ ಇಳಿಕೆಯಾದ ಚಿನ್ನದ ಬೆಲೆ, ಯಾವ ನಗರದಲ್ಲಿ ಎಷ್ಟು?
- Finance ನೂಡಲ್ಸ್ ಪ್ಯಾಕೆಟ್ ಒಳಗಿತ್ತು ವಜ್ರಗಳ ರಾಶಿ, ಬರೋಬ್ಬರಿ 6.46 ಕೋಟಿ ರೂ. ಮೌಲ್ಯದ ಚಿನ್ನ, ಡೈಮಂಡ್ ವಶ!
- Technology ಇಂದು ವಿವೋ T3x 5G ಸ್ಮಾರ್ಟ್ಫೋನ್ ಫಸ್ಟ್ ಸೇಲ್; ಬೆಲೆ 13,499ರೂ.!
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Lifestyle ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೀರ್ತಿ ಗೌಡಗೆ ಚಪ್ಪಲಿ ಥಳಿತ: ಅಂದು ಸುಳ್ಳು ಹೇಳಿದ್ರಾ ನಾಗರತ್ನ.?
Recommended Video
ಸೈಲೆಂಟ್ ಆಗಿದ್ದ ದುನಿಯಾ ವಿಜಯ್ ಪತ್ನಿ ನಾಗರತ್ನ ಕಳೆದ ತಿಂಗಳು ಅಂದ್ರೆ ಸೆಪ್ಟೆಂಬರ್ 23 ರಂದು ದಿಢೀರ್ ಅಂತ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
''ಸುಮಾರು 9 ಗಂಟೆ ಸಮಯದಲ್ಲಿ ಕೀರ್ತಿಗೌಡ ಮತ್ತು ಅವರ ಜೊತೆ ಇಬ್ಬರು ಹುಡುಗರು ನನ್ನನ್ನು ಮನೆಯ ಒಳಗಡೆ ಬಿಡದೇ ಮಕ್ಕಳನ್ನು ಮಾತನಾಡಿಸದಂತೆ ತಡೆದು, ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿದ್ದಾರೆ'' ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ನಾಗರತ್ನ ದೂರು ಕೊಟ್ಟರು.
ಇದೇ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಅಂದು ಮನೆಯಲ್ಲಿ ನಡೆದ ಗಲಾಟೆಯ ಸಿಸಿಟಿವಿ ವಿಡಿಯೋ ಫುಟೇಜ್ ಬಟಾಬಯಲಾಗಿದೆ. ಕೀರ್ತಿಗೌಡ ಮೇಲೆ ನಾಗರತ್ನ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಮುಂದೆ ಓದಿರಿ...
ಹಲ್ಲೆ ನಡೆಸಿದ್ದು ನಾಗರತ್ನ.!
ಮನೆಯಲ್ಲಿ ಇದ್ದ ದುನಿಯಾ ವಿಜಯ್ ಎರಡನೇ ಪತ್ನಿ ಕೀರ್ತಿ ಗೌಡ ಮೇಲೆ ಹಲ್ಲೆ ನಡೆಸಿರುವುದು ನಾಗರತ್ನ. ಕೀರ್ತಿ ಗೌಡ ಮೇಲೆ ಚಪ್ಪಲಿಯಿಂದ ನಾಗರತ್ನ ಹಲ್ಲೆ ಮಾಡಿದ್ದಾರೆ. ಇದು ಇಂದು ಬಿಡುಗಡೆ ಆಗಿರುವ ಸಿಸಿಟಿವಿ ಫುಟೇಜ್ ನಲ್ಲಿ ಸೆರೆ ಆಗಿದೆ.
ಕೀರ್ತಿ ಗೌಡ-ದುನಿಯಾ ವಿಜಿ ನಡುವೆ ಅನೈತಿಕ ಸಂಬಂಧವಿದೆ: ದೂರಿನಲ್ಲಿ ನಾಗರತ್ನ ಉಲ್ಲೇಖ.!
ಮಾಂಗಲ್ಯ ಸರ ಕಿತ್ತು ಹಾಕಿದ ನಾಗರತ್ನ
ಕೀರ್ತಿ ಗೌಡ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನ ಇದೇ ಗಲಾಟೆ ಸಂದರ್ಭದಲ್ಲಿ ನಾಗರತ್ನ ಕಿತ್ತು ಹಾಕಿದ್ದರಂತೆ. ಇದಕ್ಕೆ ಸಾಕ್ಷಿಯಾಗಿ ಕುತ್ತಿಗೆಯಲ್ಲಿ ಗಾಯದ ಗುರುತುಗಳಿವೆ ಎನ್ನುತ್ತಾರೆ ಕೀರ್ತಿ ಗೌಡ.
ದುನಿಯಾ ವಿಜಯ್ ಮೊದಲ ಪತ್ನಿಯಿಂದ ಮತ್ತೊಂದು ದೂರು ದಾಖಲು.!
ನಾಗರತ್ನ ವಿರುದ್ಧ ದೂರು ಕೊಟ್ಟ ಕೀರ್ತಿ ಗೌಡ
ಸೆಪ್ಟೆಂಬರ್ 23 ರಂದು ನಡೆದ ಹಲ್ಲೆ ವಿಚಾರವಾಗಿ ಅಕ್ಟೋಬರ್ 26 ರಂದು ಪೊಲೀಸ್ ಠಾಣೆಗೆ ಕೀರ್ತಿಗೌಡ ದೂರು ಕೊಟ್ಟಿದ್ದಾರೆ. ''ನನ್ನ ತಮ್ಮ ನಿನ್ನ ಕೊಚ್ಚಿ ಕೊಲೆ ಮಾಡಲು ಕಾಯುತ್ತಿದ್ದಾನೆ. ನಿನ್ನನ್ನ ಕೊಲೆ ಮಾಡಿಸಿಯೇ ತೀರುತ್ತೇನೆ ಎಂದು ನಾಗರತ್ನ ಬೆದರಿಕೆ ಹಾಕಿದ್ದಾರೆ'' ಎಂದು ದೂರಿನಲ್ಲಿ ಕೀರ್ತಿ ಗೌಡ ಉಲ್ಲೇಖಿಸಿದ್ದಾರೆ.
ನಾಗರತ್ನ ಕೊಟ್ಟ ಕಂಪ್ಲೇಂಟ್ ಕಾಪಿ ನೋಡಿ ಶಾಕ್ ಆಯ್ತು ಎಂದ ಕೀರ್ತಿ ಗೌಡ.!
ಅಂದು ಸುಳ್ಳು ದೂರು ಕೊಟ್ಟಿದ್ರಾ ನಾಗರತ್ನ.?
ತಾವೇ ಹಲ್ಲೆ ನಡೆಸಿ ಬಳಿಕ ಕೀರ್ತಿ ಗೌಡ ವಿರುದ್ಧ ನಾಗರತ್ನ ದೂರು ಕೊಟ್ರಾ.? ಮಾಧ್ಯಮಗಳ ಮುಂದೆ ಕೂತು ನಾಗರತ್ನ ಸುಳ್ಳು ಕಥೆ ಕಟ್ಟಿದ್ರಾ.? ಇದಕ್ಕೆ ಸ್ವತಃ ನಾಗರತ್ನ ಅವರೇ ಸ್ಪಷ್ಟ ಉತ್ತರ ಕೊಡಬೇಕು.
ಕೀರ್ತಿ ಗೌಡದು ದರಿದ್ರ ಕಾಲು: ಛೀಮಾರಿ ಹಾಕಿದ ದುನಿಯಾ ವಿಜಯ್ ಪತ್ನಿ ನಾಗರತ್ನ.!