Don't Miss!
- News ಬೆಂಗಳೂರಿನಲ್ಲಿ ಮೋದಿ ಮತಬೇಟೆ; ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಡಾ.ಜಿ ಪರಮೇಶ್ವರ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಲಸ ಮಾಡುವ ಹುಡುಗರು ಸ್ಟಾರ್ ಗಳನ್ನೇ ಹೆದರಿಸುತ್ತಾರಂತೆ.!
Recommended Video
ಸ್ಟಾರ್ ಗಳಿಗೆ ಅಭಿಮಾನಿಗಳು ಹೆಚ್ಚು. ಸೆಲೆಬ್ರಿಟಿಗಳಿಗೆ ಎಲ್ಲರೂ ಬೆಲೆ ಕೊಡುತ್ತಾರೆ. ಕಲಾವಿದರದ್ದು ಸುಖವಾದ ಜೀವನ ಎಂದು ಹಲವರು ಭಾವಿಸುತ್ತಾರೆ. ಆದ್ರೆ, ಪಾಪ ಅವರವರ ಕಷ್ಟ ಅವರವರಿಗೇ ಗೊತ್ತು.!
ಕಲಾವಿದರದ್ದು ಒಂಥರಾ ಗಾಜಿನ ಮನೆಯೊಳಗಿನ ಬದುಕು. ಯಾರಾದರೂ ಕಲ್ಲು ಹೊಡೆದರೆ, ಇಡೀ ಮನೆಗೆ ಹಾನಿ. ಹಾಗೇ, ಕಲಾವಿದರ ಬಗ್ಗೆ ಯಾರಾದರೂ ಆರೋಪ ಮಾಡಿದರೆ, ಜನಪ್ರಿಯತೆಗೆ ಕಪ್ಪು ಚುಕ್ಕೆ.
'ರೌಡಿ ಅಟ್ಯಾಕ್' ಬಗ್ಗೆ ಕೊನೆಗೂ ಮೌನ ಮುರಿದು ನಿಜ ಹೇಳಿದ ಯಶ್.!
ಅದರಲ್ಲೂ ಈಗ ಮಾಧ್ಯಮಗಳು ಹಾಗೂ ಸೋಷಿಯಲ್ ಮೀಡಿಯಾ ತುಂಬಾ ಪ್ರಭಾವಿ ಆಗಿರುವ ಕಾರಣ ಯಾರು ಬೇಕಾದರೂ ಕಲಾವಿದರ ಮೇಲೆ ಸುಲಭವಾಗಿ ಆರೋಪ ಮಾಡಬಹುದು. ಕೆಲಸ ಮಾಡುವ ಹುಡುಗರೂ ಕೂಡ ಸ್ಟಾರ್ ಗಳನ್ನು ಹೆದರಿಸಬಹುದು. ಹೀಗಂತ ನಾವು ಹೇಳ್ತಿಲ್ಲ. ಬದಲಾಗಿ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.
ಬಾಡಿಗೆ ಮನೆ ರಾದ್ಧಾಂತದ ಬಗ್ಗೆ ಕಡೆಗೂ ಸತ್ಯ ಬಾಯ್ಬಿಟ್ಟ ನಟ ಯಶ್.!
ತಮ್ಮ ಬಾಡಿಗೆ ಮನೆ ರಂಪಾಟದ ಬಗ್ಗೆ ಸ್ಪಷ್ಟನೆ ನೀಡಲು ಫೇಸ್ ಬುಕ್ ಲೈವ್ ಗೆ ಬಂದಿದ್ದ ಯಶ್, ''ಕಲಾವಿದರನ್ನ ರೋಡ್ ನಲ್ಲಿ ಹೋಗುವವರೂ ಹೆದರಿಸಬಹುದು. ಯಾಕೆ ಅಂದ್ರೆ, ಸೋಷಿಯಲ್ ಮೀಡಿಯಾ ಹಾಗೂ ಮೀಡಿಯಾದಲ್ಲಿ ಕಲಾವಿದರ ಬಗ್ಗೆ ಏನು ಬೇಕಾದರೂ ಹಾಕಬಹುದು. ಒಂದು ಉದಾಹರಣೆ ಕೊಡ್ತೀನಿ... ಕೆಲಸ ಸರಿಯಾಗಿ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಒಬ್ಬ ಹುಡುಗನನ್ನ ಕೆಲಸದಿಂದ ತೆಗೆದರೆ, ಮಾಧ್ಯಮದ ಮುಂದೆ ಹೋಗ್ತೀನಿ, ಸಮಾಜದಲ್ಲಿ ಮರ್ಯಾದೆ ಕಳೆಯುತ್ತೇನೆ ಅಂತ ಆ ಹುಡುಗ ಕಲಾವಿದರನ್ನೇ ಹೆದರಿಸುತ್ತಾನೆ'' ಎಂದಿದ್ದಾರೆ.
ಹಠಕ್ಕೆ ಬಿದ್ದ ನಟ ಯಶ್: ದಿಢೀರ್ ಅಂತ ಪೆಂಟ್ ಹೌಸ್ ಖರೀದಿಸಿದ ರಹಸ್ಯ ಬಯಲು.!
ಸೋಷಿಯಲ್ ಮೀಡಿಯಾದಿಂದ ಸ್ಟಾರ್ ಗಳು ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಿದ್ದಾರೆ. ಆದ್ರೆ, ಅದೇ ಸೋಷಿಯಲ್ ಮೀಡಿಯಾ ಈಗ ಎಡವಟ್ಟುಗಳಿಗೂ ಕಾರಣ ಆಗುತ್ತಿರುವುದು ದುರಂತ.