Don't Miss!
- Lifestyle ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಲಸ ಮಾಡುವ ಹುಡುಗರು ಸ್ಟಾರ್ ಗಳನ್ನೇ ಹೆದರಿಸುತ್ತಾರಂತೆ.!
Recommended Video
ಸ್ಟಾರ್ ಗಳಿಗೆ ಅಭಿಮಾನಿಗಳು ಹೆಚ್ಚು. ಸೆಲೆಬ್ರಿಟಿಗಳಿಗೆ ಎಲ್ಲರೂ ಬೆಲೆ ಕೊಡುತ್ತಾರೆ. ಕಲಾವಿದರದ್ದು ಸುಖವಾದ ಜೀವನ ಎಂದು ಹಲವರು ಭಾವಿಸುತ್ತಾರೆ. ಆದ್ರೆ, ಪಾಪ ಅವರವರ ಕಷ್ಟ ಅವರವರಿಗೇ ಗೊತ್ತು.!
ಕಲಾವಿದರದ್ದು ಒಂಥರಾ ಗಾಜಿನ ಮನೆಯೊಳಗಿನ ಬದುಕು. ಯಾರಾದರೂ ಕಲ್ಲು ಹೊಡೆದರೆ, ಇಡೀ ಮನೆಗೆ ಹಾನಿ. ಹಾಗೇ, ಕಲಾವಿದರ ಬಗ್ಗೆ ಯಾರಾದರೂ ಆರೋಪ ಮಾಡಿದರೆ, ಜನಪ್ರಿಯತೆಗೆ ಕಪ್ಪು ಚುಕ್ಕೆ.
'ರೌಡಿ ಅಟ್ಯಾಕ್' ಬಗ್ಗೆ ಕೊನೆಗೂ ಮೌನ ಮುರಿದು ನಿಜ ಹೇಳಿದ ಯಶ್.!
ಅದರಲ್ಲೂ ಈಗ ಮಾಧ್ಯಮಗಳು ಹಾಗೂ ಸೋಷಿಯಲ್ ಮೀಡಿಯಾ ತುಂಬಾ ಪ್ರಭಾವಿ ಆಗಿರುವ ಕಾರಣ ಯಾರು ಬೇಕಾದರೂ ಕಲಾವಿದರ ಮೇಲೆ ಸುಲಭವಾಗಿ ಆರೋಪ ಮಾಡಬಹುದು. ಕೆಲಸ ಮಾಡುವ ಹುಡುಗರೂ ಕೂಡ ಸ್ಟಾರ್ ಗಳನ್ನು ಹೆದರಿಸಬಹುದು. ಹೀಗಂತ ನಾವು ಹೇಳ್ತಿಲ್ಲ. ಬದಲಾಗಿ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.
ಬಾಡಿಗೆ ಮನೆ ರಾದ್ಧಾಂತದ ಬಗ್ಗೆ ಕಡೆಗೂ ಸತ್ಯ ಬಾಯ್ಬಿಟ್ಟ ನಟ ಯಶ್.!
ತಮ್ಮ ಬಾಡಿಗೆ ಮನೆ ರಂಪಾಟದ ಬಗ್ಗೆ ಸ್ಪಷ್ಟನೆ ನೀಡಲು ಫೇಸ್ ಬುಕ್ ಲೈವ್ ಗೆ ಬಂದಿದ್ದ ಯಶ್, ''ಕಲಾವಿದರನ್ನ ರೋಡ್ ನಲ್ಲಿ ಹೋಗುವವರೂ ಹೆದರಿಸಬಹುದು. ಯಾಕೆ ಅಂದ್ರೆ, ಸೋಷಿಯಲ್ ಮೀಡಿಯಾ ಹಾಗೂ ಮೀಡಿಯಾದಲ್ಲಿ ಕಲಾವಿದರ ಬಗ್ಗೆ ಏನು ಬೇಕಾದರೂ ಹಾಕಬಹುದು. ಒಂದು ಉದಾಹರಣೆ ಕೊಡ್ತೀನಿ... ಕೆಲಸ ಸರಿಯಾಗಿ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಒಬ್ಬ ಹುಡುಗನನ್ನ ಕೆಲಸದಿಂದ ತೆಗೆದರೆ, ಮಾಧ್ಯಮದ ಮುಂದೆ ಹೋಗ್ತೀನಿ, ಸಮಾಜದಲ್ಲಿ ಮರ್ಯಾದೆ ಕಳೆಯುತ್ತೇನೆ ಅಂತ ಆ ಹುಡುಗ ಕಲಾವಿದರನ್ನೇ ಹೆದರಿಸುತ್ತಾನೆ'' ಎಂದಿದ್ದಾರೆ.
ಹಠಕ್ಕೆ ಬಿದ್ದ ನಟ ಯಶ್: ದಿಢೀರ್ ಅಂತ ಪೆಂಟ್ ಹೌಸ್ ಖರೀದಿಸಿದ ರಹಸ್ಯ ಬಯಲು.!
ಸೋಷಿಯಲ್ ಮೀಡಿಯಾದಿಂದ ಸ್ಟಾರ್ ಗಳು ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಿದ್ದಾರೆ. ಆದ್ರೆ, ಅದೇ ಸೋಷಿಯಲ್ ಮೀಡಿಯಾ ಈಗ ಎಡವಟ್ಟುಗಳಿಗೂ ಕಾರಣ ಆಗುತ್ತಿರುವುದು ದುರಂತ.