Don't Miss!
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Automobiles 20 ವರ್ಷದ ಬಳಿಕ ಲ್ಯಾಂಬೋರ್ಗಿನಿ ಲೋಗೋಗೆ ಹೊಸ ಟಚ್: ಈ ಕಂಪನಿಯ ಕಾರುಗಳು ಯಾಕೆ ಫೇಮಸ್?
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾತು ಕೊಟ್ಟ ಸುದೀಪ್, ಭಾವುಕರಾದ ಜಗ್ಗೇಶ್, ಉಪ್ಪಿ ಏನಂದ್ರು.?
ರಾಜಕೀಯ ಬೇಡ, ಪ್ರಜಾಕೀಯ ಬೇಕು ಎನ್ನುವ ರಿಯಲ್ ಸ್ಟಾರ್ ಉಪ್ಪಿ ''ಚುನಾವಣೆ ವ್ಯಾಪಾರ ಆದಾಗ.... ಏನಾಗುತ್ತೆ.? ಎಂದು ಟ್ವೀಟ್ ಮಾಡಿದ್ದಾರೆ.
'ಸುದೀಪ್ ಸರ್ ನಿಮ್ಮನ್ನ ಭೇಟಿಯಾಗಲು ನಾನು ತುಂಬಾ ದಿನದಿಂದ ಕಾಯುತ್ತಿದ್ದೇನೆ. ನೀವು ಜಸ್ಟ್ ಹಾಯ್ ಎಂದು ಹೇಳಿ ಹೋಗಿಬಿಡ್ತೀರಾ, ನಿಮ್ಮ ಜೊತೆ ನಾವು ಹೆಚ್ಚು ಮಾತನಾಡಬೇಕು ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ''. ಇವರಿಗೆ ಸುದೀಪ್ ಕೊಟ್ಟ ಮಾತೇನು.?
'ರಣಧೀರ' ಚಿತ್ರದ ಚಿತ್ರೀಕರಣ ನಡೆಯುವಾಗ ಸಂಗೀತ ನಿರ್ದೇಶಕ ಹಂಸಲೇಖ ಅವರು, ನಟ ಜಗ್ಗೇಶ್ ಗೆ ಮರೆಯಲಾಗದ ಸಹಾಯ ಮಾಡಿದ್ದರಂತೆ. ಏನದು.? ಇವರ ಜೊತೆ ಶ್ರದ್ಧಾ ಶ್ರೀನಾಥ್, ಶಾನ್ವಿ ಶ್ರೀವಾಸ್ತವ್, ಗಣೇಶ್ ಕೂಡ ಟ್ವೀಟ್ ಮಾಡಿದ್ದಾರೆ. ಹಾಗಿದ್ರೆ, ಈ ದಿನ ಯಾವ ಸ್ಟಾರ್, ಏನು ಟ್ವೀಟ್ ಮಾಡಿದ್ದಾರೆ ಎಂದು ನೋಡಿ...ಮುಂದೆ ಓದಿ....
— Upendra (@nimmaupendra) June 15, 2018 |
ಚುನಾವಣೆ ವ್ಯಾಪಾರ ಆದಾಗ.?
ರಿಯಲ್ ಸ್ಟಾರ್ ಉಪೇಂದ್ರ ಅವರು ನಿರೀಕ್ಷೆಯಂತೆ ರಾಜಕೀಯದ ವಿರುದ್ಧ ಹೇಳಿಕೆಯನ್ನ ಪೋಸ್ಟ್ ಮಾಡಿದ್ದಾರೆ. ''ಚುನಾವಣೆ ವ್ಯಾಪಾರ ಆದಾಗ, ಶಿಕ್ಷಣ ವ್ಯಾಪಾರ ಆಗುತ್ತೆ....ಆರೋಗ್ಯ ವ್ಯವಸ್ಥೆ ವ್ಯಾಪಾರ ಆಗುತ್ತೆ.....ಆಡಳಿತ ವ್ಯವಸ್ಥೆ ವ್ಯಾಪಾರ ಆಗುತ್ತೆ...ವ್ಯಾಪಾರದ ರಾಜಕಾರಣ ಬೇಡ.....ವಿಚಾರಗಳ ಪ್ರಜಾಕಾರಣ ಬೇಕು...ನಿಮ್ಮ ಉಪ್ಪಿ'' ಎಂದು ಟ್ವೀಟ್ ಮಾಡಿದ್ದಾರೆ.
|
'ಗುಡ್ ಮಾರ್ನಿಂಗ್' ಗಣೇಶ್
ಗೋಲ್ಡನ್ ಸ್ಟಾರ್ ಗಣೇಶ್ ತಮ್ಮದೊಂದು ಬ್ಯೂಟಿಫುಲ್ ಫೋಟೋ ಹಾಕಿ, 'ಗುಡ್ ಮಾರ್ನಿಂಗ್' ಹೇಳುವ ಮೂಲಕ ಟ್ವೀಟರ್ ಫಾಲೋವರ್ಸ್ ಗೆ ಶುಭಾಶಯ ತಿಳಿಸಿದ್ದಾರೆ. ಅದನ್ನ ಬಿಟ್ಟರೇ ಬೇರೆ ಏನೂ ವಿಶೇಷವಿಲ್ಲ.
|
'ಕಥೆಯೊಂದು ಶುರುವಾಗಿದೆ' ಎಂದ ಶಾನ್ವಿ
ದಿಗಂತ್ ಅಭಿನಯದ 'ಕಥೆಯೊಂದು ಶುರುವಾಗಿದೆ' ಚಿತ್ರದ ಟ್ರೈಲರ್ ಪೋಸ್ಟ್ ಮಾಡುವ ಮೂಲಕ, ನಟ ದಿಗಂತ್ ಮತ್ತು ತಂಡಕ್ಕೆ ನಟಿ ಶಾನ್ವಿ ಶ್ರೀವಾಸ್ತವ್ ವಿಶ್ ಮಾಡಿದ್ದಾರೆ.
|
ಹಂಸಲೇಖ ಬಗ್ಗೆ ಜಗ್ಗೇಶ್ ಮಾತು
ಶೂಟಿಂಗ್ ವೇಳೆ ಸಂಗೀತ ನಿರ್ದೇಶಕ ಹಂಸಲೇಖ ಅವರು ಜಗ್ಗೇಶ್ ಅವರಿಗೆ ಸಹಾಯ ಮಾಡಿದ್ದರಂತೆ. ಈ ಬಗ್ಗೆ ಜಗ್ಗೇಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡು ಭಾವುಕರಾಗಿದ್ದಾರೆ. ಈ ವಿಡಿಯೋವನ್ನ ಹಂಚಿಕೊಂಡಿರುವ ಜಗ್ಗೇಶ್ ''ಹಂಸಲೇಖ ನನ್ನ ಹೃದಯದಲ್ಲಿ ನಿರಂತರ ಉಳಿದಿರುವ ಸ್ನೇಹಜೀವಿ'' ಎಂದು ಟ್ವೀಟ್ ಮಾಡಿದ್ದರು.
|
ದಿಗಂತ್ ಸಿನಿಮಾ ಮೆಚ್ಚಿದ ಶ್ರದ್ಧಾ
ದಿಗಂತ್ ಮತ್ತು ಪೂಜಾ ದೇವರಿಯಾ ಅಭಿನಯದ 'ಕಥೆಯೊಂದು ಶುರುವಾಗಿದೆ' ಚಿತ್ರದಲ್ಲಿ ಇಬ್ಬರು ನೋಡಲು ತುಂಬಾ ಮುದ್ದಾಗಿ ಕಾಣುತ್ತಿದ್ದೀರಾ. ಈ ಚಿತ್ರವನ್ನ ನೋಡಲಯ ಕಾಯುತ್ತಿದ್ದೇನೆ ಎಂದು ನಟಿ ಶ್ರದ್ಧಾ ಶ್ರೀನಾಥ್ ಟ್ವೀಟ್ ಮಾಡಿದ್ದಾರೆ.
|
ಅಭಿಮಾನಿಗೆ ಪ್ರತಿಕ್ರಿಯಿಸಿದ ಸುದೀಪ್
''ಸುದೀಪ್ ಸರ್ ನಿಮ್ಮನ್ನ ಭೇಟಿಯಾಗಲು ನಾನು ತುಂಬಾ ದಿನದಿಂದ ಕಾಯುತ್ತಿದ್ದೇನೆ. ನೀವು ಜಸ್ಟ್ ಹಾಯ್ ಎಂದು ಹೇಳಿ ಹೋಗಿಬಿಡ್ತೀರಾ, ನಿಮ್ಮ ಜೊತೆ ನಾವು ಹೆಚ್ಚು ಮಾತನಾಡಬೇಕು ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸುದೀಪ್ ''ಖಂಡಿತವಾಗಿಯೋ ಒಮ್ಮೆ ಭೇಟಿ ಮಾಡೋಣ'' ಎಂದು ಉತ್ತರ ಕೊಟ್ಟಿದ್ದಾರೆ.