Don't Miss!
- News ಲೋಕಸಭಾ ಚುನಾವಣೆ 2024: ಈ ಆರು ಜಿಲ್ಲೆಗಳಲ್ಲಿ ಬಹುತೇಕ ಶೂನ್ಯ ಮತದಾನ; ಕಾರಣವೇನು?
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಚೇರ್ಮನ್' ಟೈಟಲ್ ಸಾಂಗ್ ಬಿಡುಗಡೆ ಮಾಡಿದ ಮರಿಟೈಗರ್
ಹಳ್ಳಿ ರಾಜಕೀಯದ ಹಿನ್ನೆಲೆಯಲ್ಲಿ ಈಗಿನ ಯುವಕರಿಗೆ ಸಂದೇಶ ಹೇಳುವಂತಹ 'ಚೇರ್ಮನ್' ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಇತ್ತೀಚಿಗಷ್ಟೆ ಚಿತ್ರದ ಟೈಟಲ್ ಹಾಡನ್ನ ಮರಿ ಟೈಗರ್ ವಿನೋದ್ ಪ್ರಭಾಕರ್ ರಿಲೀಸ್ ಮಾಡಿದ್ದಾರೆ.
ಬಸವರಾಜ್ ಹಿರೇಮಠ್ ಈ ಚಿತ್ರವನ್ನ ನಿರ್ದೇಶಿಸಿದ್ದಾರೆ. ಈ ಹಿಂದೆ 'ಅಮರೇಶ್ವರ ಮಹಾತ್ಮೆ' ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದ ಬಸವರಾಜ್ ಹಿರೇಮಠ್ ಅವರು ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಯಚೂರು, ಬೆಂಗಳೂರು, ಮಂಗಳೂರು ಹಾಗೂ ಹುಬ್ಬಳ್ಳಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ''ಯಕ್ಕಾ ನಿನ್ನ ಮಗಳು ಚಿಕ್ಕವಳಾಗಲ್ವಾ'' ಖ್ಯಾತಿಯ ಶಿವು ಬೆರಗಿ ಈ ಚಿತ್ರಕ್ಕೆ 4 ಹಾಡುಗಳನ್ನು ರಚಿಸಿದ್ದಾರೆ.
ಇನ್ನುಳಿದಂತೆ ಮನು, ರಾಧಶ್ರೀ, ಹನಿ, ಮುತ್ತು, ಬಾಲರಾಜ್ ವಾಡಿ, ಕುಶನ್ ಗೌಡ, ಗವಿ ಕನಕಗಿರಿ, ಶಿವಕುಮಾರ್ ಆರಾಧ್ಯ, ಆಶಾನಾಯಕ್, ಲಿಖಿತೇಶ್, ಪ್ರೇಮ, ಬಸªರಾಜ್ ತಿರ್ಲಾಪುರ್, ಮಾಸ್ಟರ್ ಮಂಜುನಾಥ್, ಮುಂತಾದವರ ತಾರಾಬಳಗವಿದೆ.
ಆಲಮಟ್ಟಿ ಸುತ್ತಮುತ್ತ ''ಬೆಟ್ಟದ ದಾರಿ'' ಹಾಡುಗಳ ಚಿತ್ರೀಕರಣ
ಚಂದ್ರಕಲಾ ಟಿ.ಆರ್. ಹಾಗೂ ಮಂಜುನಾಥ್ ನಾಯಕ್ ನಿರ್ಮಿಸುತ್ತಿರುವ 'ಬೆಟ್ಟದ ದಾರಿ' ಚಿತ್ರಕ್ಕೆ ಇತ್ತೀಚೆಗೆ ಆಲಮಟ್ಟಿ, ದೇವರ ಉಪ್ಪರಗಿ, ಉತ್ನಾಳ್, ಇಂಗಳೇಶ್ವರ, ಸುತ್ತಮುತ್ತ ''ಬೆಳ್ಳಕ್ಕಿ ಸಾಲಂತೆ ಹಾರಾಡೋ ಆಸೆ ಈಗ, ಬದುಕೇ ಕಸಿದ ಪಾಪಿ ನೀನ್ಯಾರೋ'' ಎಂಬ ಹಾಡುಗಳೊಂದಿಗೆ ಒಟ್ಟು 4 ಹಾಡುಗಳನ್ನು ಚಿತ್ರೀಕರಿಸಿ ಕೊಳ್ಳಲಾಯಿತು. ಇದರೊಂದಿಗೆ ಸಂಪೂರ್ಣ ಚಿತ್ರೀಕರಣ ಮುಗಿದಿದ್ದು, ಇದೀಗ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ.
ಮಾ. ಚಂದ್ರು ಕಥೆ - ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ. ಇನ್ನುಳಿದಂತೆ ಮಾಸ್ಟರ್ ನಿಶಾಂತ್ ಟಿ. ರಾಥೋಡ್, ಮಾಸ್ಟರ್ ರಂಗನಾಥ್ ಯಾದವ್, ಮಾಸ್ಟರ್ ರೋಹಿತ್, ಮಾಸ್ಟರ್ ವಿಘ್ನೇಶ್, ಬೇಬಿ ಮಾನ್ಯತಾ ಎಂ. ನಾಯಕ್, ಮನ್ ದೀಪ್ ರಾಯ್, ರಮೇಶ್ ಭಟ್, ಉಮೇಶ್, ಮೈಸೂರ್ ಮಲ್ಲೇಶ್, ಆರ್. ನಾಗೇಶ್, ರಿಕ್ಕಿ, ಅಂಜಲಿ, ಮಂಜುಳಾ ರೆಡ್ಡಿ, ಮುಂತಾದವರ ತಾರಾಬಳಗವಿದೆ.