Don't Miss!
- News Karnataka Dam Water Level: ಏಪ್ರಿಲ್ 20ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ವಿವರ ಇಲ್ಲಿದೆ
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚೈತ್ರಾ ಕೋಟೂರ್ ಮದುವೆ ರಂಪಾಟ: ಏನು ಹೇಳುತ್ತಿವೆ ಈ ಫೋಟೋ ಮತ್ತು ವಿಡಿಯೋಗಳು?
ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಭಾನುವಾರ ಬೆಳಗ್ಗೆ ಬೆಂಗಳೂರಿನ ದೇವಸ್ಥಾನದಲ್ಲಿ ಮಂಡ್ಯ ಮೂಲದ ಸಿವಿಲ್ ಇಂಜಿನಿಯರ್ ನಾಗಾರ್ಜುನ್ ಜೊತೆ ಸರಳವಾಗಿ ಮದುವೆಯಾಗಿದ್ದರು. ಬೆಳಗ್ಗೆ ಮದುವೆ ಆಗಿ ಸಂಜೆ ವೇಳೆಗೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರುವ ಮೂಲಕ ಮದುವೆ ವಿವಾದ ಸ್ವರೂಪ ಪಡೆದುಕೊಂಡಿತು.
Recommended Video
ಮದುವೆಯಾದ ಕೆಲವೇ ಗಂಟೆಗಳಲ್ಲಿ ನಾಗಾರ್ಜುನ್ ಮನೆಯವರು ಗಲಾಟೆ ಮಾಡಿ, ಬಲವಂತವಾಗಿ ತಾಳಿಕಟ್ಟಿಸಿಕೊಂಡಿದ್ದಾರೆ ಎಂದು ಚೈತ್ರಾ ವಿರುದ್ಧ ಆರೋಪಿಸಿದ್ದಾರೆ. ಪ್ರೀತಿಸಿ, ಒಪ್ಪಿಗೆ ಇದ್ದೇ ಮದುವೆ ಆಗಿದ್ದು ಎಂದು ಚೈತ್ರಾ ಹೇಳುತ್ತಿದ್ದಾರೆ. ನಾಗಾರ್ಜುನ್ ಮತ್ತು ಚೈತ್ರಾ ಇಬ್ಬರು ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ.
Exclusive: ನಡತೆಗೆಟ್ಟವಳು ಎಂದಿದ್ದಾರೆ, ಕೊಲೆ ಬೆದರಿಕೆ ಹಾಕಿದ್ದಾರೆ: ವಿವಾದದ ಬಗ್ಗೆ ಚೈತ್ರಾ ಪ್ರತಿಕ್ರಿಯೆ
ಕೋಲಾರ ಮಹಿಳಾ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಾಗಿದ್ದು, ಇಬ್ಬರಿಗೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಬುಧವಾರದ ವರೆಗೂ ಸಮಯ ನೀಡಲಾಗಿದೆ. ಈ ನಡುವೆ ಈಗ ಚೈತ್ರಾ ಮತ್ತು ನಾಗಾರ್ಜುನ್ ಜೊತೆ ಇರುವ ಫೋಟೋಗಳು ವೈರಲ್ ಆಗಿವೆ. ಮುಂದೆ ಓದಿ..
6ತಿಂಗಳಿಂದ ಚೈತ್ರಾ ನಂಬರ್ ಬ್ಲಾಕ್ ಮಾಡಿದ್ದೆ
ನಾಗಾರ್ಜುನ್, ಚೈತ್ರಾ ಅವರನ್ನು ಕೆಲವೇ ಕೆಲವು ಬಾರಿ ಮಾತ್ರ ಭೇಟಿ ಮಾಡಿರುವುದು. ಆರು ತಿಂಗಳಿಂದ ಅವರ ಫೋನ್ ನಂಬರ್ ಬ್ಲಾಕ್ ಮಾಡಿರುವುದಾಗಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಆದರೆ ಚೈತ್ರಾ, ಇಬ್ಬರ ನಡುವೆ ಹೆಚ್ಚು ಆಪ್ತತೆ ಇತ್ತು, ಪ್ರೀತಿಸುತ್ತಿದ್ದೆವು, ಒಪ್ಪಿಗೆ ಇದ್ದೇ ಮದುವೆ ಆಗಿದ್ದು ಎಂದು ವಾದಿಸುತ್ತಿದ್ದಾರೆ.
ವೈರಲ್ ಆಗಿವೆ ಫೋಟೋಗಳು
ಇದೀಗ ಇಬ್ಬರ ಆಪ್ತತೆ ಮತ್ತು ಭೇಟಿಯಾಗಿರುವ ಬಗ್ಗೆ ಕೆಲವು ಫೋಟೋಗಳು ಮತ್ತು ವಿಡಿಯೋಗಳು ಸಾಕ್ಷಿ ಹೇಳುತ್ತಿವೆ. ಚೈತ್ರಾ, ನಾಗಾರ್ಜುನ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿ, ಗಿಫ್ಟ್ ನೀಡಿ, ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋಗಳು ಈಗ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಹುಟ್ಟುಹಬ್ಬಕ್ಕೆ ಗಿಫ್ಟ್ ಆಗಿ ಬ್ರೇಸ್ಲೇಟ್ ಕೊಟ್ಟಿರುವುದಾಗಿ ಚೈತ್ರಾ ಹೇಳುತ್ತಿದ್ದಾರೆ. ಇಷ್ಟೆಲ್ಲ ಆಪ್ತತೆ ಇದ್ದರೂ ನಾಗಾರ್ಜುನ್ ಪ್ರೀತಿಸಿಲ್ಲ, ಬಲವಂತದ ಮದುವೆ ಎಂದು ಹೇಗೆ ಹೇಳುತ್ತಿದ್ದಾರೆ ಎಂದು ಚೈತ್ರಾ ಪ್ರಶ್ನಿಸುತ್ತಿದ್ದಾರೆ.
ಮಾತುಕತೆ ಮೂಲಕ ಬಗೆಹರಿಯುತ್ತಾ ವಿವಾದ?
ನಾಗಾರ್ಜುನ್ ಮನೆಯವರು ಕೊಲೆ ಬೆದರಿಕೆ ಹಾಕಿದ್ದಾರೆ, ನಡತೆಗೆಟ್ಟವಳು ಎಂದಿದ್ದಾರೆ ಎಂದು ಚೈತ್ರಾ ಆರೋಪ ಮಾಡಿದ್ದಾರೆ. ಸದ್ಯ ಈ ವಿವಾದವನ್ನು ಕೂತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಬುಧವಾರದ ವರೆಗೂ ಸಮಯ ನೀಡಲಾಗಿದೆ. ಮಾತುಕತೆ ಮೂಲಕ ಬಗೆಹರಿಸಕೊಳ್ಳುತ್ತಾರಾ ಎಂದು ಕಾದುನೋಡಬೇಕು.
ಚೈತ್ರಾ ಮುಂದಿನ ನಿರ್ಧಾರವೇನು?
ಒಂದು ವೇಳೆ ಮಾತುಕತೆಗೆ ಬಂದಿಲ್ಲವಾದರೆ ಮುಂದಿನ ಕ್ರಮದ ಕುರಿತು ಯೋಚಿಸಬೇಕಾಗುತ್ತೆ ಎಂದು ಚೈತ್ರಾ ಹೇಳಿದ್ದಾರೆ. ಹಾಗಾಗಿ ಚೈತ್ರಾ ಮುಂದಿನ ನಿರ್ಧಾರವೇನು, ಯಾವ ಹೆಜ್ಜೆ ಇಡಲಿದ್ದಾರೆ ಎಂದು ಕಾದುನೋಡಬೇಕು.