Don't Miss!
- News Petrol Price: ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ವಿವರ ತಿಳಿಯಿರಿ
- Finance ಎಂಡಿಎಚ್ ಮತ್ತು ಎವರೆಸ್ಟ್ ಸೇರಿದಂತೆ ಎಲ್ಲಾ ಬ್ರಾಂಡ್ ಮಸಾಲೆಗಳ ಮಾದರಿಗಳ ಪರೀಕ್ಷೆಗೆ ಮುಂದಾದ FSSAI
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚೈತ್ರಾ ಕೊಟೂರು ಪತಿ ಹಾಗೂ ಕುಟುಂಬದವರು ನಾಪತ್ತೆ
ಮಾಜಿ ಬಿಗ್ಬಾಸ್ ಸ್ಪರ್ಧಿ ಚೈತ್ರಾ ಕೊಟೂರು ವಿವಾಹ ವಿವಾದ ತಣ್ಣಗಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.
Recommended Video
ಕೆಲವು ದಿನಗಳ ಹಿಂದಷ್ಟೆ ಚೈತ್ರಾ ಅವರು ನಾಗಾರ್ಜುನ್ ಎಂಬುವರ ಜೊತೆ ವಿವಾಹವಾದರು. ಅದೇ ದಿನ ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರಿದ್ದರು ಈ ನವದಂಪತಿ. ಮದುವೆಯಾದ ಕೆಲವೇ ಗಂಟೆಗಳಲ್ಲಿ 'ನನ್ನನ್ನು ಬಲವಂತದಿಂದ ಬಂಧನದಲ್ಲಿರಿಸಿ ಚೈತ್ರಾ ಜೊತೆ ಮದುವೆ ಮಾಡಿಸಲಾಗಿದೆ' ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು ಚೈತ್ರಾ ಪತಿ ನಾಗಾರ್ಜುನ.
ಆದರೆ ಇದನ್ನು ವಿರೋಧಿಸಿದ್ದ ಚೈತ್ರಾ, ನಾಗಾರ್ಜುನ ಕುಟುಂಬದವರು ನನ್ನನ್ನು ಅವಾಚ್ಯವಾಗಿ ಜರಿದರು, ನಾವಿಬ್ಬರೂ ಒಪ್ಪಿಯೇ ಮದುವೆ ಆಗಿದ್ದೀವಿ. ನಾನು ನಟನೆ ಮಾಡುತ್ತೇನೆ ಎಂಬ ಕಾರಣಕ್ಕೆ ನಾಗಾರ್ಜುನ ಕುಟುಂಬದವರು ನಮ್ಮನ್ನು ವಿರೋಧಿಸುತ್ತಿದ್ದಾರೆ' ಎಂದಿದ್ದಾರೆ.
ಇದೆಲ್ಲಾ ಆದ ಕೆಲವೇ ದಿನಕ್ಕೆ ಚೈತ್ರಾ ಕೊಟೂರು ಅವರು ಆತ್ಮಹತ್ಯೆ ಯತ್ನ ಮಾಡಿದರು, ಆತ್ಮಹತ್ಯೆಗೆ ಮುನ್ನಾ ಅಳುತ್ತಾ ಮಾಡಿದ್ದ ವಿಡಿಯೋ ಸಖತ್ ವೈರಲ್ ಆಗಿತ್ತು. ಫೇಸ್ಬುಕ್ನಲ್ಲಿ ದೊಡ್ಡ ಪೋಸ್ಟ್ ಸಹ ಬರೆದುಕೊಂಡಿದ್ದರು.
ಚೈತ್ರಾ ಅವರು ಆತ್ಮಹತ್ಯೆ ಪ್ರಯತ್ನ ಮಾಡಿದ ಬೆನ್ನಲ್ಲೆ ಚೈತ್ರಾ ಪತಿ ನಾಗಾರ್ಜುನ ಅವರು ನಾಪತ್ತೆಯಾಗಿದ್ದಾರೆ. ನಾಗಾರ್ಜುನ ಮಾತ್ರವೇ ಅಲ್ಲದೆ ಅವರ ಕುಟುಂಬದವರು ಸಹ ನಾಪತ್ತೆಯಾಗಿದ್ದಾರೆ.
ನಾಗಾರ್ಜುನ ಹಾಗೂ ಕುಟುಂಬದವರು ಮಂಡ್ಯದಲ್ಲಿ ವಾಸ ಮಾಡುತ್ತಿದ್ದರು. ಚೈತ್ರಾ ಆತ್ಮಹತ್ಯೆಗೆ ಯತ್ನ ಮಾಡಿದ ಸುದ್ದಿ ತಿಳಿಯುತ್ತಿದ್ದಂತೆ ಎಲ್ಲರೂ ಮನೆ ಖಾಲಿ ಮಾಡಿ ಬೀಗ ಹಾಕಿಕೊಂಡು ಹೊರಟು ಹೋಗಿದ್ದಾರೆ. ಚೈತ್ರಾ ಕೊಟೂರು ಅವರು ಆತ್ಮಹತ್ಯೆ ಯತ್ನ ಮಾಡಿರುವ ಬಗ್ಗೆ ಕೋಲಾರದಲ್ಲಿ ದೂರು ದಾಖಲಾಗಿದೆ.
ಚೈತ್ರಾ ಹೇಳುತ್ತಿರುವಂತೆ ಆಕೆ ಮತ್ತು ನಾಗಾರ್ಜುನ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಕೆಲವರ ಮಾತು ಕೇಳಿ ನಾಗಾರ್ಜುನ, ಚೈತ್ರಾರಿಂದ ದೂರಾಗಲು ಯತ್ನಿಸಿದ್ದ. ಆದರೆ ಕೊನೆಗೆ ಕೆಲವರು ಬುದ್ಧಿ ಹೇಳಿದ ಬಳಿಕ ಚೈತ್ರಾ ಜೊತೆಗೆ ನಾಗಾರ್ಜುನ ಮದುವೆ ಆದ. ಆದರೆ ನಾಗಾರ್ಜುನ ಕುಟುಂಬದವರಿಗೆ ಚೈತ್ರಾ ಇಷ್ಟವಿಲ್ಲ ಹಾಗಾಗಿ ನಾಗಾರ್ಜುನಗೆ ಹೇಳಿಕೊಟ್ಟು ಆತನಿಂದ ದೂರು ಕೊಡಿಸಿದ್ದಾರೆ.
ನಾಗಾರ್ಜುನ ಪೊಲೀಸ್ ಠಾಣೆಯಲ್ಲಿ ಹೇಳಿರುವಂತೆ ಚೈತ್ರಾ ಕಡೆಯವರು ಹಾಗೂ ಕೆಲವು ಸಂಘಟನೆಗಳವರು ತಮ್ಮನ್ನು ಕೂಡಿ ಹಾಕಿ, ಬೆದರಿಕೆ ಹಾಕಿ ಚೈತ್ರಾ ಜೊತೆಗೆ ಮದುವೆ ಮಾಡಿಸಿದ್ದಾರೆ' ಎಂದಿದ್ದರು. ಇದೀಗ ತನಿಖೆ ಜಾರಿಯಲ್ಲಿದೆ.