Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಳಿಗ್ಗೆ ಹಸೆಮಣೆ ಏರಿದ್ದ ಮಾಜಿ ಬಿಗ್ಬಾಸ್ ಸ್ಪರ್ಧಿ ಸಂಜೆ ವೇಳೆಗೆ ಪೊಲೀಸ್ ಠಾಣೆಯಲ್ಲಿ!
ಇಂದು (ಮಾರ್ಚ್ 28) ಬೆಳಿಗ್ಗೆಯಷ್ಟೆ ಹಸೆಮಣೆ ಏರಿದ್ದ ಬಿಗ್ಬಾಸ್ ಮಾಜಿ ಸ್ಪರ್ಧಿ ಚೈತ್ರಾ ಕೊಟ್ಟೂರು ಸಂಜೆ ವೇಳೆಗಾಗಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
Recommended Video
ಮಾರ್ಚ್ 28 ರಂದು ಬೆಳಿಗ್ಗೆ ಬೆಂಗಳೂರಿನ ಬ್ಯಾಟರಾಯನಪುರ ಗಣಪತಿ ದೇವಸ್ಥಾನದಲ್ಲಿ ಮಾಜಿ ಬಿಗ್ಬಾಸ್ ಸ್ಪರ್ಧಿ ಚೈತ್ರಾ ಕೊಟ್ಟೂರು ಅವರ ವಿವಾಹ ನಾಗಾರ್ಜುನ ಎಂಬ ಉದ್ಯಮಿಯೊಂದಿಗೆ ನಡೆದಿತ್ತು ಆದರೆ ಸಂಜೆ ವೇಳೆಗಾಗಲೆ 'ನವ ದಂಪತಿ'ಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಬೆಳಿಗ್ಗೆ ನಡೆದ ವಿವಾಹ ಬಲವಂತದ ವಿವಾಹ ಎಂದು ನಾಗಾರ್ಜುನ ಅವರು ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ಚೈತ್ರಾ ಕೊಟ್ಟೂರು ಅವರು ನಾನು ನಾಗಾರ್ಜುನ ಪ್ರೇಮಿಗಳು ಒಪ್ಪಿಯೇ ವಿವಾಹವಾಗಿದ್ದೇವೆ, ನಾಗಾರ್ಜುನ ಅವರನ್ನು ಬಿಟ್ಟು ಇರಲಾರೆ ಎಂದಿದ್ದಾರೆ.
ನಾಗಾರ್ಜುನ ಅವರು ಠಾಣೆಯಲ್ಲಿ ಹೇಳಿರುವಂತೆ, 'ನನಗೆ ಚೈತ್ರಾ ಕೊಟ್ಟೂರು ಅವರೊಂದಿಗೆ ವಿವಾಹವಾಗಲು ಇಷ್ಟವಿಲ್ಲ ಆದರೆ ಕೆಲವು ಸಂಘಟನೆಗಳ ಸದಸ್ಯರು ನನ್ನನ್ನು ಬಲವಂತದಿಂದ ಕೂಡಿಹಾಕಿ ಬಲವಂತದಿಂದ ಮದುವೆ ಮಾಡಿಸಿದ್ದಾರೆ' ಎಂದಿದ್ದಾರೆ.
ಮದುವೆ ಆದ ನಂತರ ಕೋಲಾರದ ಕುರುಬರಪೇಟೆಯಲ್ಲಿರುವ ಚೈತ್ರಾ ಕೊಟ್ಟೂರು ಅವರ ನಿವಾಸಕ್ಕೆ ಬಂದ ನಾಗಾರ್ಜುನ ಅವರ ಪೋಷಕರು ನಾಗಾರ್ಜುನ ಅವರನ್ನು ಬಲವಂತದಿಂದ ಮದುವೆ ಮಾಡಿಸಲಾಗಿದೆ ಎಂದು ತಗಾದೆ ತೆಗೆದು ಕೋಲಾರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಿಗ್ಬಾಸ್ ಸೀಸನ್ 7 ರಲ್ಲಿ ಭಾಗವಹಿಸಿದ್ದ ಚೈತ್ರಾ ಕೊಟ್ಟೂರು ಇತ್ತೀಚೆಗೆ ಧಾರಾವಾಹಿ ಹಾಗೂ ಆಲ್ಬಂ ಹಾಡಿನಲ್ಲಿ ಸಹ ನಟಿಸಿದ್ದರು. ಚೈತ್ರಾ ಅವರು ಕತೆ, ಚಿತ್ರಕತೆ ಬರೆಯುವುದರ ಮೂಲಕವೂ ಗುರುತಿಸಿಕೊಂಡಿದ್ದಾರೆ.