Don't Miss!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- News Mangalsutra Row: ಸಾಧನೆ ಹೇಳಿ ಮತ ಕೇಳಲು ಮುಖವಿಲ್ಲದ ಪ್ರಧಾನಿ: ಕಾಂಗ್ರೆಸ್
- Technology OnePlus: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
- Automobiles ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Lifestyle ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಚಕ್ರವರ್ತಿ' ಬಗ್ಗೆ ಇದ್ದ ಡೌಟ್ ಕ್ಲಿಯರ್!
ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಮತ್ತು ಸುದೀಪ್ ಅಭಿನಯದ 'ಹೆಬ್ಬುಲಿ' ಮತ್ತ ಚಿತ್ರಗಳ ಯಶಸ್ವಿ ಪ್ರದರ್ಶನದ ಮಧ್ಯೆ ದರ್ಶನ್ 'ಚಕ್ರವರ್ತಿ' ಮೆಜೆಸ್ಟಿಕ್ ನ ಯಾವ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತೆ ಎಂಬ ಕುತೂಹಲ ಕಾಡಿತ್ತು. ಆದ್ರೆ, ಆ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದೆ.[ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 'ಚಕ್ರವರ್ತಿ']
ಗಾಂಧಿನಗರದಲ್ಲಿ 'ಚಕ್ರವರ್ತಿ'ಗೆ ಮೇನ್ ಥಿಯೇಟರ್ ಸಿಕ್ಕಿದ್ದು, ಈಗಾಗಲೇ ಚಿತ್ರಮಂದಿರಗಳ ಪಟ್ಟಿ ಕೂಡ ಬಿಡುಗಡೆಯಾಗಿದೆ. ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಚಕ್ರವರ್ತಿಯ ಅಬ್ಬರಕ್ಕೆ ದಿನಗಣನೆ ಶುರುವಾಗಿದೆ. ಮುಂದೆ ಓದಿ.....
'ಚಕ್ರವರ್ತಿ'ಗೆ ಸಂತೋಷ್ ಮೇನ್ ಥಿಯೇಟರ್
ಕೆ.ಜಿ ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಸಿನಿಮಾ ಬಿಡುಗಡೆಯಾಗಲಿದೆ.[ದಿನಕರ್ 'ಕೇಡಿ' ಆಗಲು ಕಾರಣ 'ಆ' ಒಬ್ಬ ವ್ಯಕ್ತಿ! ಯಾರದು?]
ಈ ವಾರ 'ಹೆಬ್ಬುಲಿ' ಎತ್ತಂಗಡಿ
ಪ್ರಸ್ತುತ ಸಂತೋಷ್ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿರುವ 'ಹೆಬ್ಬುಲಿ' ಈ ವಾರ ಎತ್ತಂಗಡಿಯಾಗುತ್ತಿದೆ. ಸದ್ಯ, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿರುವ ಸುದೀಪ್ ಸಿನಿಮಾ 50 ದಿನಗಳನ್ನ ಪೂರೈಸಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.['ಹೆಬ್ಬುಲಿ' ಜಾಗಕ್ಕೆ 'ಚಕ್ರವರ್ತಿ' ಎಂಟ್ರಿ! 'ಸಂತೋಷ್' ಯಾರಿಗೆ?]
ಥಿಯೇಟರ್ ಲಿಸ್ಟ್ ಅನೌನ್ಸ್!
ಈಗಾಗಲೇ
'ಚಕ್ರವರ್ತಿ'
ಚಿತ್ರದ
ಥಿಯೇಟರ್
ಲಿಸ್ಟ್
ಅನೌನ್ಸ್
ಆಗಿದ್ದು,
ಮೆಜೆಸ್ಟಿಕ್
ನ
ಸಂತೋಷ್,
ಮಾಗಡಿ
ರಸ್ತೆಯ
ಪ್ರಸನ್ನ,
ಉಮಾ,
ಸಿದ್ದೇಶ್ವರ,
ಕಾಮಾಕ್ಯ,
ವೀರಭದ್ರೇಶ್ವರ,
ಶ್ರೀನಿವಾಸ,
ವೈಷ್ಣವಿ
ಚಿತ್ರಮಂದಿರಗಳು
ಸೇರಿದಂತೆ
ಸುಮಾರು
300ಕ್ಕೂ
ಅಧಿಕ
ಚಿತ್ರಮಂದಿರಗಳಲ್ಲಿ
ಚಕ್ರವರ್ತಿ
ಅಬ್ಬರಿಸಿಲಿದೆ.['ಬಾಹುಬಲಿ'
ಮೀರಿಸಿದ
ದರ್ಶನ್
'ಚಕ್ರವರ್ತಿ']
ಏಪ್ರಿಲ್ 14ರಂದು 'ಚಕ್ರವರ್ತಿ' ಅಬ್ಬರ
'ಚಕ್ರವರ್ತಿ' ಇದೇ ತಿಂಗಳು 14ರಂದು ರಾಜ್ಯಾದ್ಯಂತ ದಾಖಲೆಯ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನ ಸಿದ್ದಾಂತ್ ನಿರ್ಮಾಣ ಮಾಡಿದ್ದಾರೆ. ದರ್ಶನ್, ದಿನಕರ್ ತೂಗುದೀಪ, ಸೃಜನ್ ಲೋಕೇಶ್, ಕುಮಾರ್ ಬಂಗಾರಪ್ಪ, ಚಾರುಲತಾ, ದೀಪಾ ಸನ್ನಿಧಿ, ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.