Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಚಂಬಲ್' ರಹಸ್ಯ ಹೊತ್ತು ತಂದ ಜೇಕಬ್ ವರ್ಗೀಸ್
'ಸವಾರಿ' ಹಾಗೂ 'ಪೃಥ್ವಿ' ಕನ್ನಡ ಸಿನಿಮಾರಂಗದಲ್ಲಿ ಇಂದಿಗೂ ಕೂಡ ವಿಶೇಷ ಸಿನಿಮಾಗಳ ಸಾಲಿನಲ್ಲಿ ನಿಲ್ಲುವಂತಹ ಚಿತ್ರಗಳು. ಇಂತಹ ಅದ್ಬುತ ಸಿನಿಮಾಗಳನ್ನ ಕನ್ನಡ ಪ್ರೇಕ್ಷಕರಿಗೆ ನೀಡಿದ ಕೀರ್ತಿ ನಿರ್ದೇಶಕ ಜೇಕಬ್ ವರ್ಗೀಸ್ ಅವರಿಗೆ ಸಲ್ಲುತ್ತದೆ. ಸಾಕಷ್ಟು ದಿನಗಳ ನಂತರ ಮತ್ತೆ ಜೇಕಬ್ ವರ್ಗೀಸ್ ಸ್ಯಾಂಡಲ್ ವುಡ್ ಗೆ ಚಂಬಲ್ ಸಿನಿಮಾ ಮೂಲಕ ಮತ್ತೆ ಬಂದಿದ್ದಾರೆ.
ಚಂಬಲ್ ನೀನಾಸಂ ಸತೀಶ್ ಅಭಿನಯಿಸುತ್ತಿರುವ ಸಿನಿಮಾ, ಜೇಕಬ್ ವರ್ಗೀಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ಶರತ್ ಚಕ್ರವರ್ತಿ ಸಂಭಾಷಣೆ ಸಿನಿಮಾಗಿದೆ. 'ಗೋದ್ರಾ' ಸಿನಿಮಾ ನಿರ್ದೇಶಕ ನಂದೀಶ್ ಚಂಬಲ್ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದು ಪೂರ್ಣ ಚಂದ್ರ ತೇಜಸ್ವಿ ಹಾಗೂ ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಜಯಂತ್ ಕಾಯ್ಕಿಣಿ ಹಾಗೂ ಸಿಂಪಲ್ ಸುನಿ ಚಿತ್ರಕ್ಕೆ ಸಾಹಿತ್ಯ ಬರೆದಿದ್ದಾರೆ.
'ಅಯೋಗ್ಯ'ನ ಜೊತೆ ಸೇರಿ ಹಳ್ಳಿ ಹುಡುಗಿ ಆದ ರಚಿತಾ ರಾಮ್
ಚಂಬಲ್ ಟೈಟಲ್ ಕೇಳುತ್ತಿದ್ದಂತೆ ನೈಜ ಘಟನೆ ಆಧಾರಿಸಿ ಮಾಡಿರುವ ಸಿನಿಮಾ ಇರಬಹುದು ಎನ್ನಿಸುತ್ತದೆ. ಚಿತ್ರತಂಡದ ಹೇಳುವ ಪ್ರಕಾರ ಚಂಬಲ್ ಸಸ್ಪೆನ್ಸ್-ಥ್ರಿಲ್ಲರ್ ಕಥಾ ಹಂದವಿರುವಂತಹ ಚಿತ್ರ. ಸದ್ಯ ಚಿತ್ರೀಕರಣ ಮುಗಿಸಿರುವ ನಿರ್ದೇಶಕ ಜೇಕಬ್ ವರ್ಗೀಸ್ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.
ಚಂಬಲ್ ಸಿನಿಮಾದ ಮೋಷನ್ ಪೊಸ್ಟರ್ ಬಿಡುಗಡೆ ಆಗಿದ್ದು ಸತೀಶ್ ನೀನಾಸಂ ಚಿತ್ರದಲ್ಲಿ ಬೇರೆಯದ್ದೇ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಸತೀಶ್ ಜೊತೆಯಾಗಿ ಸೋನು ಗೌಡ, ಕಿಶೋರ್, ರೋಜರ್ ನಾರಯಣ್, ಅಚ್ಯುತ್, ಲೂಸಿಯಾ ಪವನ್ ಕುಮಾರ್, ಸರ್ದಾರ್ ಸತ್ಯ ಅಭಿನಯಿಸಿರುವುದು ಚಿತ್ರದ ವಿಶೇಷತೆ.
'ಸವಾರಿ', 'ಪೃಥ್ವಿ' ಸಿನಿಮಾ ನಿರ್ದೇಶನ ಮಾಡಿ ಜನಮನ ಗೆದ್ದಿರುವ ನಿರ್ದೇಶಕರು 'ಚಂಬಲ್' ಮೂಲಕ ಮತ್ತೆ ಪ್ರೇಕ್ಷಕರ ಗಮನ ಸೆಳೆಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ನಿನಾಸಂ ಸತೀಶ್ ಈ ಚಿತ್ರದ ಮೂಲಕ ಸಿನಿಮಾರಂಗದಲ್ಲಿ ಬೇರೆಯದ್ದೇ ರೀತಿಯಲ್ಲಿ ಗುರುತಿಸಿಕೊಳ್ಳಲಿದ್ದಾರೆ.
ಮಂಡ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷನಾದ ಖಳನಟ ರವಿಶಂಕರ್