Don't Miss!
- News Tamarind Fruit Juice: ಬಾಯಾರಿಕೆ ನೀಗಿಸಲು ಹುಣಸೆ ಹಣ್ಣಿನ ಪಾನಕ ಪರಿಚಯಿಸಿದ ಆಯುಷ್ ಇಲಾಖೆ, ಮಾಡುವುದು ಹೇಗೆ?
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕಿರಿಕ್ ಪಾರ್ಟಿ' ಚಂದನ್ ಆಚಾರ್ ಈಗ ಹೀರೋ ಕಣ್ರೀ.!
Recommended Video
'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ನಟಿಸಿದ ಪ್ರತಿಯೊಬ್ಬರಿಗೂ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ನಿರ್ದೇಶಕ ರಿಶಬ್ ಶೆಟ್ಟಿ ಹಾಗೂ ನಾಯಕ ರಕ್ಷಿತ್ ಶೆಟ್ಟಿ ಹೊಸ ಹೊಸ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. 'ಕಿರಿಕ್ ಪಾರ್ಟಿ' ಮೂಲಕ ಪರಿಚಿತರಾದ ರಶ್ಮಿಕಾ ಮಂದಣ್ಣಗೆ ಸ್ಯಾಂಡಲ್ ವುಡ್ ನಲ್ಲಿ ಇರುವ ಬೇಡಿಕೆ ನಿಮಗೆ ಗೊತ್ತೇ ಇದೆ. ಹಾಗೇ, ಸಂಯುಕ್ತ ಹೆಗಡೆಗೂ ಅವಕಾಶಗಳು ಕಮ್ಮಿ ಏನಿಲ್ಲ ಬಿಡಿ.
ಇನ್ನೂ, 'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಸ್ನೇಹಿತರಾಗಿ ಅಭಿನಯಿಸಿದ್ದ ಹುಡುಗರು ಒಬ್ಬೊಬ್ಬರಾಗೇ ಹೀರೋ ಪಟ್ಟಕ್ಕೆ ಏರುತ್ತಿದ್ದಾರೆ. ರಕ್ಷಿತ್ ಗೆಳೆಯರ ಪೈಕಿ ಒಬ್ಬರಾಗಿ ನಟಿಸಿದ್ದ ಅರವಿಂದ್ ಅಯ್ಯರ್ ಈಗಾಗಲೇ 'ಭೀಮಸೇನ ನಳಮಹಾರಾಜ' ಹಾಗೂ '777 ಚಾರ್ಲಿ' ಚಿತ್ರಗಳಿಗೆ 'ನಾಯಕ'ನಾಗಿದ್ದಾರೆ.
ಈಗ ಅದೇ 'ಕಿರಿಕ್ ಪಾರ್ಟಿ' ಚಿತ್ರದ ರಕ್ಷಿತ್ ಸ್ನೇಹಿತರ ಬಳಗದಲ್ಲಿ ಇದ್ದ ಮತ್ತೋರ್ವ ಯುವಕ ಹೀರೋ ಆಗಲು ಸಜ್ಜಾಗಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ, ಓದಿರಿ...
ಚಂದನ್ ಆಚಾರ್ ಈಗ ಹೀರೋ
'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಫ್ರೆಂಡ್ಸ್ ಗ್ಯಾಂಗ್ ನಲ್ಲಿದ್ದ ಚಂದನ್ ಆಚಾರ್ ಈಗ ಕನ್ನಡ ಚಿತ್ರವೊಂದಕ್ಕೆ ಹೀರೋ ಆಗಲಿದ್ದಾರೆ.
'ಕಿರಿಕ್ ಪಾರ್ಟಿ'ಯ ಸ್ನೇಹಿತನಿಗಾಗಿ ರಕ್ಷಿತ್ ಮತ್ತೊಂದು ಸಿನಿಮಾ ನಿರ್ಮಾಣ!
ರಂಗಭೂಮಿ ಕಲಾವಿದ
ಮೈಸೂರಿನಲ್ಲಿ ಹುಟ್ಟಿ ಬೆಳೆದ ಚಂದನ್ ಆಚಾರ್, ರಂಗಭೂಮಿಗೆ ಆಕರ್ಷಿತರಾಗಿ 'ನಟನಾ' ತಂಡ ಸೇರಿದರು. 'ಸಂಕ್ರಾಂತಿ', 'ಮಲೆಗಳಲ್ಲಿ ಮದುಮಗಳು' ನಾಟಕಗಳಿಗೆ ಬಣ್ಣ ಹಚ್ಚಿದ ಚಂದನ್, 'Rambo', 'ಕಿರಿಕ್ ಪಾರ್ಟಿ', 'ಮುಗುಳುನಗೆ', 'ದಯವಿಟ್ಟು ಗಮನಿಸಿ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಂದನ್ ನ ಹೀರೋ ಮಾಡ್ತಿರೋರು ಯಾರು.?
ಏಳು ವರ್ಷಗಳಿಂದ ನಿರ್ದೇಶಕ ಕೃಷ್ಣ ಹಾಗೂ ಆರ್.ಚಂದ್ರು ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಆರ್.ವೆಂಕಟೇಶ್ ಬಾಬು ಇದೀಗ ಸ್ವತಂತ್ರ ನಿರ್ದೇಶಕರಾಗಲು ಮನಸ್ಸು ಮಾಡಿದ್ದಾರೆ. ಆರ್.ವೆಂಕಟೇಶ್ ಬಾಬು ನಿರ್ದೇಶನದ ಚೊಚ್ಚಲ ಚಿತ್ರಕ್ಕೆ ಚಂದನ್ ಆಚಾರ್ ಹೀರೋ ಆಗಲಿದ್ದಾರೆ.
ಇನ್ನೂ ಹೆಸರಿಟ್ಟಿಲ್ಲ.!
ಆರ್.ವೆಂಕಟೇಶ್ ಬಾಬು ನಿರ್ದೇಶನದ ಆರ್.ವಿಜಯ್ ಕುಮಾರ್ ನಿರ್ಮಾಣದ ಚಂದನ್ ಆಚಾರ್ ಅಭಿನಯದ ಚಿತ್ರಕ್ಕಿನ್ನೂ ಶೀರ್ಷಿಕೆ ಇಟ್ಟಿಲ್ಲ. ಮಾರ್ಚ್ ನಲ್ಲಿ ಈ ಸಿನಿಮಾ ಸೆಟ್ಟೇರಲಿದೆ.