Don't Miss!
- News ಕೆ. ಎಸ್. ಈಶ್ವರಪ್ಪಗೆ 2013ರ ಚುನಾವಣೆ ನೆನಪಿಸಿದ ಜನರು!
- Technology Lava: ಭಾರತದಲ್ಲಿ ಸುನಾಮಿ ಎಬ್ಬಿಸಲಿದೆ ಲಾವಾ O2! ನಿರೀಕ್ಷಿತ ಫೀಚರ್ಸ್ ಬಗ್ಗೆ ತಿಳಿಯಿರಿ
- Sports IPL 2024: RCB ವಿರುದ್ಧ ಈ ಒಂದು ದಾಖಲೆಯನ್ನು ಯಾರು ಬೇಗ ನಿರ್ಮಿಸುತ್ತಾರೆ?
- Lifestyle ಮೂರು ಮಕ್ಕಳು ನನ್ನದ್ದಲ್ಲ ಎಂದು ಆತನಿಗೆ ತಿಳಿದಾಗ.... ಹೆಂಡತಿಯ ಮಹಾಮೋಸ
- Automobiles ನಟ ವಿಜಯ್ ನೋಡಲು ಬಂದ ಜನಸಾಗರ: ಅಭಿಮಾನಿಗಳಿಂದ ನಟನ ಕಾರಿಗೆ ಹಾನಿ!
- Finance ಬೆಂಗಳೂರಿನ ಮೇಘನಾ ಫುಡ್ಸ್ ಹೋಟೆಲ್ ಮಳಿಗೆಗಳ ಮೇಲೆ ಐಟಿ ದಾಳಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹನಿಮೂನ್ ಗೆ ಅಡ್ಡಿಪಡಿಸಿದ ಕೊರೊನಾ ಬಗ್ಗೆ ಚಂದನ್-ನಿವೇದಿತ ಗೌಡ ಹಾಡು
ಮದುವೆಯಾಗಿ ಹನಿಮೂನ್ ಗೆ ಹೋಗಿದ್ದ ಚಂದನ್ ಶೆಟ್ಟಿ-ನಿವೇದಿತಾ ಗೌಡ ಅವರು ತಮ್ಮ ಪ್ರವಾಸವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ವಾಪಸ್ಸಾಗುವಂತೆ ಮಾಡಿತು ಕೊರೊನಾ ಭೀತಿ.
ಇದೀಗ ಈ ಯುವ ಜೋಡಿ ಮನೆಯಲ್ಲೇ ಇದ್ದು, ಕ್ವಾಲಿಟಿ ಟೈಂ ಕಳೆಯುತ್ತಿದ್ದಾರೆ. ಇದೇ ಸಮಯದಲ್ಲಿ ಚಂದನ್ ಶೆಟ್ಟಿ-ನಿವೇದಿತ ಗೌಡ ಅವರು ಕೊರೊನಾ ಬಗ್ಗೆ ಹಾಡೊಂದನ್ನು ಹಾಡಿದ್ದಾರೆ.
ರ್ಯಾಪರ್ ಆಗಿರುವ ಚಂದನ್ ಶೆಟ್ಟಿ ಕೊರೊನಾ ಬಗ್ಗೆ ತಮ್ಮದೇ ಶೈಲಿಯಲ್ಲಿ ಹಾಡು ಹಾಡಿದ್ದು, ನಿವೇದಿತಾ ಗೌಡ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಕುಡುಕ್ರಿಗೆ ಸಾಂತ್ವನ ಹೇಳಿರುವ ಚಂದನ್ ಶೆಟ್ಟಿ
''ಎಣ್ಣೆ ಸಪ್ಲೈ ಮಾಡ್ಬೋದೇನೋ ಕುಡುಕ್ರು ಸ್ವಲ್ಪ ತಡ್ಕಳಿ, ಪೊಲೀಸರ ಲಾಠಿ ತಿಂದೋರು, ನೋವಿಗೆ ಮುಲಾಮು ಹಚ್ಕೊಳಿ..'' ಎಂದು ಹಾಡಿನ ಮೂಲಕ ಸಾಂತ್ವನ ಹೇಳಿದ್ದಾರೆ ಚಂದನ್ ಶೆಟ್ಟಿ.
ಮನೇಲಿರಿ, ಇಲ್ಲ ಸ್ಮಶಾನ ಸೇರಿ
''ನಾವೆಲ್ಲಾ ಮನೇಲಿ ಇರೋಣ, ಹೊರಗ್ಬಂದ್ರೆ ಸ್ಮಶಾನ, ಎರಡ್ ಸಲ ಮಾಡ್ಕಳಿ ಸ್ನಾನ, ತುಂಬಾ ಡೇಂಜರ್ರು ಕಣ್ರೊ ಈ ಕೊರೊನಾ'' ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ ಚಂದನ್ ಶೆಟ್ಟಿ.
|
ಕ್ಯೂಟ್ ಆಗಿ ಹೆಜ್ಜೆ ಹಾಕಿದ್ದಾರೆ ನಿವೇದಿತಾ ಗೌಡ
ಚಂದನ್ ಶೆಟ್ಟಿ ಹಾಡಿರುವ ಹಾಡಿಗೆ ಪಕ್ಕದಲ್ಲೇ ನಿಂತು ಕ್ಯೂಟ್ ಆಗಿ ಹೆಜ್ಜೆ ಹಾಕಿದ್ದಾರೆ ಪತ್ನಿ ನಿವೇದಿತಾ ಗೌಡ. ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿರುವ ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದೆ.
ಹನಿಮೂನ್ ಅರ್ಧಕ್ಕೆ ಮೊಟಕುಗೊಳಿಸಿ ಬಂದ ಜೋಡಿ
ಚಂದನ್-ನಿವೇದಿತಾ ಗೌಡ ಅವರುಗಳು ಕೊರೊನಾ ಭೀತಿ ವಿಶ್ವಕ್ಕೆ ಹರಡುವ ವೇಳೆಯಲ್ಲಿಯೇ ಹನಿಮೂನ್ ಗೆಂದು ತೆರಳಿದ್ದರು. ಅವರು ಆಮ್ಸ್ಟರ್ಡಾಮ್ ಗೆ ಹೋಗಿ ಅಲ್ಲಿಂದ ಇಟಲಿಗೆ ಪ್ರವಾಸ ಹೋಗುವ ಯೋಜನೆಯಲ್ಲಿದ್ದರು. ಆದರೆ ಅವರು ಇಟಲಿಗೆ ಹೋಗುವ ಮುನ್ನವೇ ಅಲ್ಲಿ ಕೊರೊನಾ ಕಾಣಿಸಿಕೊಂಡ ಕಾರಣ ಆಮ್ಸ್ಟರ್ಡಾಂ ನಿಂದ ವಾಪಸ್ ಆದರು.