Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಸ್ ನಾರಾಯಣ್ ಮೇಲೆ ಚೆಕ್ ಬೌನ್ಸ್ ಪ್ರಕರಣ
'ಮುಂಜಾನೆ' ಚಿತ್ರಕ್ಕಾಗಿ ಪ್ರಸಾದ್ ಅವರ ಬಳಿ ನಾರಾಯಣ್ ಸಾಲ ಮಾಡಿದ್ದರಂತೆ. ಇದಕ್ಕೆ ಪ್ರತಿಯಾಗಿ ರು.2 ಕೋಟಿ ಚೆಕ್ ಬರೆದುಕೊಟ್ಟಿದ್ದರಂತೆ ನಾರಾಯಣ್. ಈಗ ಆ ಚೆಕ್ ಬೌನ್ಸ್ ಆಗಿದೆ. ನ್ಯಾಯ ಕೊಡಿಸಿ ಎಂದು ಫಿಲಂ ಚೇಂಬರ್ ಬಾಗಿಲು ತಟ್ಟಿದ್ದಾರೆ ಪ್ರಸಾದ್.
'ಮುಂಜಾನೆ' ಚಿತ್ರ ನಿರ್ಮಾಣದ ಸಂದರ್ಭದಲ್ಲಿ ಅವರು ಆರ್ಥಿಕ ಬಿಕ್ಕಟ್ಟಿಗೆ ಸಿಕ್ಕಿದ್ದರು. ಆಗ ಅವರ ಸಹಾಯಕ್ಕೆ ತಾವು ನಿಂತೆವು. ಈಗ ಅವರು ತಮಗೆ ವಂಚಿಸಿದ್ದಾರೆ ಎಂದು ವಿತರಕ ಪ್ರಸಾದ್ ಆರೋಪಿಸಿದ್ದಾರೆ.
ಅವರ ಚಿತ್ರ ಬಿಡುಗಡೆಯಾದ ಮೇಲೂ ಅವರು ತಮಗೆ ಹಣ ಹಿಂತಿರುಗಿಸಿಲ್ಲ. ಹಲವಾರು ಬಾರಿ ಅವರ ಮನೆಗೆ ಅಲೆದದ್ದೇ ಬಂತು. ಕಡೆಗೆ ಅವರ ಕೊಟ್ಟ ಚೆಕ್ ಸಹ ಬೌನ್ಸ್ ಆಗಿದೆ ಎಂದಿದ್ದಾರೆ ಪ್ರಸಾದ್. ಈಗ ಪ್ರಕರಣ ಫಿಲಂ ಚೇಂಬರ್ ಹಾಗೂ ನಿರ್ಮಾಪಕರ ಸಂಘದ ಟೇಬಲ್ ಮೇಲಿದೆ.
ಕರ್ನಾಟಕ ನಿರ್ಮಾಪರ ಸಂಘ ಇಬ್ಬರನ್ನೂ ಕರೆಸಿ ತಮ್ಮ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಂತೆ ಸೂಚಿಸಿದೆ. ನಾರಾಯಣ್ ಅವರಿಂದ ತಮಗೆ ಬಾಕಿ ಹಣ ಬಂದರೆ ಸಾಕು ಎಂಬ ಪರಿಸ್ಥಿತಿಯಲ್ಲಿ ಪ್ರಸಾದ್ ಇದ್ದಾರೆ. (ಏಜೆನ್ಸೀಸ್)