Don't Miss!
- Automobiles ಸಾಮಾನ್ಯರಂತೆ ಹಳ್ಳಿಯಲ್ಲಿರುವ ದೇಶದ 55ನೇ ಶ್ರೀಮಂತ ಶ್ರೀಧರ್ ವೆಂಬು: ಕಚೇರಿಗೆ ಹೋಗಲು ಎಲೆಕ್ಟ್ರಿಕ್ ಆಟೋ ಖರೀದಿ!
- News Helicopters Crash: ಸೇನೆಯ ಎರಡು ಹೆಲುಕಾಪ್ಟರ್ ಡಿಕ್ಕಿ: 10 ಜನರ ಸಾವು
- Finance ಬೆಂಗಳೂರಿನಲ್ಲಿ ಈ ಜಾಗದಲ್ಲಿ ಸೈಟು ಖರೀದಿಸಬೇಡಿ: BDAಯಿಂದ 279 ಅಕ್ರಮ ಬಡಾವಣೆ ಪತ್ತೆ
- Technology Google Chrome: ಗೂಗಲ್ ಕ್ರೋಮ್ ಬಳಕೆದಾರರು ಹ್ಯಾಕಿಂಗ್ ಅಪಾಯದಲ್ಲಿ! ಸುರಕ್ಷಿತವಾಗಿರೋದು ಹೇಗೆ?
- Sports IPL 2024: ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್; ಅಂಪೈರಿಂಗ್ ವಿರುದ್ಧ ಕೆಂಡಕಾರಿದ ಮೊಹಮ್ಮದ್ ಕೈಫ್!
- Lifestyle ಮನೆಯಲ್ಲಿ ಘಮ ಘಮಿಸುವ ಮಲ್ಲಿಗೆ ಗಿಡ ಬೆಳೆಸೋದು ಹೇಗೆ..? ಇಲ್ಲಿದೆ ಮಾಹಿತಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಂದನ್ ಶೆಟ್ಟಿಯ 'ಕೋಲುಮಂಡೆ' ವಿವಾದ: ನಟ ಚೇತನ್ ಹೇಳಿದ್ದೇನು?
ಚಂದನ್ ಶೆಟ್ಟಿಯ ಕೋಲುಮಂಡೆ ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ 'ಆ ದಿನಗಳು' ಖ್ಯಾತಿಯ ನಟ ಚೇತನ್ ಪ್ರತಿಕ್ರಿಯೆ ನೀಡಿದ್ದು, ಚಂದನ್ ಶೆಟ್ಟಿಯ ಪರಿಕಲ್ಪನೆಯನ್ನು ಖಂಡಿಸಿದ್ದಾರೆ.
Recommended Video
'ಮಲೆ ಮಹಾದೇಶ್ವರ ಕರ್ನಾಟಕದ ಮಧ್ಯಕಾಲೀನ ಅವಧಿಯಲ್ಲಿ ವಾಸಿಸುತ್ತಿದ್ದ ಮಾದಿಗ-ಬುಡಕಟ್ಟು ಜಾನಪದ ಐಕಾನ್. ಅವರು ತಾರತಮ್ಯವಿಲ್ಲದ ಸಮಾಜಕ್ಕಾಗಿ ಶ್ರಮಿಸಿದರು. ಅವರ ಮಹಾಕಾವ್ಯದ ಒಂದು ಭಾಗದಲ್ಲಿ, ಪಿತೃಪ್ರಭುತ್ವ ಮತ್ತು ದಬ್ಬಾಳಿಕೆ ವಿರುದ್ಧ ಹೋರಾಡಲು ಅವರು ಸಂಕಮ್ಮಾಗೆ ಹೇಗೆ ಸಹಾಯ ಮಾಡುತ್ತಾರೆಂದು ಒಂದು ಕಥೆ ವಿವರಿಸುತ್ತದೆ' ಎಂದು ಮಹಾದೇಶ್ವರ ಕುರಿತು ವಿವರಿಸಿದ್ದಾರೆ.
'ಕೋಲುಮಂಡೆ' ಹಾಡಿನ ವಿವಾದ: ಚಂದನ್ ಶೆಟ್ಟಿ ವಿರುದ್ಧ ದೂರು ದಾಖಲು
'ಆಧುನಿಕ ಪುನರಾವರ್ತನೆಗಳು ಪ್ರಚೋದನಕಾರಿ ಮತ್ತು ಹಣದ ಮನಸ್ಸಿನ ಬದಲು ಸಾಂಸ್ಕೃತಿಕವಾಗಿ ಸೂಕ್ಷ್ಮ ಮತ್ತು ಚಿಂತನಶೀಲವಾಗಿರಬೇಕು' ಎಂದು ಪರೋಕ್ಷವಾಗಿ ಕೋಲುಮಂಡೆ ಹಾಡನ್ನು ಖಂಡಿಸಿದ್ದಾರೆ.
ಜಾನಪದ ಗೀತೆಯ ಸಾಹಿತ್ಯವನ್ನು ತಿರುಚಿ ಹಾಡಿಗೆ ಧಕ್ಕೆ ತರಲಾಗಿದೆ ಹಾಗೂ ಶರಣೆ ಸಂಕಮ್ಮನ ಪಾತ್ರವನ್ನು ಅಶ್ಲೀಲವಾಗಿ ತೋರಿಸಲಾಗಿದೆ ಎಂದು ಆರೋಪಿಸಿ ಚಂದನ್ ಶೆಟ್ಟಿ ವಿರುದ್ಧ ದೂರು ಸಹ ದಾಖಲಾಗಿದೆ.
ವಿವಾದಕ್ಕೆ ಕಿಡಿ ಹಚ್ಚಿದ 'ಕೋಲುಮಂಡೆ': ಚಂದನ್ ಶೆಟ್ಟಿ ವಿರುದ್ಧ ಸಿಡಿದೆದ್ದ ಮಹದೇಶ್ವರನ ಭಕ್ತರು
ವಿವಾದಿತ ಹಾಡನ್ನು ಈಗಾಗಲೇ ಯೂಟ್ಯೂಬ್ನಿಂದ ತೆಗೆದು ಹಾಕಲಾಗಿದೆ. ಆದರೂ, ಚಂದನ್ ಶೆಟ್ಟಿ, ನಟಿ ನಂದಿನಿ ಹಾಗೂ ಆನಂದ್ ಆಡಿಯೋ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ.