Don't Miss!
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- News Government Employees; ಸರ್ಕಾರಿ ನೌಕರರ ಜೀವ ವಿಮೆ ಪಾಲಿಸಿ ಅವಧಿ ಏರಿಕೆ
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚೇತನ್ ಚಂದ್ರ, ರೂಪಿಕಾ 'ಸಿಂಹರಾಶಿ'ಗೆ ಹೊಸ ಹೆಸರು?
ಸಿದ್ದು ಪಾಟೀಲ್ ನಿರ್ಮಾಣದಲ್ಲಿ 'ಸಿಂಹರಾಶಿ' ಚಿತ್ರವನ್ನು ಚಂದ್ರಹಾಸ್ ಎಂಬ ನವನಿರ್ದೇಶಕರು ನಿರ್ದೇಶಿಸಬೇಕಿದೆ. ನಾಯಕಿಯಾಗಿ ಚೇತನ್ ಚಂದ್ರರಿಗೆ ಚೆಲುವಿನ ಚಿಲಿಪಿಲಿ ಖ್ಯಾತಿಯ ರೂಪಿಕಾ ಜೋಡಿಯಾಗಿದ್ದಾರೆ. ಎಲ್ಲವೂ ನಿರ್ಧಾರವಾಗಿ ಮುಹೂರ್ತ ನಡೆಯುವ ವೇಳೆಯಲ್ಲಿ 'ಶೀರ್ಷಿಕೆ ಕೈತಪ್ಪುವುದಕ್ಕೆ ಆತ್ಮೀಯರೇ ಕಾರಣರಾಗಿದ್ದಾರೆ. ಆದರೆ ಚಿತ್ರತಂಡ ಮುಹೂರ್ತ ಆಚರಿಸಿಕೊಂಡು ಮುಂದಿನದನ್ನು ಪ್ಲಾನ್ ಮಾಡತೊಡಗಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸುಮಾರು ಆರು ವರ್ಷಗಳ ಹಿಂದೆ ತೆಲುಗಿನ 'ಸಿಂಹರಾಶಿ'ಯನ್ನು ಕನ್ನಡಕ್ಕೆ ರೀಮೇಕ್ ಮಾಡಲೆಂದು ನಿರ್ಮಾಪಕ ಎನ್. ಕುಮಾರ್ ಈ ಶೀರ್ಷಿಕೆಯನ್ನು ನೋಂದಣಿ ಮಾಡಿಸಿದ್ದರು. ಕ್ರೇಜಿ ಸ್ಟಾರ್ ರವಿಚಂದ್ರನ್ ಆ ಚಿತ್ರದಲ್ಲಿ ನಾಯಕನಾಗಬೇಕಿತ್ತು. ಆದರೆ ಅಂದುಕೊಂಡಂತೆ ಆಗದೇ ನೋಂದಣಿ ರದ್ದಾಗಿತ್ತು. ಮರು ನೋಂದಣಿಗಾಗಿ ನಿರ್ದೇಶಕ ಚಂದ್ರಹಾಸ್ ಪ್ರಯತ್ನಿಸಿದಾಗ ಅದು ಬೇರೆಯವರ ಪಾಲಾಗಿರುವುದು ಬೆಳಕಿಗೆ ಬಂದಿದೆ.
ಈ ಬೆಳವಣಿಗೆಯಿಂದಾಗಿ 'ಸಿಂಹರಾಶಿ' ಹೆಸರಿನ ಚಿತ್ರ ಘೋಷಿಸಿದ್ದ ಚೇತನ್ ಅಂಡ್ ಟೀಮ್ ಗೆ ಸಹಜವಾಗಿ ನಿರಾಸೆಯಾಗಿದೆ. ಜೊತೆಯಲ್ಲಿದ್ದವರು, ಇರಬೇಕಾದವರೇ ಬೆನ್ನಿಗೆ ಚೂರಿಹಾಕಿ ದೂರ ಸರಿದಿರುವುದು ಎಚ್ಚರಿಕೆಯ ಕರೆಗಂಟೆ ಎನಿಸಿದೆ. ಅದೇ ಶೀರ್ಷಿಕೆ ಅಥವಾ ಅದಕ್ಕಿಂತ 'ಕ್ಯಾಚಿ'ಯಾಗಿರುವ ಟೈಟಲ್ ಇಡುವ ಪಕ್ಕಾ ಭರವಸೆಯೊಂದಿಗೆ ಚಿತ್ರತಂಡ ಮುನ್ನಡೆಯುವ ಭರವಸೆಯಲ್ಲಿದೆ. (ಒನ್ ಇಂಡಿಯಾ ಕನ್ನಡ)