twitter
    For Quick Alerts
    ALLOW NOTIFICATIONS  
    For Daily Alerts

    ಡಾ ವಿಷ್ಣುವರ್ಧನ್ ಅವರನ್ನ ಸ್ಮರಿಸಿದ ರಾಜಕೀಯ ನಾಯಕರು

    |

    Recommended Video

    ದಾದಾ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು ಅನ್ನೋದಕ್ಕೆ ಇದೇ ಸಾಕ್ಷಿ..! | Filmibeat Kannada

    ಇಡೀ ಸ್ಯಾಂಡಲ್ ವುಡ್ ಇಂದು ಡಾ ವಿಷ್ಣುವರ್ಧನ್, ನಟ ಉಪೇಂದ್ರ ಹಾಗೂ ನಟಿ ಶ್ರುತಿ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಮುಳುಗಿದೆ. ವಿಷ್ಣು ಪುಣ್ಯಭೂಮಿಗೆ ಭೇಟಿ ನೀಡಿದ ಅಭಿಮಾನಿಗಳು ಅಗಲಿದ ದಾದಾರನ್ನ ಸ್ಮರಿಸಿದ್ದಾರೆ.

    ಮತ್ತೊಂದೆಡೆ ಕರ್ನಾಟಕದ ರಾಜ್ಯದಲ್ಲಿ ರಾಜಕೀಯ ವಿದ್ಯಮಾನಗಳು ಗರಿಗೆದರಿದೆ. ಬಳ್ಳಾರಿ ಶಾಸಕ ಮುನಿಸು ಒಂದು ಕಡೆಯಾದ್ರೆ, ಆಪರೇಷನ್ ಕಮಲದ ಭೀತಿ ಇನ್ನೊಂದು ಕಡೆ. ಹೀಗೆ, ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಿನ ರಾಜಕೀಯ ಚದುರಂಗದಾಟ ಬಹಳ ರೋಚಕವಾಗಿದೆ.

    ಡಾ.ವಿಷ್ಣು ಸಾವಿನ ದಿನ ಅಂಬಿ ಆಡಿದ ಮಾತನ್ನ ಮರೆಯದ ಸಾಧುಕೋಕಿಲಾ ಡಾ.ವಿಷ್ಣು ಸಾವಿನ ದಿನ ಅಂಬಿ ಆಡಿದ ಮಾತನ್ನ ಮರೆಯದ ಸಾಧುಕೋಕಿಲಾ

    ಇದರ ಮಧ್ಯೆ ಕೆಲವು ರಾಜಕಾರಣಿಗಳು ಡಾ ವಿಷ್ಣುವರ್ಧನ್ ಅವರನ್ನ ಸ್ಮರಿಸಿದ್ದಾರೆ. ತಮ್ಮ ರಾಜಕೀಯದ ನಡುವೆ ಬಿಡುವು ಮಾಡಿಕೊಂಡು ಸಾಹಸ ಸಿಂಹ ವಿಷ್ಣುಗೆ ಟ್ವಿಟ್ಟರ್ ಮೂಲಕ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಯಾವೆಲ್ಲಾ ರಾಜಕಾರಣಿಗಳು ವಿಶ್ ಮಾಡಿದ್ದಾರೆ. ಮುಂದೆ ಓದಿ....

    ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ

    ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ

    ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ವಿಶೇಷ ಅಂದ್ರೆ, ವಿಷ್ಣುವರ್ಧನ್ ಅಭಿನಯದ 'ಸೂರ್ಯವಂಶ', 'ಪ್ರೇಮೋತ್ಸವ' ಚಿತ್ರಗಳನ್ನ ಸ್ವತಃ ಕುಮಾರಸ್ವಾಮಿ ಅವರೇ ತಮ್ಮ ನಿರ್ಮಾಣ ಸಂಸ್ಥೆಯಡಿ ನಿರ್ಮಿಸಿದ್ದರು.

    ಡಾ ವಿಷ್ಣು ಸಾವಿಗೂ ಮುನ್ನ ಸುದೀಪ್ ಬಳಿ ಈ ವಿಷ್ಯವನ್ನ ಚರ್ಚಿಸಿದ್ರಂತೆಡಾ ವಿಷ್ಣು ಸಾವಿಗೂ ಮುನ್ನ ಸುದೀಪ್ ಬಳಿ ಈ ವಿಷ್ಯವನ್ನ ಚರ್ಚಿಸಿದ್ರಂತೆ

    ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ

    ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ

    ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಕೂಡ ಕನ್ನಡ ಚಿತ್ರರಂಗದ 'ಯಜಮಾನ'ನ ಜನುಮದಿನಕ್ಕೆ ಟ್ವೀಟ್ ಮಾಡುವ ಮೂಲಕ ಶುಭ ಕೋರಿದ್ದಾರೆ.

    ವಿಷ್ಣುರನ್ನ ಸ್ಮರಿಸಿದ ಚಿತ್ರರಂಗ: ಒಬ್ಬೊಬ್ಬರಿಗೆ ಒಂದೊಂದು ರೀತಿ ಸ್ಫೂರ್ತಿ ಈ 'ಸಿಂಹ'ವಿಷ್ಣುರನ್ನ ಸ್ಮರಿಸಿದ ಚಿತ್ರರಂಗ: ಒಬ್ಬೊಬ್ಬರಿಗೆ ಒಂದೊಂದು ರೀತಿ ಸ್ಫೂರ್ತಿ ಈ 'ಸಿಂಹ'

    ಸಚಿವ ಕೆಜೆ ಜಾರ್ಜ್

    ಸಚಿವ ಕೆಜೆ ಜಾರ್ಜ್

    ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಸಚಿವರಾಗಿರುವ ಕೆಜೆ ಜಾರ್ಜ್ ಅವರು ''ಕನ್ನಡ ಚಿತ್ರರಂಗದ ಮೇರು ನಟ, ದಂತಕತೆ, ಅಭಿನಯ ಭಾರ್ಗವ, ಸಾಹಸಸಿಂಹ ಡಾ.ವಿಷ್ಣುವರ್ಧನ್''ಗೆ ವಿಶ್ ಮಾಡಿದ್ದಾರೆ.

    ಟ್ವಿಟ್ಟರ್ ನಲ್ಲಿ 'ಉಪ್ಪಿ-ದಾದಾ' ದರ್ಬಾರ್ ಟ್ವಿಟ್ಟರ್ ನಲ್ಲಿ 'ಉಪ್ಪಿ-ದಾದಾ' ದರ್ಬಾರ್

    ಸಚಿವೆ ಜಯಮಾಲ

    ಸಚಿವೆ ಜಯಮಾಲ

    ಕನ್ನಡ ಚಿತ್ರರಂಗದ ನಟಿ ಹಾಗೂ ಸಮ್ಮಿಶ್ರ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿರುವ ಡಾ ಜಯಮಾಲ ಅವರು ನಟ ವಿಷ್ಣುವರ್ಧನ್ ಅವರ ಜನುಮದಿನಕ್ಕೆ ವಿಶ್ ಮಾಡಿದ್ದಾರೆ.

    ದೊಡ್ಡ ವ್ಯಕ್ತಿ ಕೊಟ್ಟಿದ್ದ ಉಡುಗೊರೆಯನ್ನ ವಿಷ್ಣು, ಶಿವಣ್ಣಗೆ ನೀಡಿದ್ದರಂತೆ.! ಏನದು.?ದೊಡ್ಡ ವ್ಯಕ್ತಿ ಕೊಟ್ಟಿದ್ದ ಉಡುಗೊರೆಯನ್ನ ವಿಷ್ಣು, ಶಿವಣ್ಣಗೆ ನೀಡಿದ್ದರಂತೆ.! ಏನದು.?

    ಸೋಮಶೇಖರ್ ರೆಡ್ಡಿ

    ಸೋಮಶೇಖರ್ ರೆಡ್ಡಿ

    ಬಳ್ಳಾರಿಯ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಅವರು ಸ್ಯಾಂಡಲ್ ವುಡ್ ಸಿಂಹ ವಿಷ್ಣು ದಾದಾಗೆ ಟ್ವಿಟ್ಟರ್ ಮೂಲಕ ಬರ್ತಡೇ ವಿಶ್ ಮಾಡಿದ್ದಾರೆ. ''ಡಾ||ವಿಷ್ಣುವರ್ಧನ್ ರವರ ಜನ್ಮದಿನದಂದು ಸ್ಮರಿಸಿ ಕೋಟಿ ನಮನಗಳನ್ನು ಅರ್ಪಿಸುವೆ'' ಎಂದಿದ್ದಾರೆ.

    English summary
    Karnataka chief minister h d kumaraswamy, Ex chief minister bs yeddyurappa has Wish to Dr vishnuvardhan birthday.
    Tuesday, September 18, 2018, 19:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X