twitter
    For Quick Alerts
    ALLOW NOTIFICATIONS  
    For Daily Alerts

    ಚಿಕ್ಕಣ್ಣ ಹೀರೋ ಆಗುವುದು ಪಕ್ಕಾ: ಗುಟ್ಟು ಬಿಚ್ಚಿಟ್ಟ ನಿರ್ದೇಶಕ

    |

    ಹಾಸ್ಯ ನಟ ಚಿಕ್ಕಣ್ಣ ಹೀರೋ ಆಗುತ್ತಾರೆ ಎನ್ನುವ ಸುದ್ದಿ ಪದೇ ಪದೇ ಕೇಳಿ ಬಂದಿದೆ. ಆದರೆ, ಕೊನೆಗೂ ಚಿಕ್ಕಣ್ಣ ಹೀರೋ ಆಗುವ ಸಮಯ ಇದೀಗ ಬಂದಿದೆ. ಈ ಬಾರಿ ಚಿಕ್ಕಣ್ಣ ನಾಯಕ ನಟ ಆಗುವುದು ನೂರಕ್ಕೆ ನೂರರಷ್ಟು ನಿಜ.

    'ಮಾಸ್ಟರ್ ಪೀಸ್' ಸಿನಿಮಾದ ನಿರ್ದೇಶಕ ಮಂಜು ಮಾಂಡವ್ಯ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಈ ವಿಷಯವನ್ನು ಅವರೇ ತಿಳಿಸಿದ್ದಾರೆ. ಮುಂದೆ ಚಿಕ್ಕಣ್ಣನ ಜೊತೆಗೆ ಒಂದು ಸಿನಿಮಾ ಮಾಡುತ್ತೇನೆ ಆ ಸಿನಿಮಾದಲ್ಲಿ ಅವನು ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾನೆ ಎಂದಿದ್ದಾರೆ.

    ರಾಕಿಂಗ್ ಸ್ಟಾರ್ ಯಶ್ ಹಾಕಿದ ಸವಾಲು ಸ್ವೀಕರಿಸಿದ ನಟ ಚಿಕ್ಕಣ್ಣರಾಕಿಂಗ್ ಸ್ಟಾರ್ ಯಶ್ ಹಾಕಿದ ಸವಾಲು ಸ್ವೀಕರಿಸಿದ ನಟ ಚಿಕ್ಕಣ್ಣ

    ನಿರ್ದೇಶಕ ಮಂಜು ಮಾಂಡವ್ಯ 'ಶ್ರೀ ಭರತ ಬಾಹುಬಲಿ' ಸಿನಿಮಾದ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ನಿನ್ನೆ (ಜನವರಿ 3) ನಡೆದಿದೆ. ಈ ಕಾರ್ಯಕ್ರಮದಲ್ಲಿ ತಮ್ಮ ಮುಂದಿನ ಸಿನಿಮಾ ಬಗ್ಗೆ ಅವರು ತಿಳಿಸಿದ್ದಾರೆ.

    Chikkanna will be playing lead role in Manju Mandavyas next

    'ರಾಜಾಹುಲಿ' ಸಿನಿಮಾದಲ್ಲಿ ಯಶ್ ಜೊತೆಗೆ ಮಂಜು ಮಾಂಡವ್ಯ ಹಾಗೂ ಚಿಕ್ಕಣ್ಣ ನಟಿಸಿದ್ದರು. ಆ ಬಳಿಕ ಮಂಜು ಮಾಂಡವ್ಯ ನಿರ್ದೇಶನದ 'ಮಾಸ್ಟರ್ ಪೀಸ್' ನಲ್ಲಿಯೂ ಚಿಕ್ಕಣ್ಣ ನಟಿಸಿದ್ದರು. ಇದೀಗ 'ಶ್ರೀ ಭರತ ಬಾಹುಬಲಿ'ಯಲ್ಲಿಯೂ ಮಂಜು ಜೊತೆಗೆ ಚಿಕ್ಕಣ್ಣ ಇದ್ದಾರೆ.

    ಪೋಲ್ಯಾಂಡ್ ನಲ್ಲಿರುವ 'ಕೋಟಿಗೊಬ್ಬನ' ಮೊದಲ ದರ್ಶನಪೋಲ್ಯಾಂಡ್ ನಲ್ಲಿರುವ 'ಕೋಟಿಗೊಬ್ಬನ' ಮೊದಲ ದರ್ಶನ

    ಈ ಮೂರು ಸಿನಿಮಾಗಳ ನಂತರ ಚಿಕ್ಕಣ್ಣನನ್ನು ಇಟ್ಟುಕೊಂಡು ಮಂಜು ಮಾಂಡವ್ಯ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಮೂಲಕ ಚಿಕ್ಕಣ್ಣ ಹೀರೋ ಆಗುತ್ತಿದ್ದಾರೆ.

    English summary
    Comedy actor Chikkanna will be playing lead role in Manju Mandavya's next.
    Friday, January 3, 2020, 23:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X