twitter
    For Quick Alerts
    ALLOW NOTIFICATIONS  
    For Daily Alerts

    ಚಿರಂಜೀವಿ ಸರ್ಜಾ 11ನೇ ದಿನದ ಪುಣ್ಯತಿಥಿ: ಕುಟುಂಬದಿಂದ ಮಾಧ್ಯಮಗಳಿಗೆ ಮನವಿ

    |

    ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನ ಹೊಂದಿ ಇಂದಿಗೆ ಹನ್ನೊಂದು ದಿನ. ಹಾಗಾಗಿ ಹಲವು ಕಾರ್ಯಗಳನ್ನು ಇಂದು ನೆರವೇರಿಸಲಾಗುತ್ತದೆ.

    Recommended Video

    Case filed against 8 people including Karan Johar, Sanjay Leela Bhansali, Salman Khan | Filmibeat

    ಪುಣ್ಯತಿಥಿ ಕಾರ್ಯವನ್ನು ಕನಕಪುರ ರಸ್ತೆಯ ಬೃಂದಾವನ ಫಾರಂ ಹೌಸ್‌ನಲ್ಲಿ ಬೆಳಿಗ್ಗೆ 10:30 ಮಾಡಲಾಗುತ್ತದೆ. ಸರ್ಜಾ ಕುಟುಂಬಸ್ಥರು, ಮೇಘನಾ ರಾಜ್ ಕುಟುಂಬ ಸದಸ್ಯರು, ಕುಟುಂಬ ಆಪ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

    ಸರ್ಜಾ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದ ರಾಘವೇಂದ್ರ ರಾಜ್ ಕುಮಾರ್ ಫ್ಯಾಮಿಲಿಸರ್ಜಾ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದ ರಾಘವೇಂದ್ರ ರಾಜ್ ಕುಮಾರ್ ಫ್ಯಾಮಿಲಿ

    ವಿಧಿಯಾಟದ ಮುಂದೆ ಏನೂ ಇಲ್ಲ ಎಂಬುದು ಚಿರಂಜೀವಿ ಸರ್ಜಾ ಅಕಾಲಿಕ ಮರಣದಿಂದ ಮನದಟ್ಟಾಗಿದೆ. ನಮ್ಮ ಕುಟುಂಬದಲ್ಲಿ ಇಂಥಾದ್ದೊಂದು ಸಂದರ್ಭ ಬರುತ್ತೆ ಎಂದು ನಾವು ಕನಸಿನಲ್ಲೂ ಅಂದುಕೊಂಡಿರಲಿಲ್ಲ ಎಂದಿರುವ ಧ್ರುವ ಸರ್ಜಾ ಪುಣ್ಯತಿಥಿ ಕಾರ್ಯಕ್ಕೆ ಆಹ್ವಾನ ನೀಡಿದ್ದಾರೆ.

    ಮಾಧ್ಯಮಗಳಿಗೆ ಮನವಿ

    ಮಾಧ್ಯಮಗಳಿಗೆ ಮನವಿ

    11 ನೇ ದಿನದ ಪುಣ್ಯತಿಥಿ ಕಾರ್ಯವು ಕುಟುಂಬದ ಖಾಸಗಿ ಕಾರ್ಯಕ್ರಮವಾದ್ದರಿಂದ ಮಾಧ್ಯಮಗಳವರು ಕ್ಯಾಮೆರಾ ತರಬಾರದು ಎಂದು ಮನವಿ ಮಾಡಲಾಗಿದೆ. ಕ್ಯಾಮೆರಾ ಇಲ್ಲದೆ ಹಾಗೆಯೇ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗಿದೆ.

    ಭವ್ಯ ಮಂಟಪ ನಿರ್ಮಿಸಲಿರುವ ಧ್ರುವ ಸರ್ಜಾ

    ಭವ್ಯ ಮಂಟಪ ನಿರ್ಮಿಸಲಿರುವ ಧ್ರುವ ಸರ್ಜಾ

    ಚಿರು ಸರ್ಜಾ ಸಮಾಧಿ ಸ್ಥಳದಲ್ಲಿ ಈಗಾಗಲೆ ಸಣ್ಣ ಮಂಟಪ ನಿರ್ಮಿಸಲಾಗಿದೆಯಂತೆ. ಅದೇ ಸ್ಥಳದಲ್ಲಿ ಭವ್ಯವಾದ ಮಂಟಪವನ್ನು ಕಟ್ಟುವ ಇರಾದೆ ಧ್ರುವ ಸರ್ಜಾ ಅವರಿಗಿದೆ.

    ಚಿರು ಸರ್ಜಾ ಮೇಲೆ ಬಂಡವಾಳ ಹೂಡಿದವರ ನೆರವಿಗೆ ಧ್ರುವ ಸರ್ಜಾ?ಚಿರು ಸರ್ಜಾ ಮೇಲೆ ಬಂಡವಾಳ ಹೂಡಿದವರ ನೆರವಿಗೆ ಧ್ರುವ ಸರ್ಜಾ?

    ರಾಘವೇಂದ್ರ ರಾಜ್‌ಕುಮಾರ್ ಭೇಟಿ

    ರಾಘವೇಂದ್ರ ರಾಜ್‌ಕುಮಾರ್ ಭೇಟಿ

    ಕೆಲವು ದಿನಗಳ ಹಿಂದಷ್ಟೆ ರಾಘವೇಂದ್ರ ರಾಜ್‌ಕುಮಾರ್ ಅವರು ಚಿರು ಸರ್ಜಾ ಮನೆಗೆ ಭೇಟಿ ನೀಡಿ ಧೈರ್ಯತುಂಬುವ ಕಾರ್ಯ ಮಾಡಿದ್ದರು. ಮೇಘನಾ ರಾಜ್ ಕುಟುಂಬವನ್ನೂ ಸಹ ಅವರು ಭೇಟಿ ಮಾಡಿ ಮಾತನಾಡಿದ್ದರು.

    ಚಿರಂಜೀವಿ ಸರ್ಜಾ ಮತ್ತು ಸುಶಾಂತ್ ಸಿಂಗ್‌ಗೆ ಗೌರವ ಸಲ್ಲಿಸಿದ ಗೂಗಲ್ಚಿರಂಜೀವಿ ಸರ್ಜಾ ಮತ್ತು ಸುಶಾಂತ್ ಸಿಂಗ್‌ಗೆ ಗೌರವ ಸಲ್ಲಿಸಿದ ಗೂಗಲ್

    ಜೂನ್ 7 ರಂದು ಹೃದಯಾಘಾತದಿಂದ ಸಾವು

    ಜೂನ್ 7 ರಂದು ಹೃದಯಾಘಾತದಿಂದ ಸಾವು

    ಚಿರಂಜೀವಿ ಸರ್ಜಾ ಅವರು ಕಳೆದ ಭಾನುವಾರ (ಜೂನ್ 7) ರಂದು ತೀವ್ರ ಹೃದಯಾಘಾತದಿಂದ ಮರಣ ಹೊಂದಿದರು. ಅವರಿಗೆ ಕೇವಲ 34 ವರ್ಷ ವಯಸ್ಸಾಗಿತ್ತು. ಮೇಘನಾ ರಾಜ್ ಅವರನ್ನು ಎರಡು ವರ್ಷದ ಹಿಂದಷ್ಟೆ ಮದುವೆಯಾಗಿದ್ದರು. ಮಗುವಿನ ನಿರೀಕ್ಷೆಯಲ್ಲಿದ್ದರು ಅವರು.

    ಚಿರು ಮಣ್ಣಾದ ಸ್ಥಳದಲ್ಲಿ ಭವ್ಯ ಮಂಟಪ ನಿರ್ಮಿಸಲಿದ್ದಾರೆ ಧ್ರುವ ಸರ್ಜಾಚಿರು ಮಣ್ಣಾದ ಸ್ಥಳದಲ್ಲಿ ಭವ್ಯ ಮಂಟಪ ನಿರ್ಮಿಸಲಿದ್ದಾರೆ ಧ್ರುವ ಸರ್ಜಾ

    English summary
    Chiranjeevi Sarja's 11th day pooja organized today. Sarja family requested media that do not camera to program.
    Wednesday, June 17, 2020, 10:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X