Don't Miss!
- Finance ಅಯೋಧ್ಯೆಯಲ್ಲಿ ಓಲಾ ಕ್ಯಾಬ್ ಸೇವೆ ಆರಂಭ
- News Samsung: ಮಾರುಕಟ್ಟೆ ಗ್ರ್ಯಾಂಡ್ ಎಂಟ್ರಿ ನೀಡಿದೆ ನ್ಯೂ ಫೋನ್
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಾಡಿದ ತಪ್ಪು ಅರಿವಾಯಿತು': ರಜನಿ, ಕಮಲ್ ಆ ತಪ್ಪು ಮಾಡುವುದು ಬೇಡ
ಮೆಗಾಸ್ಟಾರ್ ಚಿರಂಜೀವಿ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್. ಯುವನಟರು ಅಬ್ಬರಿಸುತ್ತಿರುವಗಾಲೂ ನಂಬರ್ 1 ಸ್ಥಾನ ಬಿಟ್ಟುಕೊಡದಂತಹ ನಟ ಚಿರಂಜೀವಿ. ಬಹಳ ಉತ್ತುಂಗದಲ್ಲಿದ ಸಮಯದಲ್ಲಿ ಚಿರು ಮಾಡಿದ ಒಂದು ತಪ್ಪು ಈಗಲೂ ಅವರನ್ನ ಕಾಡುತ್ತಿದೆ.
ಅಂದು ಮೆಗಾಸ್ಟಾರ್ ಇಟ್ಟಿದ್ದು ತಪ್ಪು ಹೆಜ್ಜೆ ಎಂದು ಅನೇಕರು ಹೇಳಿದರೂ, ಅದ್ಯಾವುದಕ್ಕೂ ಕಿವಿಕೊಡದ ಟಾಲಿವುಡ್ ಸ್ಟಾರ್ 'ಪ್ರಜಾರಾಜ್ಯಂ' ಎಂಬ ಹೊಸ ಅಧ್ಯಾಯವನ್ನ ಆರಂಭಿಸಿದರು.
ಅಮಿತ್ ಶಾ-ಮೋದಿ ಅವರನ್ನ ರಜನಿಕಾಂತ್ ಹೋಲಿಸಿದ್ದು ಯಾರಿಗೆ?
ಆದರೆ, ಆ ಪ್ರಜಾರಾಜ್ಯದಲ್ಲಿ ಯಶಸ್ಸಿಗಿಂತ ಅವಮಾನವೇ ಹೆಚ್ಚಾಯ್ತು ಎಂಬುದು ಕಾಲಕ್ರಮೇಣ ಚಿರುಗೆ ಮನವರಿಕೆ ಆಯ್ತು. ಈಗ ಆ ತಪ್ಪನ್ನ ನೀವು ಮಾಡಬೇಡಿ ಎಂದು ಸೂಪರ್ ಸ್ಟಾರ್ ರಜನಿ ಮತ್ತು ಕಮಲ್ ಹಾಸನ್ ಗೆ ಸಲಹೆ ನೀಡಿದ್ದಾರೆ. ಎಲ್ಲಿ, ಯಾವಾಗ? ಮುಂದೆ ಓದಿ....
ರಾಜಕೀಯದಿಂದ ದೂರವಿರಿ
ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರ ಕುರಿತು ಮಾತನಾಡಿದ ಚಿರಂಜೀವಿ 'ಸೂಕ್ಷ್ಮ ಮನಸ್ಸಿನ ವ್ಯಕ್ತಿಗಳಿಗೆ ರಾಜಕೀಯ ಯೋಗ್ಯವಾದ ಕ್ಷೇತ್ರವಲ್ಲ. ದಯವಿಟ್ಟು ರಾಜಕೀಯದಿಂದ ನೀವು ದೂರವಿರಿ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಣವಿದ್ದರೆ ಮಾತ್ರ ರಾಜಕೀಯ
''ಇಂದಿನ ರಾಜಕೀಯ ಸಂಪೂರ್ಣವಾಗಿ ಹಣದಿಂದ ಕೂಡಿದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸ್ವಂತ ನನ್ನ ಕ್ಷೇತ್ರದಲ್ಲೇ ನಾನು ಸೋಲು ಕಂಡೆ. ಕಳೆದ ಚುನಾವಣೆಯಲ್ಲಿ ನನ್ನ ಸಹೋದರ ಪವನ್ ಕಲ್ಯಾಣ್ ಅವರಿಗೆ ಇದೇ ಎದುರಾಯಿತು'' ಎಂದು ಚಿರು ತಮಿಳು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕಾವೇರಿ ತೀರ್ಪಿನ ಬಗ್ಗೆ ಬೇಸರಗೊಂಡ ತಮಿಳು ನಟ ಕಮಲ್ ಹಾಸನ್
ರಜನಿ, ಕಮಲ್ ಸಿದ್ಧರಿದ್ದಾರೆ
''ರಾಜಕೀಯದಲ್ಲಿ ನೀವು ಇರಬೇಕು ಅಂದ್ರೆ ನಿರಾಶೆ, ಹತಾಶೆ, ಅವಮಾನಗಳನ್ನ ಎದುರಿಸಬೇಕು. ಬಹುಶಃ ರಜನಿ ಮತ್ತು ಕಮಲ್ ಹಾಸನ್ ಅವರು ಜನರಿಗಾಗಿ ಕೆಲಸ ಮಾಡಲು ದೃಢ ನಿರ್ಧಾರ ಹೊಂದಿದ್ದರೆ, ಈ ಎಲ್ಲ ರೀತಿಯ ಹತಾಶೆ, ಸವಾಲುಗಳನ್ನ ಎದುರಿಸಲು ಸಾಧ್ಯವಾಗುತ್ತದೆ'' ಎಂದು ಚಿರಂಜೀವಿ ಹೇಳಿದ್ದಾರೆ.
ಕಮಲ್ ಹಾಸನ್ ಮೇಲೆ ನಿರೀಕ್ಷೆ ಇತ್ತು
ಕಳೆದ ಲೋಕಸಭೆ ಚುನಾವಣೆಯಲ್ಲಿ ಕಮಲ್ ಹಾಸನ್ ಉತ್ತಮ ಸಾಧನೆ ಮಾಡ್ತಾರೆ ಎಂದು ನಿರೀಕ್ಷಿಸಿದ್ದೆ, ಆದರೆ ಅದು ಆಗಲಿಲ್ಲ. ಸ್ವತಃ ಕಮಲ್ ಹಾಸನ್ ಸ್ಪರ್ಧಿಸಲಿಲ್ಲ ಅವರ ಪಕ್ಷವೂ ಒಂದು ಸೀಟ್ ಗೆಲ್ಲಲಿಲ್ಲ. ರಜನಿಕಾಂತ್ ಅವರು ಇನ್ನು ರಾಜಕೀಯ ಪಕ್ಷವನ್ನ ರಚಿಸಿಲ್ಲ'' ಎಂದು ಇಬ್ಬರು ನಟರ ಬಗ್ಗೆ ಮಾತನಾಡಿದರು.
ರಜನಿ ಎದುರು ಅಬ್ಬರಿಸಲಿದ್ದಾರೆ ಇಬ್ಬರು ಖಡಕ್ ಖಳನಾಯಕರು
ಒಂದು ಕಡೆ ಗೆದ್ದು ಒಂದು ಸೋತಿದ್ದರು
2008ರಲ್ಲಿ ಆಂಧ್ರ ಪ್ರದೇಶದ ತಿರುಪತಿಯಲ್ಲಿ ಪ್ರಜಾರಾಜ್ಯಂ ಪಕ್ಷ ಸ್ಥಾಪನೆ ಮಾಡಿದ್ದ ಚಿರಂಜೀವಿ 2009ರ ಚುನಾವಣೆಯಲ್ಲಿ ಎರಡು ಕಡೆ ಸ್ಪರ್ಧೆ ಮಾಡಿದ್ದರು. ತಿರುಪತಿಯಲ್ಲಿ ಗೆದ್ದರು, ಪಾಲಕೊಲ್ಲು ಕ್ಷೇತ್ರದಲ್ಲಿ ಸೋಲು ಕಂಡರು.