Don't Miss!
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Automobiles 20 ವರ್ಷದ ಬಳಿಕ ಲ್ಯಾಂಬೋರ್ಗಿನಿ ಲೋಗೋಗೆ ಹೊಸ ಟಚ್: ಈ ಕಂಪನಿಯ ಕಾರುಗಳು ಯಾಕೆ ಫೇಮಸ್?
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೆಗಾಸ್ಟಾರ್ ಚಿರಂಜೀವಿಯ 152ನೇ ಚಿತ್ರ ಆರಂಭ
ಮೆಗಾಸ್ಟಾರ್ ಚಿರಂಜೀವಿ ಅವರ 'ಸೈರಾ ನರಸಿಂಹ ರೆಡ್ಡಿ' ಸಿನಿಮಾ ಬಾಕ್ಸ್ ಆಫೀಸ್ ಧೂಳೆಬ್ಬಿಸಿ ಮುನ್ನುಗ್ಗುತ್ತಿದೆ. 151ನೇ ಸಿನಿಮಾ ರಿಲೀಸ್ ಆಗಿ ಏಳನೇ ದಿನಕ್ಕೆ 152ನೇ ಸಿನಿಮಾ ಆರಂಭಿಸಿದ್ದಾರೆ ಮೆಗಾ ಹೀರೋ. ಹೌದು, ಚಿರಂಜೀವಿಯ ಹೊಸ ಸಿನಿಮಾದ ಮುಹೂರ್ತ ನಡೆದಿದೆ.
ವಿಜಯದಶಮಿ ಪ್ರಯುಕ್ತ ಚಿರಂಜೀವಿ ನಟಿಸಲಿರುವ ಮುಂದಿನ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ತೆಲುಗಿನ ಖ್ಯಾತ ನಿರ್ದೇಶಕ ಕೊರಟಲಾ ಶಿವ ಈ ಸಿನಿಮಾ ನಿರ್ದೇಶನ ಮಾಡುತ್ತಿರುವುದು ವಿಶೇಷ.
ಸೌತ್ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ನಿರ್ಮಿಸಿದ ಸೈರಾ ನರಸಿಂಹ ರೆಡ್ಡಿ
ಮಿರ್ಚಿ, ಶ್ರೀಮಂತಡು, ಜನತಾ ಗ್ಯಾರೇಜ್, ಭರತ್ ಅನೇ ನೇನು ಅಂತಹ ಬ್ಲಾಕ್ ಬಸ್ಟರ್ ಚಿತ್ರಗಳನ್ನ ನೀಡಿರುವ ಕೊರಟಲಾ ಶಿವ ಅವರು ಈಗ ಮೆಗಾಸ್ಟಾರ್ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ನಿರ್ಮಾಣದಲ್ಲೂ ರಾಮ್ ಚರಣ್ ಭಾಗಿಯಾಗಲಿದ್ದಾರೆ.
ಸಾಮಾಜಿಕ ಸಂದೇಶವನ್ನ ನೀಡುವಂತಹ ಸಿನಿಮಾಗಳನ್ನ ಮಾಸ್ ಎಲಿಮೆಂಟ್ಸ್ ಮೂಲಕ ಪ್ರೇಕ್ಷಕರಿಗೆ ತಲುಪಿಸುವಲ್ಲಿ ನಿರ್ದೇಶಕ ಕೊರಟಲಾ ಶಿವ ನಿಪುಣರು. ಭರತ್ ಅನೇ ನೇನು ಯಶಸ್ಸಿನ ಬಳಿಕ ಚಿರಂಜೀವಿ ಅವರಿಗೆ ಕಥೆ ಹೇಳಿದ್ದರು. ಆಗಲೇ ಕಥೆಗೆ ಓಕೆ ಹೇಳಿದ್ದ ಚಿರು, ಸೈರಾ ಸಿನಿಮಾ ಮುಗಿಯುವರೆಗೂ ಕಾಯಲು ಸೂಚಿಸಿದ್ದರು.
ತಮನ್ನಾಗೆ ರಾಮ್ ಚರಣ್ ಪತ್ನಿ ಕೊಟ್ಟಿದ್ದು ವಜ್ರದ ಉಂಗುರನಾ?
ಈಗ ಸೈರಾ ಗೆದ್ದಿದೆ. ಆ ಕಡೆ ಡೈರೆಕ್ಟರ್ ಶಿವ ಅವರು ಕೂಡ ಚಿರು ಚಿತ್ರಕ್ಕಾಗಿ ಎಲ್ಲ ತಯಾರಿ ನಡೆಸಿಕೊಂಡಿದ್ದಾರೆ. ಸಂಪ್ರದಾಯವಾಗಿ ಪೂಜೆ ಮಾಡಿರುವ ಚಿತ್ರತಂಡ ಸದ್ಯದಲ್ಲೇ ಶೂಟಿಂಗ್ ಆರಂಭಿಸಲಿದೆ. ಆದರೆ, ಯಾವ ರೀತಿಯ ಕಥೆ ಹೊಂದಿರುತ್ತೆ, ನಾಯಕಿ ಯಾರಾಗಬಹುದು ಎಂಬ ಕುತೂಹಲ ಮಾತ್ರ ಇನ್ನು ಸ್ವಲ್ಪ ದಿನ ಹಾಗೆ ಉಳಿಯಲಿದೆ.