Don't Miss!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- News Chardham Yatra Guidelines 2024: ಚಾರ್ಧಾಮ್ ಯಾತ್ರೆಗೆ ಹೋಗುವಾಗ ಈ ವಸ್ತುಗಳನ್ನು ಬ್ಯಾಗ್ ಅಲ್ಲಿ ಇಟ್ಟುಕೊಳ್ಳಿ....
- Automobiles ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- Lifestyle ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೃದಯ ಹಿಂಡುವಂತೆ ಮಾಡುತ್ತದೆ ಚಿರು ಸರ್ಜಾ ಬರೆದಿದ್ದ ಈ ಕಾಮೆಂಟ್
ಚಿರಂಜೀವಿ ಸರ್ಜಾ ಸದಾ ನಗುತ್ತಾ, ಲವಲವಿಕೆಯಿಂದ ಇರುತ್ತಿದ್ದವರು. ಯಾರೊಂದಿಗೂ ವಿರೋಧ ಕಟ್ಟಿಕೊಳ್ಳದ, ಎಲ್ಲರೊಂದಿಗೆ ಆತ್ಮೀಯತೆಯಿಂದ ಬೆರೆಯುವ ವ್ಯಕ್ತಿತ್ವದವರು. ಅವರ ಸಾಮಾಜಿಕ ಜಾಲತಾಣಗಳಲ್ಲಿನ ಚಟುವಟಿಕೆಗಳನ್ನು ಗಮನಿಸಿದರೆ ಅವರ ಸರಳತೆ ಅರ್ಥವಾಗುತ್ತದೆ.
Recommended Video
ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂಗಳಲ್ಲಿ ಚಿರಂಜೀವಿ ಸಕ್ರಿಯರಾಗಿರುತ್ತಿದ್ದರು. ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದ ಅವರು ಅದಕ್ಕೆ ಪುಟ್ಟದಾಗಿ ಕ್ಯಾಪ್ಷನ್ ಹಾಕುತ್ತಿದ್ದರು. ಹಾಗೆಯೇ ಅದಕ್ಕೆ ಬರುವ ಕಾಮೆಂಟ್ಗಳಿಗೆ ಸಾಧ್ಯವಾದಷ್ಟು ಪ್ರತಿಕ್ರಿಯಿಸುತ್ತಿದ್ದರು. ಬೇರೆ ನಟ-ನಟಿಯರ ಪೋಸ್ಟ್ಗಳಿಗೂ ಪ್ರತಿಕ್ರಿಯೆ ನೀಡುತ್ತಿದ್ದರು. ಇತ್ತೀಚೆಗೆ ಅವರು ಹಾಕಿದ್ದ ಕೆಲವು ಪೋಸ್ಟ್ಗಳು ಮತ್ತು ಕಾಮೆಂಟ್ಗಳು ವೈರಲ್ ಆಗುತ್ತಿವೆ. ಅವರ ಅಗಲುವಿಕೆಯ ದುಃಖದ ನಡುವೆ ಅವರ ಕೆಲವು ಹಳೆಯ ಕಾಮೆಂಟ್ಗಳು ನೋವನ್ನು ಮತ್ತಷ್ಟು ಹೆಚ್ಚಿಸುವಂತಿವೆ. ಮುಂದೆ ಓದಿ...
ಚಿರು ಅಗಲಿಕೆಯ ಬಗ್ಗೆ ಅರ್ಜುನ್ ಸರ್ಜಾ ಮೊದಲ ನೋವಿನ ನುಡಿ
ನಾನೂ ಹುಟ್ಟಿದೆ...
ಎರಡನೆಯ ಮಗು ಜನಿಸುವ ಕೆಲವು ತಿಂಗಳ ಮೊದಲು ರಾಧಿಕಾ ಪಂಡಿತ್, ಮೊದಲ ಮಗು ಐರಾ ಜತೆಗಿನ ಮುದ್ದಾದ ಫೋಟೊವೊಂದನ್ನು ಕಳೆದ ವರ್ಷ ಹಂಚಿಕೊಂಡಿದ್ದರು. 'ಈಕೆ ಹುಟ್ಟಿದ ದಿನ ನಾನೂ ಕೂಡ ಹುಟ್ಟಿದೆ. ಅಮ್ಮನಾಗಿ...' ಎಂಬ ಭಾವುಕ ಸಾಲುಗಳನ್ನು ಅವರು ಬರೆದಿದ್ದರು.
ತಿಂಗಳ ಹಿಂದಷ್ಟೇ ಮದುವೆ
ಈ ಫೋಟೊಗೆ ಚಿರಂಜೀವಿ ಸರ್ಜಾ ಮಾಡಿದ್ದ ಕಾಮೆಂಟ್ ಈಗ ವೈರಲ್ ಆಗಿದೆ. ಟ್ರೋಲ್ ಮತ್ತು ಮೀಮ್ ಪುಟಗಳಲ್ಲಿ ಈ ಕಾಮೆಂಟ್ ಸ್ಕ್ರೀನ್ ಶಾಟ್ ಹರಿದಾಡುತ್ತಿದೆ. ರಾಧಿಕಾ ಪಂಡಿತ್ ಮಗುವಿನ ಜತೆಗಿನ ಈ ಫೋಟೊ ಹಾಕುವ ಒಂದು ತಿಂಗಳ ಹಿಂದಷ್ಟೇ ಚಿರಂಜೀವಿ ಮತ್ತು ಮೇಘನಾ ರಾಜ್ ಮದುವೆಯಾಗಿತ್ತು.
ಈ ಚಿತ್ರ ನನ್ನ ಜೀವನದ ಮೈಲುಗಲ್ಲಾಗುತ್ತದೆ ಎಂದಿದ್ದರು ಚಿರು, ಆದರೆ ಅದಕ್ಕೆ ಅವಕಾಶವೇ ಸಿಗಲಿಲ್ಲ
ಖುಷಿಯಾಗುತ್ತಿದೆ ಎಂದಿದ್ದ ಚಿರು
ರಾಧಿಕಾ ಬರೆದಿದ್ದ ಸಾಲುಗಳನ್ನು ಮೆಚ್ಚಿಕೊಂಡಿದ್ದ ಚಿರಂಜೀವಿ, 'ಅದು ಬಹಳ ನಿಜ. ಹೇಗೆ ವಿವರಿಸಬೇಕು ಎನ್ನುವುದು ನನಗೆ ಗೊತ್ತಾಗುತ್ತಿಲ್ಲ. ಆದರೆ ಯಶ್ ಮತ್ತು ನಿಮ್ಮ ಬಗ್ಗೆ ನನಗೆ ತುಂಬಾ ಖುಷಿಯಾಗುತ್ತಿದೆ' ಎಂದು ಹೇಳಿದ್ದರು.
ನಿಮ್ಮ ಸರದಿ ಎಂದಿದ್ದ ರಾಧಿಕಾ
ಅದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದ ರಾಧಿಕಾ, 'ಥ್ಯಾಂಕ್ಯೂ ಚಿರು. ಮುಂದಿನ ಸರದಿ ನಿಮ್ಮಿಬ್ಬರದು' ಎಂದು ಹೇಳಿದ್ದರು. ತಮ್ಮ ಕುಟುಂಬಕ್ಕೆ ಹೊಸ ಸದಸ್ಯ ಬರುತ್ತಿದ್ದಾನೆ ಎಂಬ ಸಂಗತಿ ಚಿರಂಜೀವಿ ಅವರನ್ನು ಎಕ್ಸೈಟ್ ಮಾಡಿತ್ತು. ಅದನ್ನು ಅವರೇ ಆಪ್ತರ ಬಳಿ ಹೇಳಿಕೊಂಡಿದ್ದರಂತೆ. ಆದರೆ ದುರದೃಷ್ಟವಶಾತ್ ಈ ಅನುಭವ ಪಡೆದುಕೊಳ್ಳುವ ಮುನ್ನವೇ ಚಿರು ಎಲ್ಲರನ್ನೂ ಅಗಲಿದ್ದಾರೆ.
ಚಿರು ಹೃದಯಾಘಾತಕ್ಕೆ ಕಾರಣಗಳೇನು?: ಜೋಪಾನವಾಗಿರಲಿ ನಿಮ್ಮ ಹೃದಯ ಎನ್ನುತ್ತಾರೆ ವೈದ್ಯರು