twitter
    For Quick Alerts
    ALLOW NOTIFICATIONS  
    For Daily Alerts

    ಜೂನ್ 17ರಂದು ಚಿರು ಸರ್ಜಾ 11ನೇ ದಿನದ ಪುಣ್ಯ ತಿಥಿ

    |

    ನಟ ಚಿರಂಜೀವಿ ಸರ್ಜಾ ನಿಧನ ಹೊಂದಿ 10 ದಿನಗಳಾಯಿತು. ಚಿರು ಸರ್ಜಾ ಹಠಾತ್ ಅಗಲಿಕೆಯ ಆಘಾತದಿಂದ ಕುಟುಂಬ್ಥರು ಇನ್ನೂ ಹೊರಬಂದಿಲ್ಲ. ಪ್ರತಿ ದಿನ ಚಿರು ನೆನಪು ಅವರನ್ನು ಕಾಡುತ್ತಿದೆ. ಸಹೋದರ ಧ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಅಣ್ಣನ ಜೊತೆ ಇರುವ ಪೋಸ್ಟ್ ಗಳನ್ನು ಹಾಕುತ್ತ ಅಣ್ಣನ ನೆನಪಲ್ಲೆ ದಿನಕಳೆಯುತ್ತಿದ್ದಾರೆ.

    Recommended Video

    ಚಿರು ಪುಣ್ಯತಿಥಿ ಕುಟುಂಬದವರಿಗೆ ಖಡಕ್ ಸೂಚನೆ ಕೊಟ್ಟ ಪೊಲೀಸ್ | Chiranjeevi Sarja | Meghan Raj | Dhruva Sarja

    ಇದೀಗ ಚಿರು ಸರ್ಜಾ 11ನೇ ದಿನದ ಪುಣ್ಯತಿಥಿ ಮಾಡೋ ಸಂದರ್ಭ ಬಂದಿದೆ. ಇದೆ ತಿಂಗಳು 17ರಂದು ಚಿರು ಸರ್ಜಾ ಪುಣ್ಯತಿಥಿ ಕಾರ್ಯ ಮಾಡಲಾಗುತ್ತಿದೆ. ಸರ್ಜಾ ಕುಟುಂಬ ಬುಧವಾರ ಬೆಳಗ್ಗೆ 10.30ಕ್ಕೆ ಚಿರು ಅಂತ್ಯ ಸಂಸ್ಕಾರ ನಡೆದ ಕನಕಪುರ ರಸ್ತೆಯ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಚಿರು ಪುಣ್ಯತಿಥಿ ಮಾಡುತ್ತಿದ್ದಾರೆ.

    ಚಿರು ಮಣ್ಣಾದ ಸ್ಥಳದಲ್ಲಿ ಭವ್ಯ ಮಂಟಪ ನಿರ್ಮಿಸಲಿದ್ದಾರೆ ಧ್ರುವ ಸರ್ಜಾಚಿರು ಮಣ್ಣಾದ ಸ್ಥಳದಲ್ಲಿ ಭವ್ಯ ಮಂಟಪ ನಿರ್ಮಿಸಲಿದ್ದಾರೆ ಧ್ರುವ ಸರ್ಜಾ

    ಅಣ್ಣ ಸದಾ ಜೊತೆಯಲ್ಲಿಯೆ ಇರಬೇಕೆಂದು ಧ್ರುವ ಸರ್ಜಾ ತನ್ನ ಫಾರ್ಮ ಹೌಸ್ ನಲ್ಲಿಯೆ ಅಣ್ಣನ ಅಂತ್ಯಕ್ರಿಯೆ ಮಾಡಲಾಗಿದೆ. ಅಂತ್ಯಕ್ರಿಯೆ ಆದ ಎರಡು ದಿನಗಳಲ್ಲಿಯೆ ಅಣ್ಣನ ಪುಣ್ಯ ಭೂಮಿಗೆ ಬಿಸಿಲು ಬೀಳಬಾರದೆಂದು ಮಂಟಪ ಕಟ್ಟಿಸಿದ್ದಾರೆ. ಅಷ್ಟೆಯಲ್ಲ ಚಿರು ಸಮಾಧಿ ಸ್ಥಳದಲ್ಲಿ ದೊಡ್ಡದಾದ ಮಂಟಪವನ್ನು ಧ್ರುವ ಕಟ್ಟಿಸಲಿದ್ದಾರಂತೆ.

    Chiranjeevi Sarjas 11th Day Puja Will Held In Brindavan Farm House

    ಇತ್ತೀಚಿಗಷ್ಟೆ ರಾಘವೇಂದ್ರ ರಾಜ್ ಕುಮಾರ್ ಕುಟುಂಬ ನೋವಿನಲ್ಲಿರುವ ಸರ್ಜಾ ಕುಟುಂಬ ಭೇಟಿಯಾಗಿ ಧೈರ್ಯ ಹೇಳಿದ್ದಾರೆ. ನಂತರ ಸುಂದರ್ ರಾಜ್ ಮನೆಗೆ ಭೇಟಿ ನೀಡಿ ಮೇಘನಾ ಅವರನ್ನು ಮಾತನಾಡಿಸಿ ಸಾಂತ್ವನ ಹೇಳಿದ್ದಾರೆ. ಕುಟುಂಬದ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    English summary
    Actor Chiranjeevi Sarja's 11th day puja will held in Brindavan Farm house.
    Tuesday, June 16, 2020, 11:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X