Don't Miss!
- News ಕುಡಿಯುವ ನೀರಿಲ್ಲದೇ ಜನ ಬೆಂಗಳೂರಿಗೆ ಬಾಯ್ ಹೇಳುತ್ತಿದ್ದಾರೆ: ಆರ್.ಅಶೋಕ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೂನ್ 17ರಂದು ಚಿರು ಸರ್ಜಾ 11ನೇ ದಿನದ ಪುಣ್ಯ ತಿಥಿ
ನಟ ಚಿರಂಜೀವಿ ಸರ್ಜಾ ನಿಧನ ಹೊಂದಿ 10 ದಿನಗಳಾಯಿತು. ಚಿರು ಸರ್ಜಾ ಹಠಾತ್ ಅಗಲಿಕೆಯ ಆಘಾತದಿಂದ ಕುಟುಂಬ್ಥರು ಇನ್ನೂ ಹೊರಬಂದಿಲ್ಲ. ಪ್ರತಿ ದಿನ ಚಿರು ನೆನಪು ಅವರನ್ನು ಕಾಡುತ್ತಿದೆ. ಸಹೋದರ ಧ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಅಣ್ಣನ ಜೊತೆ ಇರುವ ಪೋಸ್ಟ್ ಗಳನ್ನು ಹಾಕುತ್ತ ಅಣ್ಣನ ನೆನಪಲ್ಲೆ ದಿನಕಳೆಯುತ್ತಿದ್ದಾರೆ.
Recommended Video
ಇದೀಗ ಚಿರು ಸರ್ಜಾ 11ನೇ ದಿನದ ಪುಣ್ಯತಿಥಿ ಮಾಡೋ ಸಂದರ್ಭ ಬಂದಿದೆ. ಇದೆ ತಿಂಗಳು 17ರಂದು ಚಿರು ಸರ್ಜಾ ಪುಣ್ಯತಿಥಿ ಕಾರ್ಯ ಮಾಡಲಾಗುತ್ತಿದೆ. ಸರ್ಜಾ ಕುಟುಂಬ ಬುಧವಾರ ಬೆಳಗ್ಗೆ 10.30ಕ್ಕೆ ಚಿರು ಅಂತ್ಯ ಸಂಸ್ಕಾರ ನಡೆದ ಕನಕಪುರ ರಸ್ತೆಯ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಚಿರು ಪುಣ್ಯತಿಥಿ ಮಾಡುತ್ತಿದ್ದಾರೆ.
ಚಿರು ಮಣ್ಣಾದ ಸ್ಥಳದಲ್ಲಿ ಭವ್ಯ ಮಂಟಪ ನಿರ್ಮಿಸಲಿದ್ದಾರೆ ಧ್ರುವ ಸರ್ಜಾ
ಅಣ್ಣ ಸದಾ ಜೊತೆಯಲ್ಲಿಯೆ ಇರಬೇಕೆಂದು ಧ್ರುವ ಸರ್ಜಾ ತನ್ನ ಫಾರ್ಮ ಹೌಸ್ ನಲ್ಲಿಯೆ ಅಣ್ಣನ ಅಂತ್ಯಕ್ರಿಯೆ ಮಾಡಲಾಗಿದೆ. ಅಂತ್ಯಕ್ರಿಯೆ ಆದ ಎರಡು ದಿನಗಳಲ್ಲಿಯೆ ಅಣ್ಣನ ಪುಣ್ಯ ಭೂಮಿಗೆ ಬಿಸಿಲು ಬೀಳಬಾರದೆಂದು ಮಂಟಪ ಕಟ್ಟಿಸಿದ್ದಾರೆ. ಅಷ್ಟೆಯಲ್ಲ ಚಿರು ಸಮಾಧಿ ಸ್ಥಳದಲ್ಲಿ ದೊಡ್ಡದಾದ ಮಂಟಪವನ್ನು ಧ್ರುವ ಕಟ್ಟಿಸಲಿದ್ದಾರಂತೆ.
ಇತ್ತೀಚಿಗಷ್ಟೆ ರಾಘವೇಂದ್ರ ರಾಜ್ ಕುಮಾರ್ ಕುಟುಂಬ ನೋವಿನಲ್ಲಿರುವ ಸರ್ಜಾ ಕುಟುಂಬ ಭೇಟಿಯಾಗಿ ಧೈರ್ಯ ಹೇಳಿದ್ದಾರೆ. ನಂತರ ಸುಂದರ್ ರಾಜ್ ಮನೆಗೆ ಭೇಟಿ ನೀಡಿ ಮೇಘನಾ ಅವರನ್ನು ಮಾತನಾಡಿಸಿ ಸಾಂತ್ವನ ಹೇಳಿದ್ದಾರೆ. ಕುಟುಂಬದ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.