ಬೃಂದಾವನ ಫಾರ್ಮ್ ಹೌಸ್ ನಲ್ಲಿ ಚಿರಂಜೀವಿ ಸರ್ಜಾ ಮೂರನೆ ದಿನದ ಹಾಲು ತುಪ್ಪ ಕಾರ್ಯ
ನಟ ಚಿರಂಜೀವಿ ಸರ್ಜಾ ನಿಧನಹೊಂದಿ 3 ದಿನಗಳು ಕಳೆದಿವೆ. ಇಂದು ಚಿರು ಸರ್ಜಾ ಸಮಾಧಿಗೆ ಹಾಲು ತುಪ್ಪ ಕಾರ್ಯ ನಡೆಯಿತು. ಕನಕಪುರ ರಸ್ತೆಯಲ್ಲಿರುವ ಧ್ರುವ ಸರ್ಜಾ ಫಾರ್ಮ್ ಹೌಸ್ ನಲ್ಲಿ ಚಿರು ಚಿರನಿದ್ರೆಗೆ ಜಾರಿದ್ದಾರೆ. ಸಂಜೆ 5 ಗಂಟೆಗೆ ಹಿಂದೂ ಸಂಪ್ರದಾಯದಂತೆ ಚಿರು ಸರ್ಜಾ ಅಂತ್ಯಕ್ರಿಯೆ ನೆರವೇರಿದೆ.
Recommended Video
ಇಂದು ಚಿರು ಸರ್ಜಾ ಮೂರನೆ ದಿನದ ಕಾರ್ಯಗಳನ್ನು ಮಾಡಲಾಗುತ್ತಿದೆ. ಬೃಂದಾವನ ಫಾರ್ಮ್ ಹೌಸ್ ನಲ್ಲಿರುವ ಚಿರು ಸರ್ಜಾ ಸಮಾಧಿಗೆ ಸರ್ಜಾ ಕುಟುಂಬದವರು ಮೂರನೆ ದಿನದ ಹಾಲು ತುಪ್ಪ ಕಾರ್ಯ ನಡೆಯುತ್ತಿದೆ. ಅಂತ್ಯ ಕ್ರಿಯೆ ವಿಧಿವಿಧಾನ ನಡೆಸಿಕೊಟ್ಟ ಮೋಹನ್ ಪುರೋಹಿತರ ಸಮ್ಮುಖದಲ್ಲಿ ಹಾಲು ತುಪ್ಪ ಕಾರ್ಯ ನಡೆಯುತ್ತಿದೆ.
ಇಂದು ಬೆಳಗ್ಗೆ ಸರ್ಜಾ ಕುಟುಂಬ ಮತ್ತು ಮೇಘನಾ ರಾಜ್ ಬೃಂದಾವನ ಫಾರ್ಮ್ ಹೌಸ್ ಗೆ ತೆರಳಿದ್ದರು. ಹಾಲು ತುಪ್ಪ ಕಾರ್ಯದಲ್ಲಿ ಕುಟುಂಬದವರು ಮತ್ತು ಕೆಲ ಆಪ್ತರು ಮಾತ್ರ ಭಾಗಿಯಾಗಿದ್ದರು. ಅಣ್ಣ ತನ್ನ ಜೊತೆಯೇ ಇರಬೇಕೆಂದು ಧ್ರುವ ಸರ್ಜಾ ಫಾರ್ಮ್ ಹೌಸ್ ನಲ್ಲಿಯೆ ಅಂತ್ಯ ಕ್ರಿಯೆ ನಡೆದಿದೆ.

ಅಣ್ಣ-ತಮ್ಮ ಸದಾ ಜೊತೆಯಲ್ಲಿರುತ್ತಿದ್ದಣರು. ಇಬ್ಬರು ಸಹೋದರು ಎನ್ನುವುದಕ್ಕಿಂತ ಸ್ನೇಹಿತರಾಗಿದ್ದರು. ಇಂದು ಹಾಲು ತುಪ್ಪ ಕಾರ್ಯದಲ್ಲಿಯೂ ಧ್ರುವ ಅಣ್ಣನ ನೆನೆದು ಕಣ್ಣೀರಿಟ್ಟರು.


Click it and Unblock the Notifications











