twitter
    For Quick Alerts
    ALLOW NOTIFICATIONS  
    For Daily Alerts

    ಜಾನಕಿ ವಿರುದ್ಧವೇ ದ್ವೇಷ ಬೆಳೆಸಿಕೊಳ್ಳುತ್ತಾಳಾ ಮುದ್ದು ತಂಗಿ ಚಂಚಲ

    |

    ಚಂಚಲ ಮದುವೆ ವಿಚಾರ ಬಾರಿ ಕಗ್ಗಂಟಾಗಿ ಕಾಡುತ್ತಿದೆ. ಚಿರಂತನ್ ಕ್ರಿಮಿನಲ್ ಬ್ಯಾಗ್ರೌಂಡ್ ಬಗ್ಗೆ ಜಾನಕಿಗೆ ಎಲ್ಲಾ ಸತ್ಯ ಗೊತ್ತಾಗಿದೆ. ಸಿ ಎಸ್ ಪಿ ಹೇಳಿದ ಸತ್ಯವನ್ನು ಜಾನಕಿ ತಾಯಿ ರಶ್ಮಿ ಬಳಿಯೂ ಹೇಳಿದ್ದಾರೆ.

    ತಂಗಿಯ ಬಾಳು ಹಾಳಾಗುವುದು ಜಾನಕಿಗೂ ಇಷ್ಟವಿಲ್ಲ. ಹಾಗಾಗಿ ಕ್ರಿಮಿನಲ್ ಚಿರಂತನ್ ಜೊತೆ ಚಂಚಲ ಮದುವೆ ತಪ್ಪಿಸಲು ಜಾನಕಿ ಹರಸಾಹಸ ಪಡುತ್ತಿದ್ದಾರೆ. ಜಾನಕಿ ಮಾತು ಕೇಳಿ ಜಾನಕಿ ಮೇಲೆ ಭಾರ್ಗಿ ಮತ್ತಷ್ಟು ಸಿಟ್ಟಾಗಿದ್ದಾರೆ.

    ಜಾನಕಿ ಮಾತಿನಿಂದ ಚಿರಂತನ್ ನನ್ನು ಮನೆಗೆ ಕರೆಸಿ ಸತ್ಯ ಕೇಳಿದ್ದಾರೆ ಭಾರ್ಗಿ. ಚಿರಂತನ್ ಮೇಲೆ ಸರಿಯಾಗಿ ರೇಗಿದ ಹಾಗೆ ಮಾಡಿ ನಂತರ ಮಗಳನ್ನು ಮದುವೆ ಆಗಲ್ಲು ಒಪ್ಪಿಕೊಂಡಿದ್ದಾರೆ. ಮತ್ತೊಂದೆಡೆ ಭಾರ್ಗಿ, ಚಂಚಲಳನ್ನು ಜಾನಕಿ ವಿರುದ್ಧ ಎತ್ತಿಕೊಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ಮುಂದೆ ಓದಿ..

    ಚಿರಂತನ್ ಗೆ ಭಾರ್ಗಿ ವಾರ್ನಿಂಗ್

    ಚಿರಂತನ್ ಗೆ ಭಾರ್ಗಿ ವಾರ್ನಿಂಗ್

    ಚಿರಂತನ್ ಅವರ ಕ್ರಿಮಿನಲ್ ಬ್ಯಾಗ್ರೌಂಡ್ ಬಗ್ಗೆ ಭಾರ್ಗಿ ವಿಚಾರಿಸಿದ್ದಾರೆ. ನಿನ್ನಂತಹ ಕ್ರಿಮಿನಲ್ ವ್ಯಕ್ತಿಗೆ ಮಗಳನ್ನು ಕೊಡುವುದಿಲ್ಲ ಎಂದು ಭಾರ್ಗಿ ರೊಚ್ಚಿಗೆದ್ದಿದ್ದಾರೆ. ನೀನೊಬ್ಬ ಕ್ರಿಮಿನಲ್ ಆಗಿ ಚಂಚಲಳನ್ನು ಪ್ರೀತಿ ಮಾಡುವಷ್ಟು ಧೈರ್ಯ ಬಂತ ಎಂದು ಭಾರ್ಗಿ ಚಿರಂತನ್ ಮೇಲೆ ರೇಗಾಡಿದ್ದಾರೆ. ಅಷ್ಟೆಯಲ್ಲ ಚಿರಂತನ್ ಮೇಲೆ ಕೈ ಮಾಡಲು ಮುಂದಾಗಿದ್ರು ಭಾರ್ಗಿ.

    ಭಾರ್ಗಿ ಕ್ರಿಮಿನಲ್ ಬ್ಯಾಗ್ರೌಂಡ್ ಬಿಚ್ಚಿಟ್ಟ ಚಿರಂತನ್

    ಭಾರ್ಗಿ ಕ್ರಿಮಿನಲ್ ಬ್ಯಾಗ್ರೌಂಡ್ ಬಿಚ್ಚಿಟ್ಟ ಚಿರಂತನ್

    ಸ್ನೇಹಿತ ಮಾಡಿದ ಪ್ರಕರಣದಿಂದ ನಾನೇನು ಅಪರಾದಿ ಅಲ್ಲ. ಅರೋಪ ಬಂದಕ್ಷಣ ಅಪರಾದಿ ಆಗುವುದಿಲ್ಲ. ಚಂಚಲ ತುಂಬ ಹಚ್ಕೊಂಡಿದ್ದಾರೆ. ಒಂದು ವೇಳೆ ನಾನು ಬಿಟ್ಟು ಹೋದೆ ಎಂದು ಚಂಚಲಗೆ ಏನಾದ್ರು ಆದ್ರೆ ಭಾರ್ಗಿನೆ ಹೊಣೆ ಎಂದು ಹೇಳಿ ಭಾರ್ಗಿಯನ್ನು ನಂಬಿಸಿದ್ದಾರೆ ಚಿರಂತನ್. ಚಿರಂತನ್ ಮಾತು ಕೇಳಿ ಆತನ ಧೈರ್ಯ ಮೆಚ್ಚಿ ಬೇಶ್ ಅಂದಿದ್ದಾರೆ ಭಾರ್ಗಿ. ಮುಂದೆ ಇಂತಹ ಕ್ರಿಮಿನಲ್ ಪ್ರಕರಣಗಳನ್ನು ಮಾಡಬಾರದು ಎಂದು ವಾರ್ನಿಂಗ್ ಮಾಡಿದ್ದಾರೆ.

    ಚಂಚಲ ಮನಸ್ಸಿನಲ್ಲಿ ದ್ವೇಷ ಬಿತ್ತಿದ ಭಾರ್ಗಿ

    ಚಂಚಲ ಮನಸ್ಸಿನಲ್ಲಿ ದ್ವೇಷ ಬಿತ್ತಿದ ಭಾರ್ಗಿ

    ಚಂಚಲ ಮತ್ತು ಜಾನಕಿ ಇಬ್ಬರು ಅಕ್ಕ-ತಂಗಿ. ಇಬ್ಬರಿಗೂ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ತುಂಬಾ ಪ್ರೀತಿ. ಆದ್ರೆ ಭಾರ್ಗಿ ಚಂಚಲ ಬಳಿ ಜಾನಕಿ ಬಗ್ಗೆ ಹೇಳಿ ಧ್ವೇಷದ ಬೀಜ ಬಿತ್ತಿದ್ದಾರೆ. ಚಿರಂತನ್ ಕ್ರಿಮಿನಲ್ ಎಂದು ಜಾನಕಿ ಮದುವೆ ಬೇಡ ಎಂದು ಹೇಳುತ್ತಿದ್ದಾಳೆ. ಆದ್ರೆ ಜಾನಕಿಗೆ ಚಂಚಲ ಹೋಮ್ ಮಿನಿಸ್ಟರ್ ಮನೆಯ ಸೊಸೆ ಆಗಿ ಹೋಗುತ್ತಿರುವುದು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಜಾನಕಿ ವಿರುದ್ಧ ಚಂಚಲಳನ್ನು ಎತ್ತಿಕಟ್ಟುವ ತಂತ್ರ ಮಾಡುತ್ತಿದ್ದಾರೆ.

    ಶ್ಯಾಮಲಾ ಮನೆಯಲ್ಲಿ ಮೈತ್ರಿ

    ಶ್ಯಾಮಲಾ ಮನೆಯಲ್ಲಿ ಮೈತ್ರಿ

    ಮೈತ್ರಿ ಮಹಾನಂದ ಶ್ಯಾಮಲಾ ಅವರ ಮಗಳು ಅಂತ ಗೊತ್ತಿಲ್ಲ. ಆದ್ರೆ ಶ್ಯಾಮಲಾ ಅವರಿಗೆ ಮಾತ್ರ ಮೈತ್ರಿ ಮೇಲೆ ವಿಶೇಷವಾದ ಪ್ರೀತಿ. ಎಲ್ಲೋ ಉಳಿದು ಕೊಳ್ಳುವುದಕ್ಕಿಂತ ಶ್ಯಾಮಲ ಮನೆಯಲ್ಲೆ ಇರಬಹುದೆಂದು ಕೇಳಿಕೊಂಡಿದ್ದಾರೆ. ಅಲ್ಲದೆ ಮೈತ್ರಿ ಮೇಲೆ ವಿಶೇಷವಾದ ಅಕ್ಕರೆ ಇದೆ ಎಂದು ಹೇಳಿದ್ದಾರೆ. ಸಿ ಎಸ್ ಪಿ ಪುತ್ರ ಮಧುಕರ ಅನ್ನು ಭೇಟಿಯಾದ ಬಗ್ಗೆ ಹೇಳಿ, ಊಟ ಮಾಡಿ ಹೊರಟು ಹೋಗಿದ್ದಾರೆ.

    ಚಿರಂತನ್ ಬಳಿ ಸತ್ಯ ಕೇಳಿದ ಚಂಚಲ

    ಚಿರಂತನ್ ಬಳಿ ಸತ್ಯ ಕೇಳಿದ ಚಂಚಲ

    ಇಬ್ಬರು ಸ್ನೇಹಿತರು ಹಾಗಾಗಿ ಅವರಿಗೆ ಸಹಾಯ ಮಾಡಿದೆ. ಆದ್ರೆ ಸ್ನೇಹಿತ ಮಾಡಿದ ಕೆಲಸಕ್ಕೆ ನಾನೆನು ಮಾಡೋಕೆ ಆಗುತ್ತೆ. ಆದ್ರೆ ಸಿ ಎಸ್ ಪಿ ದುರಹಂಕಾರಿ, ಕೇಸ್ ತೆಗೆದುಕೊಳ್ಳಲು ಒಪ್ಪಲಿಲ್ಲ. ನಂತರ ಬೇರೆ ವಕೀಲರನ್ನು ಸಂಪರ್ಕಿಸಿದ್ವಿ ಎಂದು ಹೇಳಿ ಚಂಚಲಳನ್ನು ಒಪ್ಪಿಸಿದ್ದಾರೆ ಚಿರಂತನ್. ಜೊತೆಗೆ ಚಿರಂತನ್ ಮೇಲಿದ್ದ ಮತ್ತೊಂದು ಕ್ರಿಮಿನಲ್ ಕೇಸ್ ಬಗ್ಗೆ ವಿಚಾರಿಸುತ್ತಿದ್ದಾರೆ ಚಂಚಲ. ಚಿರಂತನ್ ಮಾತನ್ನು ನಂಬಿ ಆತನನ್ನೆ ಮದುವೆಯಾಗಿ ಜಾನಕಿ ವಿರದ್ಧ ದ್ವೇಷ ಬೆಳೆಸಿಕೊಳ್ಳುತ್ತಾಳಾ ಚಂಚಲ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

    mobile summ

    ಚಿರಂತನ್ ಅವರ ಕ್ರಿಮಿನಲ್ ಬ್ಯಾಗ್ರೌಂಡ್ ಬಗ್ಗೆ ಭಾರ್ಗಿ ವಿಚಾರಿಸಿದ್ದಾರೆ. ನಿನ್ನಂತಹ ಕ್ರಿಮಿನಲ್ ವ್ಯಕ್ತಿಗೆ ಮಗಳನ್ನು ಕೊಡುವುದಿಲ್ಲ ಎಂದು ಭಾರ್ಗಿ ರೊಚ್ಚಿಗೆದ್ದಿದ್ದಾರೆ. ನೀನೊಬ್ಬ ಕ್ರಿಮಿನಲ್ ಆಗಿ ಚಂಚಲಳನ್ನು ಪ್ರೀತಿ ಮಾಡುವಷ್ಟು ಧೈರ್ಯ ಬಂತ ಎಂದು ಭಾರ್ಗಿ ಚಿರಂತನ್ ಮೇಲೆ ರೇಗಾಡಿದ್ದಾರೆ. ಅಷ್ಟೆಯಲ್ಲ ಚಿರಂತನ್ ಮೇಲೆ ಕೈ ಮಾಡಲು ಮುಂದಾಗಿದ್ರು ಭಾರ್ಗಿ. ಸ್ನೇಹಿತ ಮಾಡಿದ ಪ್ರಕರಣದಿಂದ ನಾನೇನು ಅಪರಾದಿ ಅಲ್ಲ. ಅರೋಪ ಬಂದಕ್ಷಣ ಅಪರಾದಿ ಆಗುವುದಿಲ್ಲ. ಚಂಚಲ ತುಂಬ ಹಚ್ಕೊಂಡಿದ್ದಾರೆ. ಒಂದು ವೇಳೆ ನಾನು ಬಿಟ್ಟು ಹೋದೆ ಎಂದು ಚಂಚಲಗೆ ಏನಾದ್ರು ಆದ್ರೆ ಭಾರ್ಗಿನೆ ಹೊಣೆ ಎಂದು ಹೇಳಿ ಭಾರ್ಗಿಯನ್ನು ನಂಬಿಸಿದ್ದಾರೆ ಚಿರಂತನ್.

    English summary
    Chiranthan revealed his criminal background to Chandu Bhargi in Magalu Janaki serial.
    Friday, June 14, 2019, 18:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X