Don't Miss!
- News ಶಿವಮೊಗ್ಗ ಲೋಕಸಭಾ ಕ್ಷೇತ್ರ: ಶಾಂತಿಯುತ ಮತದಾನಕ್ಕಾಗಿ ಅಧಿಕಾರಿಗಳಿಗೆ ಖಡಕ್ ಸೂಚನೆ
- Sports ಟಿ20 ವಿಶ್ವಕಪ್-2024: "ಬಾಗಿಲು ಮುಚ್ಚಿದ್ದೇನೆ" ಎಂದಿದ್ದೇಕೆ ಸ್ಪಿನ್ ಮಾಂತ್ರಿಕ ನರೈನ್
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಳ್ಳಿಪರದೆಗೆ ಜಿಗಿದ ಚಿತ್ರದುರ್ಗದ ಕೋತಿರಾಜ
ಹಾಗಾಗಿ ಈತನನ್ನು ಜನ ಪ್ರೀತಿಯಿಂದ ಕೋತಿ ರಾಜ, ಕೋತಿ ಮನುಷ್ಯ, ಮಂಕಿ ಮ್ಯಾನ್ ಎಂದು ಕರೆಯುತ್ತಾರೆ. ಈ ಬಗ್ಗೆ ಆತನಿಗೇನು ಬೇಸರವೂ ಇಲ್ಲ, ಯಾವುದೇ ನೋವು ಇಲ್ಲ. ಜನ ಹಾಗೆ ಕರೆಯುತ್ತಿದ್ದರೆ ಹೆಮ್ಮೆಯಿಂದ ಬೀಗುತ್ತಾನೆ. ಮತ್ತಷ್ಟು ಸಾಹಸಗಳನ್ನು ಮಾಡುತ್ತಾನೆ. ಅವರು ಪ್ರೀತಿಯಿಂದ ಕೊಟ್ಟರೆ ತಗೋತಾನೆ ಇಲ್ಲದಿದ್ದರೆ ಇಲ್ಲ.
ಈಗ ಜ್ಯೋತಿರಾಜ್ ಅವರು ಅಭಿನಯಿಸಲಿರುವ ಚಿತ್ರಕ್ಕೆ 'ಜ್ಯೋತಿ ಅಲಿಯಾಸ್ ಕೋತಿರಾಜ' ಎಂದು ಹೆಸರಿಡಲಾಗಿದೆ. ಡಿಸೆಂಬರ್ ನಲ್ಲಿ ಚಿತ್ರ ಸೆಟ್ಟೇರಲಿದೆ. ಶೈಲಾ ಡೇವಿಡ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸೆಬಾಸ್ಟಿಯನ್ ಡೇವಿಡ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಈ ಹಿಂದೆ ಸೆಬಾಸ್ಟಿಯನ್ ಅವರು 'ಅನಿಶ್ಚಿತ' ಹಾಗೂ 'ಕಳ್ಳ ಬಂದ ಕಳ್ಳ' ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಕೋತಿ ರಾಜನಿಗೆ ಇಬ್ಬರು ನಾಯಕಿಯರು. ಒಬ್ಬ ನಾಯಕ ನಟಿ ಅಶ್ವಿನಿ ಈಗಾಗಲೆ ಆಯ್ಕೆಯಾಗಿದ್ದಾರೆ. ಇನ್ನೊಬ್ಬರ ಆಯ್ಕೆ ನಡೆಯುತ್ತಿದೆ.
ಇನ್ನು ಕೋತಿರಾಜನ ಬಗ್ಗೆ ಹೇಳಬೇಕು ಅಂದ್ರೆ...ಚೆನ್ನೈನಿಂದ ಈತ ಚಿತ್ರದುರ್ಗಕ್ಕೆ ಬಂದಿದ್ದೇ ಒಂದು ಸಾಹಸಗಾಥೆ. ಚಿತ್ರದುರ್ಗದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಈತ ಜೀವನದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ. ಬೆಟ್ಟದ ಮೇಲಿಂದ ಕೆಳಗೆ ಜಿಗಿದ ಈತ ಬಚಾವಾಗಲು ಟ್ರೈ ಮಾಡಿ ಬದುಕುಳಿದ. ತನ್ನಲ್ಲಿರುವ ಸಂಥಿಂಗ್ ಸ್ಪೆಷಲ್ ಈತನಿಗೆ ಗೊತ್ತಾಗಿದ್ದೇ ಆಗ. ಅಲ್ಲಿಂದ ಕೋತಿಗಳನ್ನು ಸೂಕ್ಷ್ಮವಾಗಿ ಗಮನಿಸಿ ಕೆಲವರ್ಷಗಳಲ್ಲೆ ಅವುಗಳಂತೆ ಹತ್ತಲು ಕಲಿತ. (ಏಜೆನ್ಸೀಸ್)