Don't Miss!
- News Namma Metro Pink Line: ಮೆಟ್ರೋ ಸುರಂಗ ಕಾಮಗಾರಿ ಬಹುತೇಕ ಪೂರ್ಣ: ಯೋಜನೆಯ ಅಪ್ಡೇಟ್
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪೊಲೀಸ್ ವಿಚಾರಣೆಯಿಂದ ಸಲ್ಮಾನ್, ರಾಣಿ, ಪ್ರೀತಿ ಬಚಾವು
ಮುಂಬೈ : ಪೊಲೀಸ್ ಬಂಧನದಲ್ಲಿರುವ ಫೈನಾನ್ಶಿಯರ್ ಭರತ್ ಶಾ ಬಗೆಗೆ ಚೋರಿ ಚೋರಿ ಚುಪ್ಕೆ ಚುಪ್ಕೆ ಚಿತ್ರದಲ್ಲಿ ನಟಿಸಿರುವ ತಾರೆಯರ ವಿಚಾರಣೆ ನಡೆಸುವುದಿಲ್ಲ ಎಂದು ಮುಂಬೈ ಪೊಲೀಸ್ ಕಮಿಷನರ್ ಮಹೇಶ್ ನಾರಾಯಣ್ ಸಿಂಗ್ ಮಂಗಳವಾರ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.
ಸಲ್ಮಾನ್ ಖಾನ್, ಪ್ರೀತಿ ಜಿಂಟಾ ಹಾಗೂ ರಾಣಿ ಮುಖರ್ಜಿ ಚೋರಿ ಚೋರಿ ಚುಪ್ಕೆ ಚುಪ್ಕೆ ಚಿತ್ರದಲ್ಲಿ ಸಂಭಾವನೆ ಪಡೆದು ಕೆಲಸ ಮಾಡಿರುವ ನಟ- ನಟಿಯರಷ್ಟೆ. ಅವರನ್ನು ಭರತ್ ಶಾ ವಿಷಯದಲ್ಲಿ ಪ್ರಶ್ನೆಗೊಳಪಡಿಸುವ ಮಾತೇ ಇಲ್ಲ. ನಜೀಂ ರಿಜ್ವಿ ಬಗ್ಗೆ ಪಕ್ಕಾ ಸಾಕ್ಷ್ಯ ಸಿಕ್ಕಿರುವುದರಿಂದ ಮುಂಬೈ ಅಪರಾಧಿ ವಿಭಾಗ ಆತನ ವಿರುದ್ಧ ಮೊಕದ್ದಮೆ ದಾಖಲಿಸಿದೆ ಎಂದು ಹೇಳಿದರು.
ಭರತ್ ಶಾ ಹಣ ಸಹಾಯ ಮಾಡಿ, ಬಿಡುಗಡೆಗೆ ಸಿದ್ಧವಾಗಿರುವ ಇನ್ನೆರಡು ಚಿತ್ರಗಳ ನಿರ್ಮಾಪಕರನ್ನು ವಿಚಾರಣೆ ಮಾಡುವಿರಾ ಎಂಬ ಪ್ರಶ್ನೆಗೆ, 'ಭೂಗತ ಜಗತ್ತಿನೊಂದಿಗೆ ಸಂಬಂಧ ಹೊಂದಿರುವ ಬಗೆಗೆ ಸೂಕ್ತ ಪುರಾವೆ ಸಿಕ್ಕಿದಲ್ಲಿ ಮಾತ್ರ ನಿರ್ಮಾಪಕರನ್ನು ಬಂಧಿಸಲು ಸಾಧ್ಯ" ಎಂದರು.
ನಾವು ಬೆನ್ನಟ್ಟಿರುವುದು ಭೂಗತ ಜಗತ್ತನ್ನು, ಸಿನಿಮಾ ಲೋಕವನ್ನಲ್ಲ. ಆದರೆ ಬಂದೂಕಿನ ನಳಿಕೆ ರೇಖೆಗೆ ಯಾವ ಯಾವ ತಲೆಗಳು ಎದುರಾಗುತ್ತವೋ ಹೇಳಲಾಗದು. ಭೂಗತ ದೊರೆಗಳ ಸಹವಾಸ ಇಟ್ಟುಕೊಂಡವರಿಗಂತೂ ಇದು ಕೇಡುಗಾಲ. ನಮ್ಮ ಉದ್ದೇಶ ಸಿನಿಮಾ ಜಗತ್ತಿಗೆ ಅಂಟಿರುವ ಭೂಗತ ದೊರೆಗಳ ಹಳೆ ಕೊಳೆ ರೋಗ ತೊಡೆದು ಹಾಕುವುದು. ಸಿನಿಮಾ ಮಂದಿಗೆ ತೊಂದರೆ ಕೊಡುವುದಲ್ಲ ಎಂದು ಸಿಂಗ್ ಖಂಡಾತುಂಡಾಗಿ ಹೇಳಿದರು.