Don't Miss!
- Sports IPL 2024: ಚಹಾಲ್ ಬಿಟ್ಟುಕೊಟ್ಟಿದರ ಬಗ್ಗೆ ಕಾರಣ ತಿಳಿಸಿದ ಆರ್ಸಿಬಿ ಮಾಜಿ ನಿರ್ದೇಶಕ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- News ಗೃಹ ಸಚಿವ ಡಾ. ಜಿ ಪರಮೇಶ್ವರ್ ರಾಜೀನಾಮೆಗೆ ಆಗ್ರಹ: ಕಾರಣವೇನು?
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Lifestyle ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೊಮ್ಮಗನನ್ನು ನೋಡಿದ ಚಿರು ತಾಯಿ ಹೇಳಿದ್ದು ಹೀಗೆ
ಚಿರಂಜೀವಿ ಸರ್ಜಾ ಕುಟುಂಬದಲ್ಲಿ ಇಂದು ಸಂತಸದ ದಿನ, ಕಳೆದ ನಾಲ್ಕು ತಿಂಗಳಿನಿಂದ ದುಃಖದಲ್ಲೇ ಸಮಯ ಕಳೆದಿದ್ದ ಕುಟುಂಬ ಇಂದು ಸಂತೋಶದ ಅಲೆಯಲ್ಲಿ ತೇಲುತ್ತಿದೆ. ಕಳೆದು ಹೋಗಿದ್ದ ನಗು ಮತ್ತೆ ಬಂದಿದೆ.
Recommended Video
ಇಂದು ಮೇಘನಾ ರಾಜ್ ಗೆ ಗಂಡು ಮಗು ಜನಿಸಿದೆ. ಅಭಿಮಾನಿಗಳು, ಕುಟುಂಬದವರಾದಿಯಾಗಿ ಎಲ್ಲರೂ, ಚಿರಂಜೀವಿ ಸರ್ಜಾ ನೆ ಮತ್ತೆ ಮಗುವಾಗಿ ಜನಿಸಿದ್ದಾನೆ ಎನ್ನುತ್ತಿದ್ದಾರೆ.
ಜೂ.ಚಿರು ಆಗಮನದ ಬಗ್ಗೆ ನಟ ಧ್ರುವ ಸರ್ಜಾ ಪ್ರತಿಕ್ರಿಯೆ
ಮಗು ಹುಟ್ಟಿದ್ದಕ್ಕೆ ಆಸ್ಪತ್ರೆ ಮುಂದೆ ಚಿರು ಅಭಿಮಾನಿಗಳು ಹಬ್ಬವನ್ನೇ ಆಚರಿಸಿದ್ದಾರೆ. ಆಸ್ಪತ್ರೆ ಮುಂದೆ ದಾರಿಯಲ್ಲಿ ಹೋಗುವವರಿಗೆಲ್ಲಾ ಸಿಹಿ ಹಂಚಿದ್ದಾರೆ. ಚಿರು ಪರ ಘೋಷಣೆ ಕೂಗಿದ್ದಾರೆ. ಪಟಾಕಿ ಹೊಡೆದು ಸಂಭ್ರಮಿಸಿದ್ದಾರೆ.
ಹಬ್ಬ ಆಚರಿಸುತ್ತಿದ್ದಾರೆ ಚಿರು-ಮೇಘನಾ ಕುಟುಂಬದವರು
ಇತ್ತ ಆಸ್ಪತ್ರೆ ಒಳಗೆ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಕುಟುಂಬ ಸದಸ್ಯರೆಲ್ಲರೂ ಪುಟ್ಟ ಮಗುವನ್ನು ಸುತ್ತವರಿದು, ಕಣ್ಣಿನಲ್ಲೇ ಮಗುವಿನ ಮುಗ್ದತೆಯನ್ನು ಸವಿಯುತ್ತಿದ್ದಾರೆ. ನಗುತ್ತಾ, ಪರಸ್ಪರ ಸಿಹಿ ತಿನಿಸುತ್ತಾ ಹಬ್ಬ ಆಚರಿಸುತ್ತಿದ್ದಾರೆ.
ಚಿರುವನ್ನೇ ನೋಡಿದಂತಾಗುತ್ತಿದೆ: ಚಿರು ಸರ್ಜಾ ತಾಯಿ
ಮೊಮ್ಮಗನನ್ನು ನೋಡಿದ ಚಿರಂಜೀವಿ ಸರ್ಜಾ ತಾಯಿ ಅಮ್ಮಾಜಿ, ಮಾಧ್ಯಮಗಳೊಟ್ಟಿಗೆ ಮಾತನಾಡಿ, ತುಂಬಾ ಸಂತೋಶವಾಗಿದೆ. ನಾವು ಚಿರುವನ್ನೇ ಮತ್ತೆ ನೋಡುತ್ತಿದ್ದೇವೆ. ಇಷ್ಟು ದಿನ ನೋವು ತಿನ್ನುತ್ತಿದ್ದೆವು, ಇವತ್ತು ಸಂತೋಶವಾಗಿದೆ. ಚಿರು ಹುಟ್ಟಿದ್ದು ಸಹ ಇದೇ ತಿಂಗಳು, ಅವರ ನಿಶ್ಚಿತಾರ್ಥದ ದಿನವೇ ಮಗು ಹುಟ್ಟಿದೆ' ಎಂದಿದ್ದಾರೆ.
ಗಂಡು ಮಗುವಿಗೆ ಜನ್ಮ ನೀಡಿದ ನಟಿ ಮೇಘನಾ ರಾಜ್
ನನ್ನ ಮಗನನ್ನು ಸಾಕು ಎಂದು ಕಳಿಸಿದ್ದಾನೆ: ಅಜ್ಜಿ ಲಕ್ಷ್ಮಿ
ಇನ್ನು ಚಿರು ಪ್ರೀತಿಯ ಅಜ್ಜಿ ಲಕ್ಷ್ಮಿ ಮಾತನಾಡಿ, 'ನಾನು ಹೋಗ್ತೀನಿ ನನ್ನ ಮಗನನ್ನು ಸಾಕು ಎಂದು ಚಿರು ಹೋಗಿದ್ದಾನೆ' ಎಂದು ಕಣ್ಣೀರು ಹಾಕಿದ್ದಾರೆ. ಮಗುವನ್ನು ಕೈಗೆ ಎತ್ತಿಕೊಂಡಾಗ ಕಣ್ಣೀರು ಬಂದು ಬಿಡ್ತು, ಚಿರು ಈಗ ಇದ್ದಿದ್ದರೆ ಆ ಸಂಭ್ರಮವೇ ಬೇರೆ ಇರುತ್ತಿತ್ತು, ಅವನ ಆಸೆಯಂತೆ ನಾವು ಅವನ ಮಗನನ್ನು ಬೆಳೆಸುತ್ತೇವೆ' ಎಂದಿದ್ದಾರೆ ಲಕ್ಷ್ಮಿ.
ಭಾವುಕರಾದ ಧೃವ ಸರ್ಜಾ
ಚಿರಂಜೀವಿ ಸರ್ಜಾ ಪುತ್ರನನ್ನು ಮೊದಲಿಗೆ ಎತ್ತಿಕೊಂಡ ಧೃವ ಸರ್ಜಾ ಅಂತೂ ತೀರಾ ಭಾವುಕಾದರಂತೆ. ಮಗುವನ್ನು ಎತ್ತಿಕೊಂಡಾಗ ಅಣ್ಣನೊಂದಿಗೆ ಇದ್ದ ಅನುಭವ ಆಯಿತು ಎಂದಿದ್ದಾರೆ ಧೃವ ಸರ್ಜಾ. ಪನ್ನಗಾಭರಣ ಸೇರಿದಂತೆ ಚಿರು-ಮೇಘನಾ ಗೆಳೆಯರು ಮಗುವನ್ನು ನೋಡಲು ಆಸ್ಪತ್ರೆಗೆ ಧಾವಿಸಿ ಬಂದಿದ್ದಾರೆ.