Don't Miss!
- News ಬಿಎಂಟಿಸಿ & ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳಕ್ಕೆ ಕಾರಣ ಏನು?-ಇಲ್ಲಿದೆ ಮಾಹಿತಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಪ್ಪು ನೀನು ಓದಿಲ್ಲ ಆದರೂ ಐಕಾನ್: ಸಿಎಂ ಬಸವರಾಜ್ ಬೊಮ್ಮಾಯಿ
ಗುಣಮಟ್ಟದ ಶಿಕ್ಷಣಕ್ಕೆ ಡಾ.ರಾಜ್ ಕುಮಾರ್ ಅಕಾಡೆಮಿ ಮತ್ತೊಂದು ಹೆಜ್ಜೆ ಇಟ್ಟಿದೆ. ಕೊರೊನಾ ಸಂಕಷ್ಟ ಕಾಲದಲ್ಲಿ ಮಕ್ಕಳ ಶಿಕ್ಷಣ ದೊಡ್ಡ ಸಮಸ್ಯೆಯಾಗಿದೆ. ಸರಿಯಾದ ಶಿಕ್ಷಣ ಸಿಗದೆ ಮಕ್ಕಳು ಪರದಾಡುವಂತಾಗಿದೆ. ಇಂಥ ಕಷ್ಟದ ಸಮಯದಲ್ಲಿ ವಿದ್ಯಾರ್ಥಿಗಳ ನೆರವಿಗೆ ನಿಂತಿದೆ ಡಾ.ರಾಜ್ ಕುಮಾರ್ ಅಕಾಡೆಮಿ. ಶಿಕ್ಷಣ ಕ್ರಾಂತಿಗೆ ಮುಂದಾಗಿರುವ ಡಾ.ರಾಜ್ ಕುಮಾರ್ ಅಕಾಡೆಮಿ ಹೊಸ ಆಪ್ ಅನ್ನು ಬಿಡುಗಡೆ ಮಾಡಿದೆ. ಹೊಸ ಆಪ್ ಅನ್ನು ಸಿಎಂ ಬಸವರಾಜ್ ಬೊಮ್ಮಾಯಿ ಇತ್ತೀಚಿಗಷ್ಟೆ ಲೋಕಾರ್ಪಣೆ ಮಾಡಿದ್ದಾರೆ.
Recommended Video
ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಡಾ.ರಾಜ್ ಕುಮಾರ್ ಕುಟುಂಬದ ಹಾಜರಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ದಂಪತಿ, ಯುವ ರಾಜ್ ಕುಮಾರ್ ಸೇರಿದ್ದಂತೆ ಅನೇಕರು ಹಾಜರಿದ್ದರು. ಆಪ್ ಬಿಡುಗಡೆ ಮಾಡಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಪವರ್ ಸ್ಟಾರ್ ಪುನೀತ್ ರಾಜ ಕುಮಾರ್ ಅವರನ್ನು ಹಾಡಿಹೊಗಳಿದ್ದಾರೆ.
"ಪುನೀತ್ ರಾಜ್ ಕುಮಾರ್ ಓದಿಲ್ಲ ಎಂದರೂ ಜ್ಞಾನ ಇದೆ. ಫಾರ್ಮಲ್ ಶಿಕ್ಷಣ ಮುಖ್ಯವಲ್ಲ, ಜ್ಞಾನ ತುಂಬಾ ಮುಖ್ಯ. ಶಿಕ್ಷಣಕ್ಕಿಂತ ಜ್ಞಾನ ಮುಖ್ಯ. ನೀನು ಐಕಾನ್" ಎಂದು ಹೇಳಿದ್ದಾರೆ. ಇದೇ ವೇಳೆ ಪರಮಹಂಸ ಕಥೆಯನ್ನು ಹೇಳಿ ಆಪ್ ಮಹತ್ವ ಏನು ಎನ್ನುವುದನ್ನು ಸಿಎಂ ಬೊಮ್ಮಾಯಿ ವಿವರಿಸಿದರು. ಮುಂದೆ ಓದಿ..
ಪರಮಹಂಸ ಕಥೆ ಹೇಳಿದ ಬೊಮ್ಮಾಯಿ
"ನೀನು ಏನು ಮಾಡುತ್ತಿದ್ದಿಯ ಅಂತ ನಿನಗೆ ಗೊತ್ತಿಲ್ಲ. ನೀನು ಕೂಡ ತಾತನ ಹಾಗೆ ಮುದ್ಧ ಇದಿಯ. ನೀನು ಏನು ಮಾಡಿಯ ಎಂದರೆ, ಆಪ್ ಅಂದರೆ ವಾಹನ, ಇದು ಎಲ್ ಬೇಕಾದರೂ ಹೋಗುತ್ತೆ, ರೀಚ್ ಆಗುತ್ತೆ. ಪರಮಹಂಸ ಅಂದರೆ ಸರಸ್ವತಿಯ ವಾಹನ. ನೀನು ಪರಮಹಂಸವನ್ನು ಕ್ರಿಯೆಟ್ ಮಾಡಿದ್ದೀಯಾ. ಪರಮಹಂಸದ ಬ್ಯೂಟಿ ಎಂದರೆ, ಎಲ್ಲಾ ಹಕ್ಕಿಗಳು ಹಾರುತ್ತವೆ. ಆದರೆ ಪರಮಂಹಸ ಅದರ ನೂರು ಪಟ್ಟು ಎತ್ತರ ಹಾರುತ್ತೆ. ಪರಮಹಂಸ ಅತೀ ಹೆಚ್ಚು ಭಾರ ಇರುವ ಹಕ್ಕಿ. ಅದರೂ ಅತೀ ಹೆಚ್ಚು ಹಾರುತ್ತದೆ. ಮತ್ತು ಅದು ಶ್ವೇತ ಬಣ್ಣದಲ್ಲಿ ಇರುತ್ತದೆ. ಇಂದು ನೀನು ಸರಸ್ವತಿ ವಾಹನ ಸೃಷ್ಟಿ ಮಾಡಿದ್ದೀಯ" ಎಂದಿದ್ದಾರೆ.
ಅಪ್ಪು ಡೋಂಟ್ ವರಿ, ನೀನು ಐಕಾನ್
"ಅದು ಮಾನಸಸರೋವರದ ಎತ್ತರಕ್ಕೆ ಹೋಗಲಿ ಎಂದು ಕೇಳಿಕೊಳ್ಳುತ್ತೇನೆ. ಅಪ್ಪು ನೀನು ಇದಕ್ಕೆ ಬ್ರಾಂಡ್ ಅಂಬಾಸಿಡರ್. ಅಪ್ಪು ಡೋಂಟ್ ವರಿ, ನೀನು ಕಲಿಯದಿದ್ದರೂ, ಫಾರ್ಮಲ್ ಶಿಕ್ಷಣ ಮುಖ್ಯವಲ್ಲ. ಜ್ಞಾನ ತುಂಬಾ ಮುಖ್ಯ. ಶಿಕ್ಷಣಕ್ಕಿಂತ ಜ್ಞಾನ ಮುಖ್ಯ. ನೀನು ಐಕಾನ್. ಈಗ ಓದು ಎಂದರೆ ಸಾಕು" ಎಂದು ಹೇಳಿದ್ದಾರೆ.
ಡಾ.ರಾಜ್ ಕುಮಾರ್ ಸಾಧನೆ ಬಗ್ಗೆ ಬೊಮ್ಮಾಯಿ ಮಾತು
"ಇದೇ ಸಮಯದಲ್ಲಿ ಡಾ.ರಾಜ್ ಕುಮಾರ್ ಬಗ್ಗೆಯೂ ಮಾತನಾಡಿದ್ದಾರೆ. ಡಾ.ರಾಜ್ ಎಂದರೆ ಸಾಧಕ. ಸ್ವಾಮಿ ವಿವೇಕಾನಂದ ಹೇಳಿದ್ದಾರೆ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾಧಕ ಸಾವಿನ ನಂತರವೂ ಬದುಕುತ್ತಾನೆ. ಶ್ರೀಮಂತ ಬದುಕನ್ನು ಬದುಕಬೇಕು ಎಂದರೇ ಸಾವಿನ ಬಳಿಕವೂ ಬದಕಬೇಕು ಹಾಗೆ ಬದುಕಬೇಕು. ಅಂತ ಸಾಧನೆ ಮಾಡಿದ ಕರ್ನಾಟಕದ ಏಕಮಯ ಸ್ಟಾರ್, ಸ್ಟಾರ್ ಎಂದರೆ ಸಿನಿಮಾ ಸ್ಟಾರ್ ಅಲ್ಲ, ಆಕಾಶದಲ್ಲಿ ಇರುವ ನಕ್ಷತ್ರ ರಾಜ್" ಎಂದು ಹೇಳಿದ್ದಾರೆ.
ಡಾ.ರಾಜ್ ಕುಮಾರ್ ಗುಣವನ್ನು ನಾವು ಕಲಿಯಬೇಕು
"ಅದರಲ್ಲೂ ನಾವು ಅಧಿಕಾರದಲ್ಲಿದ್ದವರು ರಾಜ್ ಕುಮಾರ್ ಗುಣಗಳನ್ನು ಕಲಿಯಬೇಕು. ರಾಜ್ ಕುಮಾರ್ ಅಷ್ಟು ಹಂಬಲ್ ಆಗಿರೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ರಾಜ್ ಕುಮಾರ್ ಒಬ್ಬ ವಿದ್ಯಾರ್ಥಿ. ಪ್ರತಿ ಕ್ಷಣದಲ್ಲೂ ಕಲಿಯುವ ಹಂಬಲ ಇತ್ತು. ಅವರಲ್ಲಿ ಮುಗ್ಧತೆ ಎಂದೂ ಕಡಿಮೆ ಆಗಿರಲಿಲ್ಲ" ಎಂದು ಹೇಳಿದರು.
ಜ್ಞಾನದ ಕ್ಷೇತ್ರಕ್ಕೆ ಡಾ.ರಾಜ್ ಕುಮಾರ್ ಲರ್ನಿಂಗ್ ಆಪ್ ಸೇರ್ಪಡೆ
"ಅವರ ರಿಯಲ್ ಕ್ಯಾರೆಕ್ಟರ್ ಬಹಳ ದೊಡ್ಡದು. ಅದನ್ನ ಅರ್ಥ ಮಾಡಿಕೊಳ್ಳೊದು ಕಷ್ಟ. ನೀವು ಮಕ್ಕಳಿಗೆ ಜ್ಞಾನ. ಈಗಿನ ಪ್ರಪಂಚದಲ್ಲಿ ಜ್ಞಾನ ಇದ್ದೋರಿಗೆ ಮಾತ್ರ ಎಲ್ಲವೂ ಸಿಗುತ್ತೆ. ಜ್ಞಾನಕ್ಕೆ ದೊಡ್ಡ ಬೆಲೆ ಇದೆ. ಜ್ಞಾನದ ಕ್ಷೇತ್ರಕ್ಕೆ ಡಾ.ರಾಜ್ ಕುಮಾರ್ ಲರ್ನಿಂಗ್ ಆಪ್ ಸೇರಿದೆ. ಇದು ದೊಡ್ಡ ಸಾಧನೆ" ಎಂದರು.