Don't Miss!
- News Mandya: ಏಪ್ರಿಲ್ 24 ರಿಂದ 26ರ ವರೆಗೆ ಮಂಡ್ಯದಲ್ಲಿ ಪ್ರತಿಬಂಧಕಾಜ್ಞೆ ಜಾರಿ
- Automobiles ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡದ ಈ ಸಿನಿಮಾ ನೋಡಲು ಕಾಯುತ್ತಿದ್ದಾರೆ ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ ಅವರು ಗಂಭೀರ ವ್ಯಕ್ತಿತ್ವದವರು. ಅವರು ನಗುವುದು ಸಹ ಕಡಿಮೆಯೇ. ಸಿನಿಮಾಕ್ಕೂ ಯಡಿಯೂರಪ್ಪ ಅವರಿಗೂ ತುಸು ದೂರವೇ. ಆದರೆ ಕೆಲವು ಧಾರಾವಾಹಿಗಳನ್ನು ಅವರು ನೋಡುತ್ತಾರಂತೆ.
Recommended Video
ಆದರೆ ಇಂದು ಯಡಿಯೂರಪ್ಪ ಅವರೇ ನಾನು ಕನ್ನಡದ ಈ ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದು, ಖಂಡಿತ ಸಿನಿಮಾ ನೋಡುತ್ತೇನೆ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ. ಆ ಸಿನಿಮಾ ಮತ್ಯಾವುದು ಅಲ್ಲ ದರ್ಶನ್ ಅಭಿನಯದ 'ರಾಬರ್ಟ್'.
ದರ್ಶನ್ ಶ್ರಮವನ್ನು ಕೊಂಡಾಡಿದ ಸಿಎಂ ಯಡಿಯೂರಪ್ಪ
ಹೌದು, ಯಡಿಯೂರಪ್ಪ ಅವರು ರಾಬರ್ಟ್ ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ. ಇಂದು ವಿಕಾಸಸೌಧದಲ್ಲಿ ನಡೆದ, ಕೃಷಿ ಇಲಾಖೆ ರಾಯಭಾರಿಯಾಗಿ ನಟ ದರ್ಶನ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿಮಾತನಾಡಿದ ಸಿಎಂ ಯಡಿಯೂರಪ್ಪ, 'ಮಾರ್ಚ್ 11 ರಂದು ರಾಬರ್ಟ್ ಸಿನಿಮಾ ಬಿಡುಗಡೆ ಆಗಲಿದೆ. ನೀವುಗಳು ಆ ಸಿನಿಮಾಕ್ಕಾಗಿ ಕಾಯುತ್ತಿದ್ದೀರಿ. ನಾನೂ ಸಹ ಆ ಸಿನಿಮಾ ನೋಡಿ ಸಂತೋಶ ಪಡುತ್ತೇನೆ' ಎಂದಿದ್ದಾರೆ ಯಡಿಯೂರಪ್ಪ.
ಯಡಿಯೂರಪ್ಪ ಅವರು ಸಿನಿಮಾ ನೋಡುವುದು ಅಪರೂಪ
ಯಡಿಯೂರಪ್ಪ ಅವರು ಸಿನಿಮಾಗಳನ್ನು ನೋಡುವುದು ಬಹಳ ಅಪರೂಪ. ನಿಖಿಲ್ ಕುಮಾರಸ್ವಾಮಿ ನಟನೆಯ 'ಸೀತಾರಾಮ ಕಲ್ಯಾಣ' ಸಿನಿಮಾದ ಪ್ರೀಮಿಯರ್ ಶೋ ಗೆ ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಲಾಗಿತ್ತು. ಬಿಜೆಪಿ-ಕಾಂಗ್ರೆಸ್ನ ಹಲವು ನಾಯಕರು ಪ್ರೀಮಿಯರ್ ಶೋ ಗೆ ಹೋದರು ಆದರೆ ಯಡಿಯೂರಪ್ಪ ಹೋಗಿರಲಿಲ್ಲ.
ಮಹಾಭಾರತ ಧಾರಾವಾಹಿ ನೋಡುವಂತೆ ಹೇಳಿದ್ದ ಯಡಿಯೂರಪ್ಪ
ಇನ್ನು ಲಾಕ್ಡೌನ್ ಸಮಯದಲ್ಲಿ ಯಡಿಯೂರಪ್ಪ ಅವರು ಮನೆಯಲ್ಲಿ ಕೂತು ಮಹಾಭಾರತ ಧಾರಾವಾಹಿಯನ್ನು ಸಮಯ ಸಿಕ್ಕಾಗ ವೀಕ್ಷಣೆ ಮಾಡುತ್ತಿದ್ದರು. ಮಹಾಭಾರತ ಧಾರಾವಾಹಿ ನೋಡಿ ಮಕ್ಕಳಿಗೂ ತೋರಿಸಿ ಎಂದು ವಿಡಿಯೋ ಸಂದೇಶವನ್ನು ಸಹ ಯಡಿಯೂರಪ್ಪ ಆಗ ನೀಡಿದ್ದರು.
ಸಂಪುಟ ಸಹೋದ್ಯೋಗಿಯೊಂದಿಗೆ ಧಾರಾವಾಹಿ ನೋಡಿದ ಸಿಎಂ ಯಡಿಯೂರಪ್ಪ
ದರ್ಶನ್ ಅನ್ನು ಹೊಗಳಿದ ಯಡಿಯೂರಪ್ಪ
ಇಂದು ಕಾರ್ಯಕ್ರಮದಲ್ಲಿ ದರ್ಶನ್ ಬಗ್ಗೆಯೂ ಹೊಗಳಿಕೆಯ ಮಾತನ್ನಾಡಿದ ಸಿಎಂ ಯಡಿಯೂರಪ್ಪ, 'ದರ್ಶನ್ ಅವರು ಸಿನಿಮಾ ರಂಗದಲ್ಲಿ ಎತ್ತರಕ್ಕೆ ಏರಿದ್ದರೂ ಸಹ ಕೃಷಿಯಲ್ಲಿ ತೊಡಗಿಕೊಂಡಿರುವುದು ಹೆಮ್ಮೆಯ ವಿಚಾರ. ದರ್ಶನ್ ಅವರು ಸಂಭಾವನೆ ಪಡೆಯದೇ ಕೃಷಿ ಇಲಾಖೆ ರಾಯಭಾರಿ ಆಗಿರುವುದಕ್ಕೆ ಅಭಿನಂದನೆ' ಎಂದರು ಯಡಿಯೂರಪ್ಪ.
ರಾಬರ್ಟ್ ಬಿಡುಗಡೆ ಯಾವಾಗ?
'ರಾಬರ್ಟ್' ಸಿನಿಮಾವು ಮಾರ್ಚ್ 11 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ದರ್ಶನ್ ಜೊತೆಗೆ ಆಶಾ ಭಟ್, ವಿನೋದ್ ಪ್ರಭಾಕರ್, ಜಗಪತಿ ಬಾಬು, ಚಿಕ್ಕಣ್ಣ, ಧರ್ಮಣ್ಣ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಸಿದ್ದು, ಉಮಾಪತಿ ಶ್ರೀನಿವಾಸ್ ನಿರ್ಮಾಣ ಮಾಡಿದ್ದಾರೆ.