Don't Miss!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿಗೆ ಬಿಜೆಪಿಯ ಹೊಸ ಸಂಗಾತಿಯನ್ನ ಕೇಳಿ ಎಂದು ಟಾಂಗ್ ಕೊಟ್ಟ ಸಿದ್ದರಾಮಯ್ಯ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಲೋಕಸಭಾ ಚುನಾವಣೆ 2024: ಟಾಪ್ 10 ಶ್ರೀಮಂತ ಅಭ್ಯರ್ಥಿಗಳು ಇವರು
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಓಂ ಪ್ರಕಾಶ್ ರಾವ್ ಮತ್ತು ಧನಂಜಯ್ ಮಧ್ಯೆ ಶೀತಲ ಸಮರ.!
ಕನ್ನಡದ ಸ್ಟಾರ್ ನಿರ್ದೇಶಕ ಮತ್ತು ಸ್ಪೆಷಲ್ ಸ್ಟಾರ್ ಧನಂಜಯ್ ಅವರ ಮಧ್ಯೆ ಶೀತಲ ಸಮರ ನಡೆಯುತ್ತಿದೆ. ಒಬ್ಬರಿಗೊಬ್ಬರು ಆರೋಪ-ಪ್ರತ್ಯಾರೋಪ ಮಾಡುತ್ತಾ ವಿವಾದಕ್ಕೆ ನಾಂದಿ ಹಾಡುತ್ತಿದ್ದಾರೆ.
ಇವರಿಬ್ಬರ ನಡುವಿನ ಈ ಕೋಲ್ಡ್ ವಾರ್ ಗೆ ಕಾರಣ 'ಹೀರೋ'. ಇದು ಇವರಿಬ್ಬರ ಜೋಡಿಯಲ್ಲಿ ಮೂಡಿ ಬರಬೇಕಿದ್ದ ಚಿತ್ರದ ಹೆಸರು. ಈ ಚಿತ್ರದ ಫೋಟೋಶೂಟ್ ಕೂಡ ಆಗಿತ್ತು. ಆದ್ರೆ, ಈ ಸಿನಿಮಾಗೆ ಈಗ ನಾಯಕ ಬದಲಾಗಿದ್ದಾರೆ.
ಅಷ್ಟಕ್ಕೂ, 'ಹೀರೋ' ಚಿತ್ರದಿಂದ ನಾಯಕನ ಬದಲಾವಣೆ ಮಾಡಿದ್ದು ಯಾಕೆ?ಎಂಬುದನ್ನ ತಿಳಿದುಕೊಳ್ಳಲು ಮುಂದೆ ಓದಿ....
ಶೀತಲ ಸಮರಕ್ಕೆ ಕಾರಣ 'ಹೀರೋ'
ಧನಂಜಯ್ ಮತ್ತು ಓ ಪ್ರಕಾಶ್ ರಾವ್ ಅವರ ಕಾಂಬಿನೇಷನ್ ಚಿತ್ರಕ್ಕೆ ನಾಯಕ ಬದಲಾಗಲು ಕಾರಣ 'ಹೀರೋ' ಬಿಝಿ ಅಂತೆ. ಹೀಗಂತಾ ಓಂ ಪ್ರಕಾಶ್ ಆರೋಪ ಮಾಡಿದ್ದಾರೆ.
ಧನಂಜಯ್ ಮೇಲೆ ಯಾಕೆ ಈ ಮುನಿಸು?
"ಧನಂಜಯ್ ಅವರು ಒಂದೇ ಒಂದು ದೃಶ್ಯ ನೋಡಿ ಮೊಟ್ಟ ಮೊದಲ ಬಾರಿಗೆ ಅಡ್ವಾನ್ಸ್ ಮಾಡಿದವ ನಾನು. ಫೋಟೋಶೂಟ್ ಕೂಡಾ ಮಾಡಿಸಿದೆ. ಸುಮಾರು 5 ಲಕ್ಷ ರೂಪಾಯಿ ಖರ್ಚು ಮಾಡಿ, ಫೋಟೋಶೂಟ್, ಫೋಸ್ಟರ್ ಮಾಡಿಸಿದೆ. ಇವತ್ತು ಅವೆಲ್ಲವೂ ಗೋದಾಮಿನಲ್ಲಿದೆ. ಕಾರಣ 'ಹೀರೋ' ಬದಲಾಗಿದ್ದಾರೆ. ಅವರ ಆಟಿಟ್ಯೂಡ್ ತುಂಬಾ ಬಿಝೀ ತರ ಇದೆ'' ಎಂದಿದ್ದರು.
ಬೇಸರ ವ್ಯಕ್ತಪಡಿಸಿದ ಓಂ ಪ್ರಕಾಶ್
"ಮುಂದೆ ಗಾಂಧಿನಗರದ ಇಡ್ಲಿ ವಡೆ ನಿಮ್ಮನ್ನು ಬದಲಿಸಬಹುದು' ಎಂದು ಅವತ್ತೇ ಹೇಳಿದ್ದೆ. ಈಗ ಅದರಂತೆ ಆಗಿದೆ' ಎಂದು ಧನಂಜಯ್ ವಿರುದ್ಧ ನಿರ್ದೇಶಕ ಓಂ ಪ್ರಕಾಶ್ ರಾವ್ ಬೇಸರ ತೋಡಿಕೊಂಡಿದ್ದರು.
ಧನಂಜಯ್ ಪ್ರತಿಕ್ರಿಯೆ
''ಓಂ ಪ್ರಕಾಶ್ ರಾವ್ ನನಗೆ ಅಡ್ವಾನ್ಸ್ ಕೊಟ್ಟ ಮೊದಲ ನಿರ್ದೇಶಕ. ಅದರಲ್ಲಿ ತಪ್ಪೇನಿಲ್ಲ. ಆದರೆ, ಅವರು ಸಿನಿಮಾ ಶುರು ಮಾಡಲೇ ಇಲ್ಲ. ನಾನು ಹಲವು ಬಾರಿ ಅವರ ಮನೆಗೆ ಹೋಗಿ ಕೇಳಿದಾಗಲೂ, ಮಾಡೋಣ ಮಾಡೋಣ ಎಂದು ಮುಂದೆ ಹಾಕುತ್ತಲೇ ಬಂದರು''
ಅಡ್ವಾನ್ಸ್ ವಾಪಸ್ ಕೇಳಿದರು
''ಈ ಮಧ್ಯೆ 'ರಾಟೆ' ಚಿತ್ರದಲ್ಲಿ ಅವಕಾಶ ಸಿಕ್ಕಿತು. ಚಿತ್ರದ ಶೂಟಿಂಗ್ ನಲ್ಲಿದ್ದಾಗಲೇ ಸೆಟ್ ಗೆ ಬಂದ ಓಂಪ್ರಕಾಶ್ ರಾವ್, ಅಡ್ವಾನ್ಸ್ ಹಣವನ್ನು ವಾಪಸ್ ಕೇಳಿದರು. ತೊಂದರೆಯಲ್ಲಿದ್ದೇನೆ ಎಂದರು. ಅದಾದ ನಂತರ ಅವರ ಮನೆಗೇ ಹೋಗಿ ಅಡ್ವಾನ್ಸ್ ಹಣವನ್ನು ವಾಪಸ್ ಕೊಟ್ಟು ಬಂದಿದ್ದೇನೆ''
'ಹುಚ್ಚ-2' ಚಿತ್ರಕ್ಕೆ ಫೋಟೋಶೂಟ್ ಆಗಿತ್ತು
''ಓಂ ಪ್ರಕಾಶ್ ಹೇಳಿದಂತೆ ಫೋಟೋ ಶೂಟ್ ಆಗಿದ್ದು, ಹೀರೋ ಚಿತ್ರಕ್ಕಲ್ಲ. 'ಹುಚ್ಚ-2' ಚಿತ್ರಕ್ಕೆ. 'ಹೀರೋ' ಚಿತ್ರಕ್ಕೆ ನಾನು ನನ್ನ ಬಳಿಯಿದ್ದ ಕೆಲವು ಫೋಟೋಗಳನ್ನೇ ಕಳಿಸಿಕೊಟ್ಟಿದ್ದೆ. ಅದರಲ್ಲೇ ಪೋಸ್ಟರ್ ಡಿಸೈನ್ ಮಾಡಿದರು. ನಿರ್ದೇಶಕ ಓಂಪ್ರಕಾಶ್ ರಾವ್ ಅವರ ಬಗ್ಗೆ ನನಗೆ ಗೌರವವಿದೆ. ಅವರೂ ಅಷ್ಟೆ, ಒಬ್ಬ ನಟನನ್ನು ಪ್ರಾಮಾಣಿಕತೆಯನ್ನು ಗೌರವಿಸಬೇಕು'' ಎಂದು ಸಮರ್ಥಿಸಿಕೊಂಡಿದ್ದಾರೆ.