Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿ 'ನಯನಾ'
Recommended Video
ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕವೇ ಮನೆ ಮಾತಾಗಿದ್ದ ಕಲಾವಿದ ನಯನಾ. ತಂದೆಯ ವಿರೋಧದ ನಡುವೆಯೂ ಅಭಿನಯ ಮಾಡಲೇಬೇಕೆಂದು ಕಾಮಿಡಿ ಕಿಲಾಡಿಗಳು ತಂಡ ಸೇರಿಕೊಂಡು ಯಾವುದೇ ಪಾತ್ರಕ್ಕೂ ನ್ಯಾಯ ದೊರಕಿಸಿ ಕೊಡುವಂತ ಶಕ್ತಿ ಹೊಂದಿದ್ದ ನಟಿ ನಯನಾ.
53ನೇ ವಯಸ್ಸಿನಲ್ಲಿ ಸೂಪರ್ ಮಾಡೆಲ್ ಮಿಲಿಂದ್ ಸೋಮನ್ ಮತ್ತೊಂದು ಮದುವೆ!
ಕಿರುತೆರೆಯ ಅಭಿನಯದ ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಪಡೆದುಕೊಂಡ ನಯನಾ ಹಸೆಮಣೆ ಏರಿದ್ದಾರೆ . ಕಿರುತೆರೆಯಿಂದ ಈಗಷ್ಟೇ ಬೆಳ್ಳಿತೆರೆ ಕಡೆಗೆ ಮುಖ ಮಾಡಿದ್ದ ನಯನಾ ಮದುವೆ ಸಮಾರಂಭ ಇತ್ತೀಚಿಗಷ್ಟೆ ನಡೆದಿದೆ. ಈ ವಿಚಾರ ಕೇಳಿದ ತಕ್ಷಣ ಎಲ್ಲರಿಗೂ ಎನ್ನಿಸುವುದು ಅರೆ ನಯನಾ ಮದುವೆ ಆಗೋಯ್ತಾ ಅಂತ. ಹೌದು ನಯನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹಾಗಾದರೆ ನಯನಾ ಮದುವೆ ಆದ ಹುಡುಗ ಯಾರು? ಮದುವೆ ಎಲ್ಲಿ ನಡೆಯಿತು? ಯಾರೆಲ್ಲಾ ಮದುವೆ ಸಮಾರಂಭದಲ್ಲಿ ಬಾಗಿ ಆಗಿದ್ದರು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ
ಕಾಮಿಡಿ ಕಿಲಾಡಿ ನಯನಾ ಮದುವೆ
ಕಾಮಿಡಿ ಕಿಲಾಡಿ ಕಾರ್ಯಕ್ರಮದ ಮೂಲಕ ರಾಜ್ಯದ ಜನರಿಗೆ ಪರಿಚಿತರಾದ ನಯನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶರತ್ ಎಂಬುವವರ ಜೊತೆ ನಯನಾ ಸಪ್ತಪದಿ ತುಳಿದಿದ್ದಾರೆ.
ಶರತ್ ವೆಡ್ಸ್ ನಯನಾ
ನಯನಾ ಇತ್ತೀಚಿಗಷ್ಟೆ ಶರತ್ ಅವರ ಜೊತೆಯಲ್ಲಿ ಸಪ್ತಪದಿ ತುಳಿದಿದ್ದು ಶರತ್ ಬೆಂಗಳೂರಿನಲ್ಲಿ ಉದ್ಯಮಿ ಆಗಿದ್ದಾರೆ. ಧರ್ಮಸ್ಥಳದಲ್ಲಿ ಮದುವೆ ಮಾಡಿಕೊಂಡ ಜೋಡಿ ಬೆಂಗಳೂರಿನ ಗೆಳೆಯರಿಗಾಗಿ ಆರತಕ್ಷತೆ ಮಾಡಿಕೊಂಡಿದೆ.
ಅರೆಂಜ್ ಮ್ಯಾರೆಜ್
ಶರತ್ ನಟಿ ನಯನಾ ಅವರ ಸಂಬಂಧಿಕರೇ ಆಗಬೇಕಂತೆ. ಇಬ್ಬರು ಮನೆಯಲ್ಲಿ ಮಾತನಾಡಿ ಇಬ್ಬರಿಗೂ ಮದುವೆ ಮಾಡುವುದಾಗಿ ತಿಳಿಸಿದ್ದಾರೆ. ಗುರು ಹಿರಿಯರ ಮಾತಿನಂತೆ ನಯನಾ ಕೂಡ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ನಯನಾ ಮದುವೆಯಲ್ಲಿ ಶಿವರಾಜ್ ಕೆ ಆರ್ ಪೇಟೆ
ನಟಿ ನಯನಾ ಮದುವೆ ಸಮಾರಂಭದಲ್ಲಿ ನಟ ಶಿವರಾಜ್ ಕೆ ಆರ್ ಪೇಟೆ ಭಾಗಿ ಆಗಿದ್ದಾರೆ. "ಜೋರು ಮಾತುಗಳಿಂದಲೇ ಕನ್ನಡಿಗರ ಮನಗೆದ್ದ ನನ್ನ ಮುದ್ದು ತಂಗಿ ಇಂದು ಹಸೆಮಣೆ ಏರಿದ್ದಾಳೆ. ಅವಳ ವೈವಾಹಿಕ ಬದುಕು ಸುಂದರವಾಗಿರದಲಿ, ಇನ್ನು ಬೆಟ್ಟದಷ್ಟು ಅವಕಾಶಗಳು ಬಂದು ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸುವಂತಾಗಲಿ ಅಂತ ಹಾರೈಸುತ್ತೇನೆ. ಹ್ಯಾಪಿ ಮ್ಯಾರಿಡ್ ಲೈಫ್ ನಯನ ಶರತ್" ಎಂದು ಶುಭ ಕೋರಿದ್ದಾರೆ.