Don't Miss!
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- News Kotak Mahindra Bank: ಕೋಟಕ್ ಮಹಿಂದ್ರಾ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ: ಗ್ರಾಹಕರ ಮೇಲೆ ಪರಿಣಾಮಗಳೇನು?
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಡಲ್ ಚಿತ್ರ ತೋಪು; ಮಣಿರತ್ನಂ ವಿರುದ್ಧ ಕಂಪ್ಲೇಂಟ್
ಕಡಲ್ ಚಿತ್ರದ ವಿತರಕರು ಮಣಿರತ್ನಂ ವಿರುದ್ಧ ಸಿಡಿದೆದ್ದಿದ್ದರು. ಈ ಚಿತ್ರದಿಂದ ತಮಗೆ ಭಾರಿ ನಷ್ಟವಾಗಿದೆ ಎಂದು ಆಗ್ರಹಿಸಿ ಅವರ ನಿವಾಸದ ಮುಂದೆ ಧರಣಿ ಮಾಡಿದ್ದರು. ಈಗ ಮನ್ನನ್ ಎಂಬ ವಿತರಕ ಚೆನ್ನೈ ಪೊಲೀಸ್ ಕಮೀಷನರ್ ಅವರಿಗೆ ದೂರು ನೀಡಿದ್ದಾರೆ.
ಕಡಲ್ ಚಿತ್ರದ ವಿತರಣೆ ಹಕ್ಕುಗಳನ್ನು ರು.16 ಕೋಟಿ ಕೊಟ್ಟು ಖರೀದಿಸಿದ್ದೆವು. ಆದರೆ ಕಡೆಗೆ ತಮ್ಮ ಕೈಗೆ ಬಂದದ್ದು ಕೇವಲ ರು.3.2 ಕೋಟಿ. ಚಿತ್ರದ ಬಿಡುಗಡೆಗೂ ಮುನ್ನ ತಮಗೆ ಪ್ರದರ್ಶನ ಏರ್ಪಡಿಸುವಂತೆ ಕೋರಿದ್ದೆವು. ತಾಂತ್ರಿಕ ಕಾರಣಗಳಿಂದ ಚಿತ್ರ ಪ್ರದರ್ಶನ ಸಾಧ್ಯವಿಲ್ಲ ಎಂದು ಮಣಿರತ್ನಂ ಮ್ಯಾನೇಜರ್ ಸಬೂಬು ನೀಡಿದ್ದರು.
ಆದರೆ ಮಣಿರತ್ನಂ ಅವರ ನಿರ್ದೇಶನದ ಮೇಲಿನ ನಂಬಿಕೆ ಮೇಲೆ ಚಿತ್ರದ ವಿತರಣೆ ಹಕ್ಕುಗಳನ್ನು ಕೊಂಡೆವು. ಆದರೆ ಭರಿಸಲಾರದ ನಷ್ಟ ಉಂಟಾಯಿತು. ಈ ಬಗ್ಗೆ ಚರ್ಚಿಸಬೇಕು ಎಂದು ಹಲವು ಭಾರಿ ಪ್ರಯತ್ನಿಸಿದೆ. ಮಣಿರತ್ನಂ ಭೇಟಿ ಸಾಧ್ಯವಾಗಲಿಲ್ಲ.
ತಮಗಾಗಿರುವ ನಷ್ಟವನ್ನು ಕೊಡಿಸುವಂತೆ ದೂರಿನಲ್ಲಿ ಅವರು ತಿಳಿಸಿದ್ದಾರೆ. ಏತನ್ಮಧ್ಯೆ ಮಣಿರತ್ನಂ ಅವರ ಮನೆಗೆ ಪೊಲೀಸ್ ಭದ್ರತೆಯನ್ನೂ ಕಲ್ಪಿಸಲಾಗಿದೆ. ತಮಗೆ ವಿತರಕರಿಂದ ಜೀವ ಬೆದರಿಕೆ ಇದೆ. ಆದ ಕಾರಣ ಪೊಲೀಸ ಭದ್ರತೆ ನೀಡಬೇಕು ಎಂದು ಮದ್ರಾಸ್ ಹೈಕೋರ್ಟನ್ನು ಮಣಿರತ್ನಂ ಕೋರಿದ್ದರು.
ಮಾರ್ಚ್ 14ರವರೆಗೂ ಮಣಿರತ್ನಂ ಅವರ ಮನೆ ಹಾಗೂ ಕಚೇರಿಗೆ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದೆ. ತಮ್ಮ ಕಡಲ್ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಆದರೂ ವಿತಕರ ವಲಯದಿಂದ ಇಲ್ಲಸಲ್ಲದ ಆರೋಪಗಳು ಎದುರಾಗುತ್ತಿವೆ ಎಂದಿದ್ದಾರೆ ಮಣಿರತ್ನಂ. (ಏಜೆನ್ಸೀಸ್)