Don't Miss!
- News ಕಾಂಗ್ರೆಸ್ ಜನರಿಗೆ ಹೋಲ್ಸೆಲ್ ಮೋಸ ಮಾಡುತ್ತಿದೆ: ಮಾಜಿ ಸಿಎಂ
- Sports ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್ನಲ್ಲಿ ವಿರಾಟ್ ಕೊಹ್ಲಿಯ 50ನೇ ಏಕದಿನ ಶತಕ!
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತುಳಸಿಗೆ ಗಾಂಜಾ ಹೋಲಿಕೆ: ನಟಿ ನಿವೇದಿತಾ ವಿರುದ್ಧ ದೂರು
ಗಾಂಜಾ ಗಿಡವನ್ನು ತುಳಸಿಗೆ ಹೋಲಿಕೆ ಮಾಡಿ ಹೇಳಿಕೆ ನೀಡಿದ್ದ ನಟಿ ನಿವೇದಿತಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Recommended Video
ಗಾಂಜಾ ಗಿಡವು ವೈದ್ಯಕೀಯ ಗುಣಗಳನ್ನು ಹೊಂದಿದೆ. ಆಯುರ್ವೇಧದಲ್ಲಿ ಅದರ ಬಳಕೆ ಹೆಚ್ಚಿದೆ. ಅದೂ ಸಹ ತುಳಸಿಯಂತೆಯೇ ಪವಿತ್ರವಾದ ಗಿಡ ಎಂದು ನಟಿ ನಿವೇದಿತಾ ಹೇಳಿದ್ದರು.
ತುಳಸಿಯಂತೆ ಗಾಂಜಾ ಸಹ ಶ್ರೇಷ್ಠ: ನಟಿ ನಿವೇದಿತಾ
ನಿವೇದಿತಾ ಹೇಳಿಕೆ ವಿರೋಧಿಸಿ, ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಎ.ದೀಪಕ್ ಎಂಬುವರು ದೂರು ನೀಡಿದ್ದು, ಎಫ್ಐಆರ್ ಸಹ ದಾಖಲಾಗಿದೆ.
'ಪವಿತ್ರ ತುಳಸಿ ಗಿಡವನ್ನು ಗಾಂಜಾ ಗಿಡಕ್ಕೆ ಹೋಲಿಕೆ ಮಾಡಿರುವ ನಿವೇದಿತಾ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ' ಎಂದು ಎ.ದೀಪಕ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಗಾಂಜಾವು ಆಯುರ್ವೇಧದ ಪ್ರಮುಖ ಭಾಗ, ಅದರಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಜನಪದ, ವೇದಗಳಲ್ಲೂ ಗಾಂಜಾದ ಮಹತ್ವದ ಉಲ್ಲೇಖವಿದೆ ಎಂದು ನಟಿ ನಿವೇದಿತ ಹೇಳಿದ್ದರು.
ಕೊಕೇನ್, ಹೆರಾಯಿನ್ ಬಿಡಿ, ಗಾಂಜಾ ಕಾನೂನುಬದ್ಧಗೊಳಿಸಿ: ನಟಿ ನಿವೇದಿತಾ ಆಗ್ರಹ
ನಟಿ ನಿವೇದಿತಾ ಮಾತ್ರವಲ್ಲದೆ, ಯುವ ನಟ, ನಿರ್ದೇಶಕ ರಾಕೇಶ್ ಸಹ ಗಾಂಜಾ ಔಷಧೀಯ ಗುಣ ಹೊಂದಿದೆ. ಅದರ ಬಳಕೆಯನ್ನು ಕಾನೂನುಬದ್ಧಗೊಳಿಸಬೇಕು ಎಂದಿದ್ದರು.
ಗಾಂಜಾ ಮಾದಕ ವಸ್ತುವಲ್ಲ, ಕಾನೂನುಬದ್ಧಗೊಳಿಸಿ: ನಟ ರಾಕೇಶ್
ಕನ್ನಡ ಚಿತ್ರರಂಗದ ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ, ನಟಿ ರಾಗಿಣಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಾದಕ ವಸ್ತು ಬಳಕೆ, ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಗಿಣಿಯನ್ನು ಇಂದು ಸಂಜೆ ಬಂಧಿಸಲಾಗಿದೆ.