Don't Miss!
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಿನ ಬದಲಿಸಿದ ಕುರುಕ್ಷೇತ್ರ: ಚಿಂತೆಗೆ ಒಳಗಾದ ಕೋಮಲ್, ರಾಜ್ ಬಿ ಶೆಟ್ಟಿ.!
ಈ ವರ್ಷದ ವರಮಹಾಲಕ್ಷ್ಮಿ ಹಬ್ಬ ಸ್ಯಾಂಡಲ್ ವುಡ್ ಗೆ ಭಾರಿ ಟೆನ್ಷನ್ ಕೊಟ್ಟಿದೆ. ಹಬ್ಬದ ದಿನ ಯಾವ ಚಿತ್ರ ಬರಬಹುದು ಎಂಬ ಲೆಕ್ಕಾಚಾರ ಇನ್ನು ಸ್ಪಷ್ಟವಾಗಿಲ್ಲ. ಇದಕ್ಕೆಲ್ಲಾ ಕಾರಣ ಮುನಿರತ್ನ ಕುರುಕ್ಷೇತ್ರ.
ಮೊದಲು ಸುದೀಪ್ ಅಭಿನಯದ ಪೈಲ್ವಾನ್ ವರಮಹಾಲಕ್ಷ್ಮಿ ಹಬ್ಬ ಟಾರ್ಗೆಟ್ ಮಾಡಿದ್ರು. ಬಳಿಕ ಕುರುಕ್ಷೇತ್ರ ಚಿತ್ರವೂ ಅದೇ ದಿನ ಬರ್ತಿವಿ ಅಂದ್ರು. ಇಬ್ಬರು ದೊಡ್ಡ ಸ್ಟಾರ್ ಗಳು ಒಟ್ಟಿಗೆ ಬರ್ತಿರುವಾಗ ಬೇರೆ ನಟರ ಚಿತ್ರಗಳು ಸಾಮಾನ್ಯವಾಗಿ ಆ ದಿನಕ್ಕೆ ಬರಲ್ಲ. ಯಾವ ಚಿತ್ರವೂ ಬರುವ ಧೈರ್ಯ ಮಾಡಿರಲಿಲ್ಲ.
ಆಮೇಲೆ ಕುರುಕ್ಷೇತ್ರ ಆಗಸ್ಟ್ 2ಕ್ಕೆ ಹೋಯ್ತು. ಪೈಲ್ವಾನ್ ಸೆಪ್ಟೆಂಬರ್ ತಿಂಗಳಿಗೆ ಹೋಯ್ತು. ನಂತರ ವರಮಹಾಲಕ್ಷ್ಮಿ ಹಬ್ಬದ ದಿನ ಖಾಲಿಯಾಯಿತು. ಇದೇ ಸಮಯವನ್ನ ಕಾಯುತ್ತಿದ್ದ ಕೋಮಲ್ ನಟನೆಯ 'ಕೆಂಪೇಗೌಡ-2' ಮತ್ತು ರಾಜ್ ಬಿ ಶೆಟ್ಟಿ ನಟನೆಯ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಚಿತ್ರಗಳು ಆಗಸ್ಟ್ 9 ಲಾಕ್ ಮಾಡಿಕೊಂಡರು.
'ಕುರುಕ್ಷೇತ್ರ' ಮತ್ತೆ ಮುಂದಕ್ಕೆ : ದರ್ಶನ್ ಅಭಿಮಾನಿಗಳಲ್ಲಿ ಮುನಿರತ್ನ ಕ್ಷಮೆ
ಎಲ್ಲವೂ ಸರಿ ಹೋಯ್ತು ಎಂದುಕೊಳ್ಳುವಷ್ಟರಲ್ಲಿ ಕುರುಕ್ಷೇತ್ರ ಸಿನಿಮಾ ತಂಡ ಮತ್ತೆ ಶಾಕ್ ನೀಡಿದೆ. ಆಗಸ್ಟ್ 2ಕ್ಕೆ ಆಗಲ್ಲ, ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಗಸ್ಟ್ 9ಕ್ಕೆ ಬರುತ್ತೇವೆ ಎಂದು ಮತ್ತೆ ದಿನಾಂಕ ಬದಲಿಸಿಕೊಂಡಿದ್ದಾರಂತೆ.
ಈ ಬದಲಾವಣಿಯಿಂದ ಕೋಮಲ್ ಕುಮಾರ್ ಮತ್ತು ರಾಜ್ ಬಿ ಶೆಟ್ಟಿಯ ಚಿತ್ರಗಳು ಸಹಜವಾಗಿ ಚಿಂತೆಗೆ ಒಳಗಾಗಿದೆ. ಬಹುದೊಡ್ಡ ತಾರಬಳಗ ಹೊಂದಿರುವ ಕುರುಕ್ಷೇತ್ರದ ಮುಂದೆ ಬರುವುದರಿಂದ ನಷ್ಟವಾಗುವುದೇ ಹೆಚ್ಚು ಎಂಬ ಅಭಿಪ್ರಾಯವಿದೆ.
ವರಮಹಾಲಕ್ಷ್ಮಿ ಹಬ್ಬಕ್ಕೆ ಕೆಂಪೇಗೌಡನ ಜೊತೆ ಇನ್ನೊಂದು ನಿರೀಕ್ಷೆಯ ಚಿತ್ರ ಎಂಟ್ರಿ
ಸೋ, ಈ ಎರಡು ಚಿತ್ರಗಳು ಈಗಾಗಲೇ ರಿಲೀಸ್ ದಿನಾಂಕವನ್ನ ಘೋಷಣೆ ಮಾಡಿ ಆಗಿದೆ. ಎಲ್ಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗುತ್ತಿದೆ. ಹೀಗಿರುವಾಗ, ಕುರುಕ್ಷೇತ್ರ ಚಿತ್ರತಂಡದವರು ಆ ಡೇಟ್ ಈ ಡೇಟ್ ಅಂತ ಗೊಂದಲ ಮೂಡಿಸುತ್ತಿದ್ದಾರೆ. ಇದರಿಂದ ಇತರೆ ಚಿತ್ರಗಳಿಗೆ ಸಹಜವಾಗಿ ಕಷ್ಟವಾಗುತ್ತಿದೆ. ಒಂದು ವೇಳೆ ಕುರುಕ್ಷೇತ್ರ ಆಗಸ್ಟ್ 9ಕ್ಕೆ ಬಂದ್ರೆ ಈ ಎರಡು ಚಿತ್ರಗಳು ಮತ್ತೆ ಮುಂದಕ್ಕೆ ಹೋಗುತ್ತಾ ಅಥವಾ ಅದೇ ದಿನ ಬರುತ್ತಾ ಕಾದು ನೋಡಬೇಕಿದೆ.