Don't Miss!
- News Big Offer for Bengaluru Voters: ಮತದಾರರಿಗೆ ಗುಡ್ ನ್ಯೂಸ್.. ರಿಯಾಯಿತಿ ದರದಲ್ಲಿ ತಿಂಡಿ ವ್ಯವಸ್ಥೆ
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರವಿಶಂಕರ್ ಎದುರು ಮನೆಯಲ್ಲಿ ಕೊರೊನಾ: ಆತಂಕದಲ್ಲಿರುವ ಕುಟುಂಬಕ್ಕೆ ಧೈರ್ಯ ತುಂಬಿದ ಸುದೀಪ್, ಗಣೇಶ್, ಸೃಜನ್
ಕೊರೊನಾ ಆತಂಕ ಈಗ ಸ್ಯಾಂಡಲ್ ವುಡ್ ಕಲಾವಿದರನ್ನು ಕಾಡುತ್ತಿದೆ. ಸುದೀಪ್ ಮನೆಯ ಪಕ್ಕದ ಮನೆಯಲ್ಲಿಯೆ ಕೊರೊನಾ ಪಾಸಿಟಿವ್ ಬಂದಿದೆ. ಇನ್ನೂ ದರ್ಶನ್ ಪತ್ನಿ ವಿಜಯಲಕ್ಷ್ಮಿ, ನಟ ರವಿಶಂಕರ್ ಗೌಡ ವಾಸವಿರುವ ಅಪಾರ್ಟ್ ಮೆಂಟ್ ನಲ್ಲಿಯೂ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.
Recommended Video
ಹೊಸಕೆರೆಹಳ್ಳಿ ಸಮೀಪ ಇರುವು ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ನಲ್ಲಿ ನಟ ರವಿಶಂಕರ್ ಗೌಡ ಕುಟುಂಬ ವಾಸವಿದೆ. ರವಿಶಂಕರ್ ಇದ್ದ ಮನೆಯ ಎದುರು ಮನೆಯಲ್ಲಿಯೆ ಕೊರೊನಾ ಸೋಂಕು ಪತ್ತೆಯಾದ ಹಿನ್ನಲೆ ರವಿಶಂಕರ್ ಪತ್ನಿ, ಮಕ್ಕಳಲ್ಲಿ ಆತಂಕ ಮನೆಮಾಡಿದೆ. ಭಯದಲ್ಲಿರುವ ರವಿಶಂಕರ್ ಅವರಿಗೆ ಸ್ನೇಹಿತರು ಧೈರ್ಯ ತುಂಬಿದ್ದಾರೆ. ಮುಂದೆ ಓದಿ...
ಕನ್ನಡ ಕಿರುತೆರೆ ಪ್ರೇಕ್ಷಕರನ್ನ ಕ್ಷಮೆ ಕೇಳಿದ ನಟ ರವಿಶಂಕರ್ ಗೌಡ
ಮಕ್ಕಳನ್ನು ಕರೆದುಕೊಂಡ ಬಾ ಎಂದ ಸುದೀಪ್, ಗಣೇಶ್, ಸೃಜನ್
ನಟ ರವಿಶಂಕರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಎದುರು ಮನೆಗೆ ಕೊರೊನಾ ವಕ್ಕರಿಸಿದೆ, ಮಕ್ಕಳನ್ನು ದೇವರೆ ಕಾಪಾಡಬೇಕೆಂದು ಆತಂಕ ವ್ಯಕ್ತಪಡಿಸಿದ ರವಿಶಂಕರ್ ಗೆ ನಟ ಸುದೀಪ್, ಗಣೇಶ್, ಸೃಜನ್ ಲೋಕೇಶ್ ಮತ್ತು ರಘುರಾಮ್ ಧೈರ್ಯ ತುಂಬಿದ್ದಾರೆ. ಅಲ್ಲದೆ ಸುದೀಪ್ ಮತ್ತು ಗಣೇಶ್ ಮಕ್ಕಳನ್ನು ಕರೆದುಕೊಂಡು ಮನೆಗೆ ಬಾ ಎಂದು ಕರೆದಿದ್ದಾರೆ ಎಂದು ರವಿಶಂಕರ್ ಹೇಳಿದ್ದಾರೆ.
ಕನ್ನಡದ 'ಈ' ನಟಿ ಕಂಡ್ರೆ ರವಿಶಂಕರ್ ಗೆ ಸಿಕ್ಕಾಪಟ್ಟೆ ಇಷ್ಟ.!
ರವಿಶಂಕರ್ ಟ್ವೀಟ್
"ನನ್ನ ಅಪಾರ್ಟ್ ಮೆಂಟ್ ನಲ್ಲಿ ನನ್ನ ಎದುರು ಮನೆಗೆ ವಕ್ಕರಿಸಿತು ಕರೋನಾ. ನನ್ನ ಮಕ್ಕಳಿರುವ ಮನೆ ದೇವರೆ ಕಾಪಾಡಬೇಕು. ಬಾಗಿಲನ್ನು 14 ದಿನ ತೆರೆಯುವಂತಿಲ್ಲ Quarantin. ಸುದೀಪ , ಗಣಪ , ಸೃಜನ, ಮಕ್ಕಳನ್ನು ಕರೆದುಕೊಂಡು ನಮ್ಮನೆಗೆ ಬಾ ಅಂದರು. ಇದು ಗೆಳೆತನ ಅಂದ್ರೆ. ವಿಚಾರಿಸಿದ , ಸಂತೋಷ್ ಆನಂದ್, ರಘುರಾಮ್, ಧನ್ಯವಾದಗಳು" ಎಂದು ಟ್ವೀಟ್ ಮಾಡಿದ್ದಾರೆ.
ರವಿಶಂಕರ್ ಗೆ ಧೈರ್ಯ ತುಂಬಿದ ರಘುರಾಮ್
"ರವಿ ಜೀ ನೀವು ರಾಯರ ಭಕ್ತ ಅವರ ಆಶೀರ್ವಾದ ನಿಮ್ಮ ಮೇಲೆ ಇರುವವರೆಗೂ ನೀವು ಹಾಗು ನಿಮ್ಮ ಕುಟುಂಬ ಸದಾ ಸುರಕ್ಷಿತ" ಎಂದು ನಟ ಮತ್ತು ನಿರ್ದೇಶಕ ರಘುರಾಮ್ ಟ್ವೀಟ್ ಮಾಡಿ ರವಿಶಂಕರ್ ಗೌಡ ಅವರಿಗೆ ಧೈರ್ಯ ಹೇಳಿದ್ದಾರೆ.
ಧೈರ್ಯ ತುಂಬಿದ ಸ್ನೇಹಿತರಿಗೆ ಧನ್ಯವಾದ
"ಸಹೃದಯದ ಅಣ್ಣ ತಮ್ಮಂದಿರೆ, ನನ್ನ ಹಾಗೂ ನನ್ನ ಕುಟುಂಬದ ಮೇಲೆ ಅಭಿಮಾನವಿಟ್ಟು ನಿಮ್ಮ ಅಂತರಾತ್ಮದಿಂದ ಹರಸಿದ್ದೀರಿ, ನಿಮ್ಮೆಲ್ಲರ ಹೊಟ್ಟೆ ತಣ್ಣಗಿರಲಿ. ನಿಮ್ಮ ಕುಟುಂಬಕ್ಕೂ ದೇವರ ಆಶೀರ್ವಾದವಿರಲಿ. ನಮಸ್ಕಾರ" ಎಂದು ಧೈರ್ಯ ತುಂಬಿದ ಸೇಹ್ನಿತರಿಗೆ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.